ಆ್ಯಪ್ನಗರ

ಕೈ ಸೇರಿದ್ದು 8-10 ಕೋಟಿ ಅಷ್ಟೇ: ಕಾಲ್‌ಸೆಂಟರ್‌ ಶ್ಯಾಗಿ

ಕಳೆದೆರೆಡು ವರ್ಷಗಳಲ್ಲಿ ನನ್ನ ಕೈಗೆ ಸೇರಿದ್ದು 8-10 ಕೋಟಿ ರೂ. ಅಷ್ಟೇ ಎಂದು ಶ್ಯಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಟೈಮ್ಸ್ ಆಫ್ ಇಂಡಿಯಾ 9 Apr 2017, 12:59 pm
ಮುಂಬಯಿ: ಕಳೆದೆರೆಡು ವರ್ಷಗಳಲ್ಲಿ ನನ್ನ ಕೈಗೆ ಸೇರಿದ್ದು 8-10 ಕೋಟಿ ರೂ. ಅಷ್ಟೇ ಎಂದು ಮಹಾರಾಷ್ಟ್ರದ ಠಾಣೆಯಲ್ಲಿ ನಕಲಿ ಕಾಲ್‌ಸೆಂಟರ್‌ಗಳ ಮೂಲಕ ಅಮೆರಿಕನ್ನರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ್ದ ಪ್ರಕರಣದ ಮುಖ್ಯ ಆರೋಪಿ ಸಾಗರ್‌ ಠಕ್ಕರ್‌ (24) ಅಲಿಯಾಸ್‌ ಶ್ಯಾಗಿ ಪೊಲೀಸರಿಗೆ ತಿಳಿಸಿದ್ದಾನೆ.
Vijaya Karnataka Web made rs 8 10 crore but associates siphoned most cash claims con call mastermind
ಕೈ ಸೇರಿದ್ದು 8-10 ಕೋಟಿ ಅಷ್ಟೇ: ಕಾಲ್‌ಸೆಂಟರ್‌ ಶ್ಯಾಗಿ


ನಕಲಿ ಕಾಲ್‌ ಸೆಂಟರ್‌ ಜಾಲದಲ್ಲಿ ಸಹಕರಿಸಿದ್ದ ಜತೆಗಾರರೇ ಬಹುತೇಕ ಪಾಲನ್ನು ಕಸಿದುಕೊಂಡರು, ನನಗೆ ದಕ್ಕಿದ್ದು 8-10 ಕೋಟಿ ರೂ. ಅಷ್ಟೇ ಎಂಬುದು ಐಷಾರಾಮಿ ಜೀವನ ನಡೆಸುತ್ತಿದ್ದ ಶ್ಯಾಗಿಯ ಅಳಲು.

'ಅರಿಯದೇ ಮೋಸದ ಜಾಲಕ್ಕೆ ಸಿಲುಕಿ ಪರಿಸ್ಥಿತಿಯ ಕೈಗೊಂಬೆಯಾಗಿದ್ದೆ. ನಾನು ಅಮಾಯಕ,' ಎಂದು ಗೆಳತಿಯ ಜನ್ಮದಿನಕ್ಕೆ 2.5 ಕೋಟಿಯ ಐಷಾರಾಮಿ ಕಾರನ್ನು ಕೊಡುಗೆಯಾಗಿ ನೀಡಿದ್ದ ಶ್ಯಾಗಿ ಪೊಲೀಸರಿಗೆ ತಿಳಿಸಿದ್ದಾನೆ.

'ನಮ್ಮದು ಮರ್ಯಾದಸ್ಥರ ಕುಟುಂಬ, ನನ್ನ ಔದ್ಯೋಗಿಕ ಕೌಶಲವನ್ನು ಬಳಸಿಕೊಂಡ ಜತೆಗಾರರು, ಈ ಜಾಲದಲ್ಲಿ ಸಿಲುಕಿಸಿದರು. ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಅಪರಾಧ ಎಸಗಿದರು,' ಎಂದು ದೂರಿದ್ದಾನೆ.

'12ನೇ ವಯಸ್ಸಿನಿಂದ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದೆ. ನಂತರ ಆನ್‌ಲೈನ್‌ನಲ್ಲಿ ಕಾರು ಮಾರಾಟ ಮಾಡಲು ಶುರು ಮಾಡಿದೆ. ನಂತರ, ಸ್ನೇಹಿತರು ನಕಲಿ ಕಾಲ್‌ ಸೆಂಟರ್‌ ಜಾಲಕ್ಕೆ ನನ್ನನ್ನು ಪರಿಚಯಿಸಿದರು,'ಎಂದು ಹೇಳಿಕೊಂಡಿದ್ದಾನೆ.

ದುಬೈನಿಂದ ಗಡೀಪಾರು:

ಸಾವಿರಾರು ಅಮೆರಿಕರನ್ನು ಗುರಿಯಾಗಿಸಿಕೊಂಡಿದ್ದ ಪ್ರಕರಣದ ಮಾಸ್ಟರ್‌ ಮೈಂಡ್‌ ಶ್ಯಾಗಿಯನ್ನು ದುಬೈನಿಂದ ಗಡೀಪಾರು ಮಾಡಿಲಾಗಿತ್ತು. ಶುಕ್ರವಾರ ರಾತ್ರಿ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶ್ಯಾಗಿಯನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದರು.

ಆರೋಪ ಏನು ?

'ಇಂಟರ್ನಲ್‌ ರೆವೆನ್ಯೂ ಸರ್ವಿಸ್‌' ಹೆಸರಿನ ಕಾಲ್‌ಸೆಂಟರ್‌ಗಳಿಂದ ಕರೆ ಮಾಡುತ್ತಿರುವುದಾಗಿ ಸಾವಿರಾರು ಅಮೆರಿಕನ್ನರನ್ನು ನಂಬಿಸಿದ್ದ ಶ್ಯಾಗಿ, ಸುಮಾರು 2 ಸಾವಿರ ಕೋಟಿ ರೂ. ವಂಚನೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಸುಮಾರು 70 ಮಂದಿಯನ್ನು ಬಂಧಿಸಿದ್ದರು. ಈ ಕಾಲ್‌ಸೆಂಟರ್‌ಗಳ ಸುಮಾರು 700 ಮಂದಿ ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ನಕಲಿ ಜಾಲದ ಕೃತ್ಯ ಬೆಳಕಿಗೆ ಬಂದ ಬಳಿಕ ಸಾಗರ್‌ ಭೂಗತನಾಗಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ