ಆ್ಯಪ್ನಗರ

ಎರಡನೇ ಅತ್ಯುತ್ತಮ ಸಾಂಪ್ರದಾಯಿಕ ತಾಣ ಮಧುರೈ ಮೀನಾಕ್ಷಿ ದೇಗುಲ

ದೇಶದ ಪವಿತ್ರ ಸ್ಥಳಗಳಲ್ಲಿ ಒಂದಾದ ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಾಲಯ ದೇಶದಲ್ಲೇ ಅತ್ಯತ್ತಮವಾಗಿ ನಿರ್ವಹಿಸಲ್ಪಡುವ ಎರಡನೇ ದೇವಾಲಯ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಜಮ್ಮುವಿನ ವೈಷ್ಣೋದೇವಿ ದೇಗುಲ ಮೊದಲ ಸ್ಥಾನದಲ್ಲಿದೆ.

TIMESOFINDIA.COM 10 Sep 2019, 3:02 pm
ಮಧುರೈ: ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸುಂದರೇಶ್ವರ ದೇವಾಲಯವು ದೇಶದಲ್ಲೇ 2ನೇ ಅತ್ಯತ್ತಮವಾಗಿ ನಿರ್ವಹಿಸಲ್ಪಡುವ ಸಾಂಪ್ರದಾಯಿಕ ಸ್ಥಳವಾಗಿ ಆಯ್ಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇಗುಲವು ದೇಶದಲ್ಲೇ ಅತ್ಯತ್ತಮ ಸಾಂಪ್ರದಾಯ ತಾಣವಾಗಿ ಗುರುತಿಸಲ್ಪಟ್ಟಿದೆ.
Vijaya Karnataka Web madhurai meenakshi


'2019ರ ಸ್ವಚ್ಛ ಸಾಂಪ್ರದಾಯಿಕ ಕಾರ್ಯಕ್ರಮದಡಿ ಜಲ ಶಕ್ತಿ ಅಭಿಯಾನ ಸಚಿವಾಲಯವು ಮೀನಾಕ್ಷಿ ದೇವಾಲಯವನ್ನು ಅತ್ಯಂತ ಸ್ವಚ್ಛ ಸಾಂಪ್ರದಾಯಿಕ ತಾಣವಾಗಿ ಆಯ್ಕೆ ಮಾಡಿದೆ. ದೇವಾಲಯದ ಆವರಣವನ್ನು ಸ್ವಚ್ಛವಾಗಿ ಇಟ್ಟಿರುವುದಕ್ಕೆ ಮಧುರೈ ಪಾಲಿಕೆಗೂ ಪ್ರಶಸ್ತಿ ನೀಡಲಾಗಿದೆ. 2017ರಲ್ಲಿ ಈ ದೇವಾಲಯ ದೇಶದಲ್ಲೇ ಅತ್ಯುತ್ತಮ ಸಾಂಪ್ರದಾಯಿಕ ಸ್ಥಳವಾಗಿ ಆಯ್ಕೆಯಾಗಿತ್ತು.

ಜಲಶಕ್ತಿ ಮಂತ್ರಿ ಗಜೇಂದ್ರ ಸಿಂಗ್‌ ಶೆಖಾವತ್, ಹಾಗೂ ಜಲಶಕ್ತಿ ಅಭಿಯಾನದ ರಾಜ್ಯ ಮಂತ್ರಿ ಲಾಲ್ ಕಟಾರಿಯಾ ಅವರಿಂದ ಮಧುರೈ ಪಾಲಿಕೆಯ ಆಯುಕ್ತ ಎಸ್‌. ವಿಶಾಖನ್‌ ಇತ್ತೀಚೆಗೆ ಪ್ರಶಸ್ತಿ ಸ್ವೀಕರಿಸಿದರು.

ದೇವಾಲಯ ಮತ್ತು ದೇವಾಲಯದ ಆವರಣವನ್ನು ಖಾಸಗಿ ಮತ್ತು ಸಾರ್ವಜನಿಕ ಪಾಲುದಾರಿಕೆ ಕಂಪನಿಗಳ 'ಕಾಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ' (ಸಿಎಸ್‌ಆರ್‌) ನಿರ್ವಹಣೆ ಮಾಡಲಾಗಿದೆ. ದೇವಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪಾಲಿಕೆಯು ಇತ್ತೀಚಿನ ವರ್ಷಗಳಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದಲ್ಲಿ 25 ಇ-ಶೌಚಾಲಯಗಳು, ವಿಶೇ ಷ ಕಸದ ಬುಟ್ಟಿಗಳನ್ನು ಇರಿಸಲಾಗಿದೆ. ದೇವಾಲಯದ ಸುತ್ತ ಪ್ಲಾಸ್ಟಿಕ್‌ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. 15 ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ. ದೇವಾಲಯದ ಆವರಣದಲ್ಲಿ ಭಕ್ತರ ಓಡಾಟಕ್ಕಾಗಿ 5 ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆಯೂ ಇದೆ.

ದೇವಾಲಯ ಸ್ವಚ್ಛತಾ ಕಾರ್ಯಕ್ಕೆ ಬಳಸುವ ಸಲಕರಣೆಗಳು ಕೂಡ ಅತ್ಯಾಧುನಿಕವಾಗಿವೆ. ದೇವಾಲಯದ ಆವರಣದಲ್ಲಿ ಉಗುಳಿದರೆ ಐವತ್ತು ರುಪಾಯಿ ದಂಡ ವಿಧಿಸುವ ನಿಯಮವೂ ಜಾರಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ