ಆ್ಯಪ್ನಗರ

ಮಕ್ಕಳು ಮೊಟ್ಟೆ ತಿಂದರೆ ಮ್ಯಾನ್‌ ಈಟರ್ಸ್‌ ಆಗುತ್ತಾರೆ!! ಬಿಜೆಪಿ ನಾಯಕನ ಹೇಳಿಕೆ!

ಅಂಗನವಾಡಿ ಮಕ್ಕಳ ಬಿಸಿಯೂಟ ಯೋಜನೆಯಲ್ಲಿ ಮೊಟ್ಟೆ ಸೇರಿಸುವ ಅಂಶಕ್ಕೆ ಮಧ್ಯಪ್ರದೇಶ ಬಿಜೆಪಿ ವಿಪಕ್ಷ ನಾಯಕ ವಿರೋಧ ವ್ಯಕ್ತಪಡಿಸಿದ್ದಾರೆ. ಮಕ್ಕಳಿಗೆ ಮೊಟ್ಟೆ ನೀಡಿದರೆ ದೊಡ್ಡವರಾದ ಬಳಿಕ ಮನುಷ್ಯರನ್ನೇ ತಿನ್ನುವ ಮೃಗವಾಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

Agencies 6 Nov 2019, 4:08 pm
ಸಣ್ಣ ಮಕ್ಕಳು ಮೊಟ್ಟೆ ತಿಂದರೆ ದೊಡ್ಡವರಾದ ಬಳಿಕ ಮನುಷ್ಯರನ್ನೇ ತಿನ್ನುವಂತಹ ಮ್ಯಾನ್‌ ಈಟರ್ಸ್‌ಗಳಾಗುತ್ತಾರೆ...
Vijaya Karnataka Web gopal

ಹೀಗೆಂದು ಮಧ್ಯಪ್ರದೇಶದ ಮಾಜಿ ಸಚಿವ, ವಿಧಾನಸಭೆಯ ವಿಪಕ್ಷ ನಾಯಕ ಗೋಪಾಲ್‌ ಭಾರ್ಗವ್‌ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಅಂಗನವಾಡಿ ಮಕ್ಕಳಿಗೆ ಸರಕಾರದಿಂದ ನೀಡುವ ಬಿಸಿಯೂಟದಲ್ಲಿ ಮೊಟ್ಟೆಯನ್ನೂ ನೀಡುವ ಸರಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಅಪೌಷ್ಟಿಕತೆಯಿಂದ ನರಳುವ ಸರಕಾರದಿಂದ ಏನನ್ನು ಎದುರು ನೋಡಿತ್ತೀರಿ? ಇಂದು ಮಕ್ಕಳಿಗೆ ಅವರು ಮೊಟ್ಟೆ ನೀಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾಳೆ ಚಿಕನ್‌, ಬಳಿಕ ಕುರಿ.... ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಮಾಂಸ ಉಣಿಸಿದರೆ, ದೊಡ್ಡವರಾದ ಬಳಿಕ ಅವರು ಮನುಷ್ಯರನ್ನೇ ತಿನ್ನುವ ಮೃಗಗಳಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಭೋಪಾಲ್ ಹನಿಟ್ರ್ಯಾಪ್‌ ತನಿಖಾಧಿಕಾರಿಗಳೇ ಕಂಗಾಲು!

ಈ ಕುರಿತು ಕಾಂಗ್ರೆಸ್‌ ನಾಯಕಿ ಶೋಭಾ ಓಝಾ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುತ್ತಿದ್ದಾರೆ. ಅಲ್ಲಿನ ಮಕ್ಕಳೂ ಮನುಷ್ಯರನ್ನೇ ತಿನ್ನುವವಾರಿ ಬದಲಾಗುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಭಾರ್ಗವ್‌ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಶೋಭಾ, ಭಾರ್ಗವ್‌ ಅವರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಸಬೇಕು ಎಂದು ಆಗ್ರಹಿಸಿದ್ದಾರೆ.

ಕಮಲ್‌ನಾಥ್ ಸರಕಾರ ಉರುಳಿಸಲು ದಿಗ್ವಿಜಯ್ ಸಂಚು:

ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ಮೊಟ್ಟೆ ನೀಡಲು ಸರಕಾರ ಅನುಮತಿ ನೀಡಿರಲಿಲ್ಲ. ಮೊಟ್ಟೆ ಬದಲಾಗಿ ಇನ್ನಿತರ ಆಹಾರವನ್ನು ನೀಡುವುದಾಗಿ ಅಂದಿನ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ