ಬರೆದುಕೊಟ್ಟ ಭಾಷಣ ಓದಲಾಗದೆ ಪರದಾಡಿದ ಕೈ ಸಚಿವೆ
ಕಮಲನಾಥ್ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಇಮರ್ತಿ ದೇವಿ ಗ್ವಾಲಿಯರ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಬಂದಿದ್ದರು. ಧ್ವಜಾರೋಹಣದ ಬಳಿಕ ಭಾಷಣ ಮಾಡಲು ನಿಂತ ಅವರು ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಲು ತಡಬಡಾಯಿಸಿದರು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಜಿಲ್ಲಾಧಿಕಾರಿ ಅವರ ಸಹಾಯಕ್ಕೆ ಬಂದಾಗ ಅವರಿಗೆ ಭಾಷಣ ಓದಲು ಹೇಳಿದ ಅವರು ವೇದಿಕೆಯಿಂದ ಕೆಳಕ್ಕಿಳಿದು ಹೋದರು.
Navbharat Times 26 Jan 2019, 3:43 pm
ಹೈಲೈಟ್ಸ್:
- ಕಮಲನಾಥ್ ಸರಕಾರದ ಸಚಿವೆಗೆ ಭಾಷಣ ಓದಲಾಗಲಿಲ್ಲ
- ಗ್ವಾಲಿಯರ್ ಜಿಲ್ಲಾಧಿಕಾರಿಯಿಂದ ಭಾಷಣ ಓದಿಸಿದ ಸಚಿವೆ
- ಅನಾರೋಗ್ಯದ ನೆಪ ಹೇಳಿದ ಸಚಿವೆ
- ಜ್ಯೋತಿರಾಧಿತ್ಯ ಸಿಂಧಿಯಾ ದೇವರು ಎಂದಿದ್ದ ಸಚಿವೆ
ಗ್ವಾಲಿಯರ್: ಕಾಂಗ್ರೆಸ್ ನೇತೃತ್ವದ ಸರಕಾರದ ಸಚಿವೆಯೊಬ್ಬರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣವನ್ನು ಓದಲಾಗದೆ ಪರದಾಡಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ. ಕಮಲನಾಥ್ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಇಮರ್ತಿ ದೇವಿ ಗ್ವಾಲಿಯರ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಬಂದಿದ್ದರು. ಧ್ವಜಾರೋಹಣದ ಬಳಿಕ ಭಾಷಣ ಮಾಡಲು ನಿಂತ ಅವರು ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಲು ತಡಬಡಾಯಿಸಿದರು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಜಿಲ್ಲಾಧಿಕಾರಿ ಅವರ ಸಹಾಯಕ್ಕೆ ಬಂದಾಗ ಅವರಿಗೆ ಭಾಷಣ ಓದಲು ಹೇಳಿದ ಅವರು ವೇದಿಕೆಯಿಂದ ಕೆಳಕ್ಕಿಳಿದು ಹೋದರು.
ಅನಾರೋಗ್ಯದ ನೆಪ
ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಸಚಿವೆ ಅನೇಕ ದಿನಗಳಿಂದ ಅಸ್ವಸ್ಥಳಾಗಿದ್ದೇನೆ. ನೀವು ಬೇಕಾದರೆ ವೈದ್ಯರನ್ನು ಕೇಳಬಹುದು ಎನ್ನುವುದರ ಮೂಲಕ ಅನಾರೋಗ್ಯದಿಂದಾಗಿ ಭಾಷಣವನ್ನು ಓದಲಾಗಲಿಲ್ಲ ಎಂದು ಬಿಟ್ಟರು.
ದ್ವಿತೀಯ ಪಿಯುಸಿ ಶಿಕ್ಷಣ
ಸಚಿವೆ ದ್ವಿತೀಯ ಪಿಯುಸಿವರೆಗೆ ಓದಿದ್ದಾರೆ ಎಂಬುದು ಇಲ್ಲಿ ಗಮನಿಸಕ್ಕ ಸಂಗತಿ.
ಜ್ಯೋತಿರಾಧಿತ್ಯ ಸಿಂಧಿಯಾ ದೇವರು
ಕಮಲನಾಥ್ ಸರಕಾರದಲ್ಲಿ ಇಬ್ಬರು ಮಹಿಳಾ ಸಚಿವೆಯರಿದ್ದು ಅವರಲಲಿ ಇಮರ್ತಿ ದೇವಿ ಕೂಡ ಒಬ್ಬರು. ಡಬರಾ ಕ್ಷೇತ್ರದ ಶಾಸಕಿಯಾಗಿರುವ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಯುವ ನೇತಾರ ಮತ್ತು ಮಾಜಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ನಾಯಕರಷ್ಟೇ ಅಲ್ಲ, ದೇವರು. ನಾನವರನ್ನು ಪೂಜಿಸುತ್ತೇನೆ ಎಂದಿದ್ದರು.
ಅನಾರೋಗ್ಯದ ನೆಪ
ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ ಸಚಿವೆ ಅನೇಕ ದಿನಗಳಿಂದ ಅಸ್ವಸ್ಥಳಾಗಿದ್ದೇನೆ. ನೀವು ಬೇಕಾದರೆ ವೈದ್ಯರನ್ನು ಕೇಳಬಹುದು ಎನ್ನುವುದರ ಮೂಲಕ ಅನಾರೋಗ್ಯದಿಂದಾಗಿ ಭಾಷಣವನ್ನು ಓದಲಾಗಲಿಲ್ಲ ಎಂದು ಬಿಟ್ಟರು.
ದ್ವಿತೀಯ ಪಿಯುಸಿ ಶಿಕ್ಷಣ
ಸಚಿವೆ ದ್ವಿತೀಯ ಪಿಯುಸಿವರೆಗೆ ಓದಿದ್ದಾರೆ ಎಂಬುದು ಇಲ್ಲಿ ಗಮನಿಸಕ್ಕ ಸಂಗತಿ.
ಜ್ಯೋತಿರಾಧಿತ್ಯ ಸಿಂಧಿಯಾ ದೇವರು
ಕಮಲನಾಥ್ ಸರಕಾರದಲ್ಲಿ ಇಬ್ಬರು ಮಹಿಳಾ ಸಚಿವೆಯರಿದ್ದು ಅವರಲಲಿ ಇಮರ್ತಿ ದೇವಿ ಕೂಡ ಒಬ್ಬರು. ಡಬರಾ ಕ್ಷೇತ್ರದ ಶಾಸಕಿಯಾಗಿರುವ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಯುವ ನೇತಾರ ಮತ್ತು ಮಾಜಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ನಾಯಕರಷ್ಟೇ ಅಲ್ಲ, ದೇವರು. ನಾನವರನ್ನು ಪೂಜಿಸುತ್ತೇನೆ ಎಂದಿದ್ದರು.