ಆ್ಯಪ್ನಗರ

18 ಶಾಸಕರ ಅನರ್ಹತೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್; ಸದ್ಯಕ್ಕೆ ಎಐಎಡಿಎಂಕೆ ಸರಕಾರ ಸೇಫ್

ಇದೀಗ ಅನರ್ಹಗೊಂಡಿರುವ 18 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಆಡಳಿತಾರೂಢ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ.

TIMESOFINDIA.COM 25 Oct 2018, 11:57 am
ಚೆನ್ನೈ: ಪಕ್ಷಾಂತರ ವಿರೋಧಿ ಕಾಯಿದೆ ಅನ್ವಯ ಎಐಎಡಿಎಂಕೆಯ 18 ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ತಮಿಳುನಾಡು ವಿಧಾನಸಭಾ ಸ್ಪೀಕರ್ ಪಿ ಧನ್‌ಪಾಲ್ ಹೊರಡಿಸಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಗುರುವಾರ ಪುರಸ್ಕರಿಸಿದೆ.
Vijaya Karnataka Web madras-hc


ಸುಪ್ರೀಂಕೋರ್ಟ್ ನಿಯುಕ್ತ ನ್ಯಾಯಮೂರ್ತಿ ಎಂ ಸತ್ಯನಾರಾಯಣ ತೀರ್ಪು ನೀಡಿದ್ದು ಸದ್ಯಕ್ಕೆ ಆಡಳಿತಾರೂಢ ಎಐಎಡಿಎಂಕೆ ಸರಕಾರ ಸುರಕ್ಷಿತವಾಗಿದೆ. ತೀರ್ಪಿನ ಹಿನ್ನೆಲೆಯಲ್ಲಿ ಒಂದು ವೇಳೆ ವಿಶ್ವಾಸಮತ ಯಾಚಿಸಿದರೆ 107 ಮತಗಳ ಮೂಲಕ ಎಐಎಡಿಎಂಕೆ ಸರಕಾರ ಉಳಿಯಲಿದೆ.

ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಸರಕಾರಕ್ಕೆ 109 ಎಐಎಡಿಎಂಖೆ ಶಾಸಕರ ಬಹುಮತ ಇದೆ. ಒಂದು ವೇಳೆ ಮತದಾನದಲ್ಲಿ ಸಮಬಲ ಬಂದರೆ ಆಡಳಿತಾರೂಢ ಪಕ್ಷ ಸ್ಪೀಕರ್ ಬೆಂಬಲ ಪಡೆಯಲಿದೆ. ಹಾಗಾಗಿ ಸದ್ಯಕ್ಕೆ ಎಐಎಡಿಎಂಕೆ ಸರಕಾರಕ್ಕೇನು ತೊಂದರೆ ಇಲ್ಲ.

ಅನರ್ಹಗೊಂಡ ಶಾಸಕರು ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ. ದಿನಕರನ್ ಬಣದಲ್ಲಿ ಗುರುತಿಸಿಕೊಂಡಿದ್ದ ಎಐಎಡಿಎಂಕೆಯ 18 ಶಾಸಕರನ್ನು ಒಂದು ವರ್ಷದ ಹಿಂದೆಯೇ ಅನರ್ಹಗೊಳಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ ಸುಂದರ್ ನಿಲುವು ತಾಳಿದ್ದ ಕಾರಣ ಮೂರನೇ ನ್ಯಾಯಮೂರ್ತಿಯಾಗಿ ಎಂ ಸತ್ಯನಾರಾಯಣ ಅವರನ್ನು ನೇಮಕ ಮಾಡಲಾಗಿತ್ತು. ಇದೀಗ ಅನರ್ಹಗೊಂಡಿರುವ 18 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಆಡಳಿತಾರೂಢ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ