ಆ್ಯಪ್ನಗರ

ಅಪ್ಪನ ದೃಷ್ಕೃತ್ಯಕ್ಕೆ ಮಗನ ವಿರೋಧ: ಖಿನ್ನತೆಗೆ ಜಾರಿದ ದಾವೂದ್ ಇಬ್ರಾಹಿಂ

ತೆಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೌಟುಂಬಿಕ ಕಲಹಗಳಿಗೆ ರೋಸಿ ಹೋಗಿದ್ದು, ಖಿನ್ನತೆಗೆ ಒಳಗಾಗಿದ್ದಾನೆ, ಎಂದು ಹೇಳಲಾಗುತ್ತಿದೆ.

Vijaya Karnataka Web 26 Nov 2017, 12:19 pm
ಮುಂಬೈ: ತೆಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೌಟುಂಬಿಕ ಕಲಹಗಳಿಗೆ ರೋಸಿ ಹೋಗಿದ್ದು, ಖಿನ್ನತೆಗೆ ಒಳಗಾಗಿದ್ದಾನೆ, ಎಂದು ಹೇಳಲಾಗುತ್ತಿದೆ.
Vijaya Karnataka Web mafia don dawood depressed over son becoming maulana
ಅಪ್ಪನ ದೃಷ್ಕೃತ್ಯಕ್ಕೆ ಮಗನ ವಿರೋಧ: ಖಿನ್ನತೆಗೆ ಜಾರಿದ ದಾವೂದ್ ಇಬ್ರಾಹಿಂ


ಕೈಯಲ್ಲಿ ದುಡ್ಡು, ತೋಳ್ಬಲ, ಹಣವಿದ್ದರೂ, ಕೌಟುಂಬಿಕ ಕಲಹವನ್ನು ಬಗೆಹರಿಸಲಾಗುತ್ತಿಲ್ಲವಂತೆ ದಾವೂದ್‌ಗೆ. ತಂದೆಯ ವ್ಯವಹಾರವನ್ನು ಮಗ ಮುಂದುವರಿಸಲು ಆಸಕ್ತಿ ತೋರದೇ, ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಒಲವು ತೋರುತ್ತಿದ್ದಾನೆ. ಕುಟಂಬದ ವ್ಯವಹಾರ ಮುಂದುವರಿಸಲು ಇಲ್ಲದೇ, ಕೌಟುಂಬಿಕ ಕಲಹ ಭುಗಿಲೇಳುತ್ತಿದೆ, ಎನ್ನಲಾಗುತ್ತಿದೆ.

31 ವರ್ಷದ ಏಕ ಮಾತ್ರ ಪುತ್ರ ಮಗ ಮೋಯಿನ್ ಡಿ ಕಸ್ಕರ್ ತಂದೆ ಮಾಡಿರುವ ಕಾನೂನು ಬಾಹಿರ ಕುಕೃತ್ಯಗಳನ್ನು ವಿರೋಧಿಸುತ್ತಿದ್ದು, ಇಡೀ ಕುಟುಂಬಕ್ಕೆ ಅಪ್ಪನ ದುಷ್ಕೃತ್ಯಗಳು ಕಳಂಕವೆಂದು ಹೇಳುತ್ತಿದ್ದಾನೆ. ಈ ಕಾರಣಗಳಿಂದ ಈ ಕೆಟ್ಟ ಹೆಸರನ್ನು ಹೋಗಲಾಡಿಸಲು, ಧಾರ್ಮಿಕ ಬೋಧನೆ ಮಾಡಲು ಇಚ್ಛಿಸುತ್ತಿದ್ದಾನೆಂದು, ಪೊಲೀಸ್ ಮೂಲಗಳು ತಿಳಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಥಾಣೆಯ ಎಇಸಿ‌ಗೆ ಸಿಕ್ಕಿಬಿದ್ದ ದಾವೂದ್ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್‌ ವಿಚಾರಣೆ ವೇಳೆ ಈ ವಿಷಯ ಬಹಿರಂಗಗೊಂಡಿದ್ದು, ಇನ್ನು ಕೆಲವು ಕೌಟುಂಬಿಕ ಭಿನ್ನತೆಗಳು ಹಾಗೂ ವಯೋಸಹಜ ಅನಾರೋಗ್ಯಗಿಂದ ದಾವೂದ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆಂದು ಹೇಳಲಾಗಿದೆ.

6,236 ಶ್ಲೋಕಗಳಿರುವ ಖುರಾನ್‌ನನ್ನು ಮೋಯಿನ್ ಕಂಠಪಾಠ ಮಾಡಿದ್ದು, ಮೌಲಾನಾನಾಗಿ ಅಪಾರ ಗೌರವ ಗಳಿಸಿದ್ದಾನೆಂದು ಹೇಳಲಾಗುತ್ತಿದೆ.

ಮೋಯಿನ್ 2011ರಲ್ಲಿ ಪಾಕಿಸ್ತಾನ ಮತ್ತು ಬ್ರಿಟನ್‌ನಲ್ಲಿ ವ್ಯವಹಾರ ಹೊಂದಿರುವ ಉದ್ಯಮಿ ಪುತ್ರಿಯನ್ನು ವರಿಸಿದ್ದಾನೆ. ಮೋಯಿನ್ ಸಹೋದರಿ ಮಹ್ರುಕ್ 2006ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಜಾವೇದ್ ಮಿಯಾಂದದ್ ಪುತ್ರನನ್ನು ವರಿಸಿದರೆ, ಮತ್ತೊಬ್ಬ ದಾವೂದ್ ಪುತ್ರಿ ಮಹ್ರೀನ್, ಅಮೆರಿಕದ ಮೂಲದ ಉದ್ಯಮಿಯನ್ನು ವರಿಸಿದ್ದಾಳೆ.

ಈ ಮೊದಲು ಕಸ್ಕರ್‌, ದಾವೂದ್ ಆರೋಗ್ಯವಾಗಿದ್ದಾನೆಂದು ಹೇಳಿಕೆ ನೀಡಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ