ಆ್ಯಪ್ನಗರ

ಮಹಾಘಟಬಂಧನ್‌ ವಿಪತ್ತಿನ ಹಾದಿ

ಪ್ರಧಾನಿ ಮೋದಿ ಅವರನ್ನು ಸೋಲಿಸುವುದೊಂದೇ ಮಹಾಘಟಬಂಧನ್‌ ಗುರಿಯಾಗಿದೆ. ದೇಶದ ಅಭಿವೃದ್ಧಿಯ ಬಗ್ಗೆ ಪ್ರತಿಪಕ್ಷಗಳಿಗೆ ಯಾವ ಕಾರ್ಯಸೂಚಿಯೂ ಇಲ್ಲಎಂದು ಅರುಣ್‌ ಜೇಟ್ಲಿ ಟೀಕಿಸಿದ್ದಾರೆ.

Vijaya Karnataka 18 Mar 2019, 5:00 am
ಹೊಸದಿಲ್ಲಿ: ಪ್ರತಿಪಕ್ಷಗಳು ರಚಿಸಲು ಹೊರಟಿರುವ ಉದ್ದೇಶಿತ ಮಹಾಘಟ್‌ಬಂಧನ್‌ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ ಅದೊಂದು 'ವಿಪತ್ತಿನ ಹಾದಿ' ಎಂದು ಬಣ್ಣಿಸಿದ್ದಾರೆ.
Vijaya Karnataka Web arun jaitley


ತಮ್ಮ ಬ್ಲಾಗ್‌ನಲ್ಲಿ 'ಅಜೆಂಡಾ 2019' ಶೀರ್ಷಿಕೆಯ ಲೇಖನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಜೇಟ್ಲಿ, ಜನರು ಸುಸ್ಥಿರ ಸರಕಾರವನ್ನು ಆರಿಸುತ್ತಾರೆ ಮತ್ತು ಮಹಾಕಲಬೆರಕೆಯ 'ಮಹಾಘಟಬಂಧನ್‌' ಅನ್ನು ತಿರಸ್ಕರಿಸುತ್ತಾರೆ ಎಂದು ಪುನರುಚ್ಛರಿಸಿದ್ದಾರೆ.

''ಪ್ರಧಾನಿ ಮೋದಿ ಅವರನ್ನು ಸೋಲಿಸುವುದೊಂದೇ ಮಹಾಘಟಬಂಧನ್‌ ಗುರಿಯಾಗಿದೆ. ದೇಶದ ಅಭಿವೃದ್ಧಿಯ ಬಗ್ಗೆ ಪ್ರತಿಪಕ್ಷಗಳಿಗೆ ಯಾವ ಕಾರ್ಯಸೂಚಿಯೂ ಇಲ್ಲ,'' ಎಂದು ಅವರು ಟೀಕಿಸಿದ್ದಾರೆ.

''ಬಿಜೆಪಿ ನೇತೃತ್ವದ ಎನ್‌ಡಿಎನಲ್ಲಿ ಪ್ರಧಾನಿ ಅವರ ಮಾತೇ ಅಂತಿಮ. ಅವರ ನಾಯಕತ್ವಕ್ಕೆ ಸರ್ವರ ಸಮ್ಮತಿಯಿದೆ. ಆದರೆ, ಪ್ರತಿಪಕ್ಷಗಳು ನಾಯಕನನ್ನೇ ಅಂತಿಮಗೊಳಿಸಿಲ್ಲ,'' ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ