ಆ್ಯಪ್ನಗರ

ಚುನಾವಣೆ ಹೊಸ್ತಿಲಲ್ಲಿ ಬರದ ಬವಣೆ

ಮುಂಗಾರು ವಿಳಂಬದೊಂದಿಗೆ ರಾಜ್ಯದಲ್ಲಿ ಬರಗಾಲದ ಛಾಯೆ ಕೂಡ ಇನ್ನಷ್ಟು ಢಾಳಾಗಿ ಆವರಿಸಿದೆ. ಇದರ ಪರಿಣಾಮ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಜತೆಗೆ ಸಂಕಷ್ಟ ಬಾಧಿತ ರೈತರ ಆತ್ಮಹತ್ಯೆ ಪ್ರಕರಣಗಳು ನಿಯಂತ್ರಣಕ್ಕೆ ಬಾರದೇ ಇರುವುದು ತೀವ್ರ ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿದೆ.

Agencies 23 Jun 2019, 5:00 am
ಮುಂಬಯಿ: ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕುವರೆ ವರ್ಷಗಳಿಂದ ಸುಸೂತ್ರ ಅಧಿಕಾರ ನಡೆಸಿಕೊಂಡು ಬಂದ ದೇವೇಂದ್ರ ಫಡ್ನವಿಸ್‌ ಸರಕಾರಕ್ಕೆ ಚುನಾವಣೆ ಹೊಸ್ತಿಲಲ್ಲಿ ಈಗ ಹೆಚ್ಚಿರುವ ರೈತರ ಆತ್ಮಹತ್ಯೆ ಪ್ರಕರಣಗಳು ದೊಡ್ಡ ಸವಾಲನ್ನೇ ತಂದೊಡ್ಡಿವೆ.
Vijaya Karnataka Web maharashtra is witnessing one of the worst droughts
ಚುನಾವಣೆ ಹೊಸ್ತಿಲಲ್ಲಿ ಬರದ ಬವಣೆ


ಮುಂಗಾರು ವಿಳಂಬದೊಂದಿಗೆ ರಾಜ್ಯದಲ್ಲಿ ಬರಗಾಲದ ಛಾಯೆ ಕೂಡ ಇನ್ನಷ್ಟು ಢಾಳಾಗಿ ಆವರಿಸಿದೆ. ಇದರ ಪರಿಣಾಮ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಜತೆಗೆ ಸಂಕಷ್ಟ ಬಾಧಿತ ರೈತರ ಆತ್ಮಹತ್ಯೆ ಪ್ರಕರಣಗಳು ನಿಯಂತ್ರಣಕ್ಕೆ ಬಾರದೇ ಇರುವುದು ತೀವ್ರ ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿದೆ.

ಡಿಸೆಂಬರ್‌ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬಿಜೆಪಿ-ಶಿವಸೇನಾ ಮೈತ್ರಿ ಸರಕಾರವು ಸಣ್ಣಪುಟ್ಟ ವೈರುಧ್ಯಗಳ ನಡುವೆಯೂ ಹೊಂದಾಣಿಕೆ ಮಾಡಿಕೊಂಡು ಬಂದಿದೆ. ಆದರೆ, ರೈತರ ವಿಷಯದಲ್ಲಿ ಎದುರಾಗಿರುವ ಈ ಬಿಕ್ಕಟ್ಟು ಮಾತ್ರ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಕಳೆದ ಆರು ತಿಂಗಳಿಂದ ಈಚೆಗೆ ರಾಜ್ಯದಲ್ಲಿ 610 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿರಂತರ ಕೈಕೊಡುತ್ತ ಬಂದಿರುವ ಮಳೆ ಹಾಗೂ ನೀರಿನ ಅಭಾವದಿಂದ ರೈತಾಪಿ ಸಮುದಾಯ ತತ್ತರಿಸಿದೆ. ಬಹುತೇಕ ರೈತರ ಆತ್ಮಹತ್ಯೆಗಳು ಫಸಲಿನ ವೈಫಲ್ಯದಿಂದಲೇ ಆಗಿವೆ. ಇದರ ಭೀಕರತೆ ಅರಿತ ಫಡ್ನವಿಸ್‌ ಸರಕಾರ, ಇತ್ತೀಚಿನ ಬಜೆಟ್‌ನಲ್ಲಿ ಕೃಷಿ ಬಿಕ್ಕಟ್ಟಿನ ಇತ್ಯರ್ಥಕ್ಕೆ ಭಾರಿ ಮೊತ್ತವನ್ನು ಮೀಸಲಿರಿಸಿದೆ. ಬೃಹತ್‌ ನೀರಾವರಿ ಯೋಜನೆಗಳ ಮೇಲೆ 12,000 ಕೋಟಿ ರೂ. ಮತ್ತು ಸಣ್ಣ ನೀರಾವರಿಗೆ 350 ಕೋಟಿ ರೂ. ವ್ಯಯ ಮಾಡುವ ಘೋಷಣೆ ಮಾಡಿದೆ.

ಆದರೆ, ಸರಕಾರ ನಡೆಸಿರುವ ಈ ಕಸರತ್ತಿಗೆ ವರುಣನ ಕೃಪೆ ಇಲ್ಲದೇ ಹೋದರೆ ಪ್ರಯೋಜನ ಇಲ್ಲವಾಗುತ್ತದೆ ಎನ್ನುವ ಭೀತಿ ಆವರಿಸಿದೆ. ಈಗಾಗಲೇ ವರ್ಷದ ಮುಂಗಾರು ವಿಳಂಬವಾಗಿದೆ. ಏತನ್ಮಧ್ಯೆ ಸುರಿದು ಹೋದ ಅಕಾಲಿಕ ಆಲಿಕಲ್ಲು ಮಳೆ ಕೂಡ ಸಣ್ಣಪುಟ್ಟ ಜಲಮೂಲಗಳ ಅಡಿಯಲ್ಲಿ ಬೆಳೆದ ಬೆಳೆಯನ್ನೂ ನಾಶ ಮಾಡಿ ಹೋಗಿದೆ. ಇದರ ಪರಿಣಾಮ ರಾಜ್ಯದ ರೈತರ ಸಂಕಷ್ಟದ ಜತೆಗೆ ಮೈತ್ರಿ ಸರಕಾರದ ಚುನಾವಣೆ ತಲೆನೋವನ್ನೂ ಹೆಚ್ಚಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ