ಆ್ಯಪ್ನಗರ

ಕೊರೊನಾ: ಮಹಾರಾಷ್ಟ್ರ, ತಮಿಳುನಾಡಲ್ಲಿ ಶೇ.50ರಷ್ಟು ಪ್ರಕರಣ

​​ಸಕ್ರಿಯ ಪ್ರಕರಣಗಳ ಪೈಕಿ ಈ ಹತ್ತು ರಾಜ್ಯ ಪಾಲು ಶೇ.86ರಷ್ಟಿದೆ. ಗುಣಮುಖರಾಗುವವರ ಪ್ರಮಾಣ ಏರಿಕೆಯಾಗುತ್ತಿರುವುದರ ಜತೆಗೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.

Vijaya Karnataka Web 14 Jul 2020, 11:33 pm
ಹೊಸದಿಲ್ಲಿ: ದೇಶದಲ್ಲಿನ ಸಕ್ರಿಯ ಕೊರೊನಾ ಪ್ರಕರಣಗಳ ಪೈಕಿ ಮಹಾರಾಷ್ಟ್ರ ಹಾಗೂ ತಮಿಳುನಾಡುಗಳಲ್ಲಿಯೇ ಶೇ.50ರಷ್ಟು ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Vijaya Karnataka Web ಮಹಾರಾಷ್ಟ್ರ
ಮಹಾರಾಷ್ಟ್ರ


ಮಹಾರಾಷ್ಟ್ರದಲ್ಲಿಸದ್ಯ 1.05 ಲಕ್ಷ ಸೋಂಕಿತರಿದ್ದಾರೆ. ತಮಿಳುನಾಡಿನಲ್ಲಿ 48,199 ಮಂದಿ ಸಕ್ರಿಯ ಸೋಂಕಿನ ಪ್ರಕರಣಗಳಿವೆ. ಸದ್ಯ ದೇಶಾದ್ಯಂತ 3.14 ಲಕ್ಷ ಕೊರೊನಾ ಸೋಂಕಿತರಿದ್ದು ಇದುವರೆಗೂ 5.74 ಲಕ್ಷ ಮಂದಿ ಸೋಂಕಿತರು ಗುಣಹೊಂದಿದ್ದಾರೆ. ಕರ್ನಾಟಕ, ದಿಲ್ಲಿ, ಆಂಧ್ರಪ್ರದೇಶ, ಉತ್ತರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಗುಜರಾತ್‌ ಮತ್ತು ಅಸ್ಸಾಂಗಳಲ್ಲಿ ದೇಶದ ಒಟ್ಟು ಸೋಂಕಿತರ ಪೈಕಿ ಶೇ.36ರಷ್ಟು ಜನರಿದ್ದಾರೆ.

ಸಕ್ರಿಯ ಪ್ರಕರಣಗಳ ಪೈಕಿ ಈ ಹತ್ತು ರಾಜ್ಯ ಪಾಲು ಶೇ.86ರಷ್ಟಿದೆ. ಗುಣಮುಖರಾಗುವವರ ಪ್ರಮಾಣ ಏರಿಕೆಯಾಗುತ್ತಿರುವುದರ ಜತೆಗೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ. ಮಾರ್ಚ್‌ನಲ್ಲಿ ಶೇ.31ರಷ್ಟಿದ್ದ ಹೊಸ ಪ್ರಕರಣಗಳ ಪ್ರಮಾಣ ಜುಲೈ 12ಕ್ಕೆ ಶೇ.3.24ಕ್ಕೆ ಇಳಿದಿದೆ ಎಂದು ಸಚಿವಾಲಯ ತಿಳಿಸಿದೆ.

ಐಎಎಸ್‌ ಅಧಿಕಾರಿ ಸಾವು

- ಪಶ್ಚಿಮ ಬಂಗಾಳದ ಚಂದನನಗರ ಉಪವಿಭಾಗಾಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ ದೇಬದತ್ತ ರಾಯ್‌ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರಿಗೆ 4 ವರ್ಷದ ಮಗ ಇದ್ದಾನೆ.

- ವೆಂಟಿಲೇಟರ್‌ಗಳು ಸೇರಿದಂತೆ ಇತರ ವೈದ್ಯಕೀಯ ನೆರವಿನ ದೊಡ್ಡ ಮೊತ್ತದ ಪ್ಯಾಕೇಜ್‌ವೊಂದನ್ನು ಶೀಘ್ರವೇ ಫ್ರಾನ್ಸ್‌ ಸರಕಾರ ಭಾರತಕ್ಕೆ ನೀಡಲಿದೆ ಎಂದು ರಾಯಭಾರಿ ಇಮ್ಯಾನುಯೆಲ್‌ ಲೆನಾಯಿನ್‌ ಘೋಷಣೆ

- ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಜಲಂಧರ್‌ನ ಮಾಜಿ ಬಿಷಪ್‌ ಫ್ರಾಂಕೊ ಮುಳಕ್ಕಲ್‌ಗೆ ಕೊರೊನಾ ಸೋಂಕು ದೃಢ

- ಜಮ್ಮು-ಕಾಶ್ಮೀರ ಬಿಜೆಪಿ ಅಧ್ಯಕ್ಷರಿಗೆ ಕೊರೊನಾ ಸೋಂಕು, ಅವರ ಜತೆ ಸಂಪರ್ಕದಲ್ಲಿದ್ದ ಕೇಂದ್ರ ಸಚಿವ ಜಿತೇಂದ್ರಪ್ರಸಾದ್‌ ಸ್ವಯಂ ಕ್ವಾರಂಟೈನ್‌

- ಬಿಹಾರದಲ್ಲಿ ಜುಲೈ 31ರವರೆಗೆ ಸಂಪೂರ್ಣ ಲಾಕ್‌ಡೌನ್‌ ವಿಸ್ತರಣೆ, ಪಶ್ಚಿಮ ಬಂಗಾಳದ ಕಂಟೈನ್‌ಮೆಂಟ್‌ ವಲಯಗಳಲ್ಲಿ ಜುಲೈ 19 ರವರೆಗೆ ಲಾಕ್‌ಡೌನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ