ಸೊಲ್ಲಾಪುರ (ಮಹಾರಾಷ್ಟ್ರ): ಶಿಕ್ಷಣ ಕ್ಷೇತ್ರದ ನೊಬೆಲ್ ಪ್ರಶಸ್ತಿ ಎಂದೇ ಖ್ಯಾತಿ ಪಡೆದ ಬ್ರಿಟನ್ ದೇಶದ 7 ಕೋಟಿ ರೂ. ಮೊತ್ತದ ‘ದಿ ಗ್ಲೋಬಲ್ ಟೀಚರ್ ಅವಾರ್ಡ್’ನ್ನು ಜಿಲ್ಲೆಯ ಪ್ರಾಥಮಿಕ ಶಿಕ್ಷಕ ರಂಜಿತ್ಸಿನ್ಹ ಡಿಸಲೆ ಪಡೆದುಕೊಂಡಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಡಿ.3ರಂದು ಯುನೆಸ್ಕೋ ಮತ್ತು ವಾರ್ಕಿ ಫೌಂಡೇಶನ್ ಸಹಯೋಗದಲ್ಲಿ ಲಂಡನ್ನ ‘ನ್ಯಾಚುರಲ್ ಹಿಸ್ಟ್ರೀ ಮ್ಯೂಸಿಯಮ್’ನಲ್ಲಿ ನಡೆದ ಆನ್ಲೈನ್ ಸಮಾರಂಭದಲ್ಲಿ ಖ್ಯಾತ ನಟ ಸ್ಟೀಫನ್ ಫ್ರಾಯ್ ಪ್ರಶಸ್ತಿ ಘೋಷಿಸಿದ್ದು, 7 ಕೋಟಿ ರೂ. ಮೊತ್ತದ ಈ ಪ್ರಶಸ್ತಿ ಪ್ರಥಮ ಬಾರಿಗೆ ಭಾರತೀಯ ಶಿಕ್ಷಕರಿಗೆ ಒಲಿದಿದೆ. ಮೂಲ ಬಾರ್ಶಿ ತಾಲೂಕಿನವರಾದ ರಂಜಿತ್ಸಿನ್ಹ ಡಿಸಲೆ ಸೊಲ್ಲಾಪುರ ಜಿಲ್ಲೆಯ ಮಾಢಾ ತಾಲೂಕಿನ ಪರಿತೆವಾಡಿ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
140 ದೇಶಗಳ ಒಟ್ಟು 12 ಸಾವಿರಕ್ಕಿಂತ ಹೆಚ್ಚಿನ ಶಿಕ್ಷಕರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಕೊನೆಯ ಹತ್ತು ಶಿಕ್ಷಕರ ಅಂತಿಮ ಪಟ್ಟಿಯಲ್ಲಿ ಡಿಸಲೆಯವರ ಹೆಸರು ಘೊಷಣೆಯಾಗುತ್ತಿದ್ದಂತೆ ಮಹಾರಾಷ್ಟ್ರ ಸೇರಿದಂತೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿತು.
ಭಾರತ ಮೂಲದ ಗೀತಾಂಜಲಿಗೆ 'ಕಿಡ್ ಆಫ್ ದಿ ಇಯರ್' ಗೌರವ, 15ರ ಪೋರಿಯ ಸಾಧನೆ ಅಪಾರ!
ರಂಜಿತ್ಸಿನ್ಹ ಡಿಸಲೆ ಹಲವು ವರ್ಷಗಳಿಂದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾಡಿದ ಉಪಕ್ರಮಗಳನ್ನು ಆಧರಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. ಇವರು ಬರೆದ ‘ಕ್ಯುಆರ್ ಕೋಡ್’ ಪುಸ್ತಕ ದೇಶದ ಶೈಕ್ಷಣಿಕ ರಂಗದಲ್ಲಿ ಕ್ರಾಂತಿ ಮಾಡಿದೆ. ಇಂದು ದೇಶದ ಹೆಚ್ಚಿನ ರಾಜ್ಯಗಳು ತಮ್ಮ ಅಭ್ಯಾಸಕ್ರಮದಲ್ಲಿ ಈ ತಂತ್ರಜ್ಞಾನ ಬಳಸುತ್ತಿವೆ. ಈ ಉಪಕ್ರಮಕ್ಕೆ ಈ ಪ್ರಶಸ್ತಿ ಸಂದಿದೆ.
ಪಾಠಕ್ಕೂ ಕ್ಯುಆರ್ ಕೋಡ್
ಇಂದು ಕ್ಯುಆರ್ ಕೋಡ್ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ಈ ಕ್ಯುಆರ್ ಕೋಡ್ ಅನ್ನು ಶಿಕ್ಷಣದಲ್ಲಿ ಬಳಸಿದ ರಂಜಿತ್ಸಿನ್ಹ ಡಿಸಲೆ ಕಲಿಕೆಯಲ್ಲಿ ಕ್ರಾಂತಿ ತಂದರು. ಪಠ್ಯಪುಸ್ತಕದಲ್ಲಿಯ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಪಾಠ ಮತ್ತು ಘಟಕದ ಬಗ್ಗೆ ವಿಡಿಯೊ ತೆರೆದುಕೊಂಡು ಪಾಠವನ್ನು ಸೂಕ್ತವಾಗಿ ಗ್ರಹಿಸಲು ಮಕ್ಕಳಿಗೆ ನೆರವಾಗುತ್ತದೆ.
ಡಿ.3ರಂದು ಯುನೆಸ್ಕೋ ಮತ್ತು ವಾರ್ಕಿ ಫೌಂಡೇಶನ್ ಸಹಯೋಗದಲ್ಲಿ ಲಂಡನ್ನ ‘ನ್ಯಾಚುರಲ್ ಹಿಸ್ಟ್ರೀ ಮ್ಯೂಸಿಯಮ್’ನಲ್ಲಿ ನಡೆದ ಆನ್ಲೈನ್ ಸಮಾರಂಭದಲ್ಲಿ ಖ್ಯಾತ ನಟ ಸ್ಟೀಫನ್ ಫ್ರಾಯ್ ಪ್ರಶಸ್ತಿ ಘೋಷಿಸಿದ್ದು, 7 ಕೋಟಿ ರೂ. ಮೊತ್ತದ ಈ ಪ್ರಶಸ್ತಿ ಪ್ರಥಮ ಬಾರಿಗೆ ಭಾರತೀಯ ಶಿಕ್ಷಕರಿಗೆ ಒಲಿದಿದೆ. ಮೂಲ ಬಾರ್ಶಿ ತಾಲೂಕಿನವರಾದ ರಂಜಿತ್ಸಿನ್ಹ ಡಿಸಲೆ ಸೊಲ್ಲಾಪುರ ಜಿಲ್ಲೆಯ ಮಾಢಾ ತಾಲೂಕಿನ ಪರಿತೆವಾಡಿ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
140 ದೇಶಗಳ ಒಟ್ಟು 12 ಸಾವಿರಕ್ಕಿಂತ ಹೆಚ್ಚಿನ ಶಿಕ್ಷಕರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಕೊನೆಯ ಹತ್ತು ಶಿಕ್ಷಕರ ಅಂತಿಮ ಪಟ್ಟಿಯಲ್ಲಿ ಡಿಸಲೆಯವರ ಹೆಸರು ಘೊಷಣೆಯಾಗುತ್ತಿದ್ದಂತೆ ಮಹಾರಾಷ್ಟ್ರ ಸೇರಿದಂತೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿತು.
ಭಾರತ ಮೂಲದ ಗೀತಾಂಜಲಿಗೆ 'ಕಿಡ್ ಆಫ್ ದಿ ಇಯರ್' ಗೌರವ, 15ರ ಪೋರಿಯ ಸಾಧನೆ ಅಪಾರ!
ರಂಜಿತ್ಸಿನ್ಹ ಡಿಸಲೆ ಹಲವು ವರ್ಷಗಳಿಂದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಾಡಿದ ಉಪಕ್ರಮಗಳನ್ನು ಆಧರಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ. ಇವರು ಬರೆದ ‘ಕ್ಯುಆರ್ ಕೋಡ್’ ಪುಸ್ತಕ ದೇಶದ ಶೈಕ್ಷಣಿಕ ರಂಗದಲ್ಲಿ ಕ್ರಾಂತಿ ಮಾಡಿದೆ. ಇಂದು ದೇಶದ ಹೆಚ್ಚಿನ ರಾಜ್ಯಗಳು ತಮ್ಮ ಅಭ್ಯಾಸಕ್ರಮದಲ್ಲಿ ಈ ತಂತ್ರಜ್ಞಾನ ಬಳಸುತ್ತಿವೆ. ಈ ಉಪಕ್ರಮಕ್ಕೆ ಈ ಪ್ರಶಸ್ತಿ ಸಂದಿದೆ.
ಪಾಠಕ್ಕೂ ಕ್ಯುಆರ್ ಕೋಡ್
ಇಂದು ಕ್ಯುಆರ್ ಕೋಡ್ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ಈ ಕ್ಯುಆರ್ ಕೋಡ್ ಅನ್ನು ಶಿಕ್ಷಣದಲ್ಲಿ ಬಳಸಿದ ರಂಜಿತ್ಸಿನ್ಹ ಡಿಸಲೆ ಕಲಿಕೆಯಲ್ಲಿ ಕ್ರಾಂತಿ ತಂದರು. ಪಠ್ಯಪುಸ್ತಕದಲ್ಲಿಯ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ಪಾಠ ಮತ್ತು ಘಟಕದ ಬಗ್ಗೆ ವಿಡಿಯೊ ತೆರೆದುಕೊಂಡು ಪಾಠವನ್ನು ಸೂಕ್ತವಾಗಿ ಗ್ರಹಿಸಲು ಮಕ್ಕಳಿಗೆ ನೆರವಾಗುತ್ತದೆ.