ಆ್ಯಪ್ನಗರ

ಮಹಿಳಾ ನಿಂದನೆ: ಮಲಯಾಳಂ ನಟ ಕೊಲ್ಲಂ ತುಳಸಿ ಶರಣಾಗತಿ

ಜನವರಿ 10ರಂದು ಕೋರ್ಟ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಇದೀಗ ಅವರು ಕೋರ್ಟ್‌ಗೆ ಶರಣಾಗಿದ್ದಾರೆ. ಮಹಿಳಾ ಆಯೋಗ ಅವರ ಮೇಲೆ ಕೇಸು ದಾಖಲಿಸಿತ್ತು.

Vijaya Karnataka 6 Feb 2019, 5:00 am
ತಿರುವನಂತಪುರಂ: ಶಬರಿಮಲೆ ದೇವಳ ಪ್ರವೇಶಿಸುವ ಮಹಿಳೆಯರನ್ನು 'ಸೀಳಿ ಹಾಕಬೇಕು' ಎಂಬ ಸ್ತ್ರೀ ನಿಂದಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಮಲಯಾಳಂ ಚಿತ್ರಗಳ ಖಳ ನಟ ಕೊಲ್ಲಂ ತುಳಸಿ ಮಂಗಳವಾರ ಕೊಲ್ಲಂನ ಚವಾರಾ ಪೊಲೀಸರ ಮುಂದೆ ಶರಣಾಗಿದ್ದಾರೆ.
Vijaya Karnataka Web kollam


2018ರ ಅಕ್ಟೋಬರ್‌ 12ರಂದು ಬಿಜೆಪಿಯ 'ಶಬರಿಮಲೆ ಸಂರಕ್ಷಣಾ ಯಾತ್ರೆ'ಯನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. ಭಾರಿ ಆಕ್ರೋಶ ಕಾಣಿಸಿಕೊಂಡಾಗ ಕ್ಷಮೆ ಕೇಳಿದ್ದ ಅವರ ವಿರುದ್ಧ ಕಾನೂನು ಕ್ರಮ ಮುಂದುವರಿದಿದೆ.

ಜನವರಿ 10ರಂದು ಕೋರ್ಟ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಇದೀಗ ಅವರು ಕೋರ್ಟ್‌ಗೆ ಶರಣಾಗಿದ್ದಾರೆ. ಮಹಿಳಾ ಆಯೋಗ ಅವರ ಮೇಲೆ ಕೇಸು ದಾಖಲಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ