ಆ್ಯಪ್ನಗರ

ಗೃಹ ಸಚಿವಾಲಯದ ಗಂಭೀರ ಎಚ್ಚರಿಕೆ: ಕೇಂದ್ರ ತಂಡವನ್ನು ಒಳಬಿಟ್ಟ ಮಮತಾ ಬ್ಯಾನರ್ಜಿ!

ತೀವ್ರ ಹಗ್ಗ ಜಗ್ಗಾಟದ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊರೊನಾ ವೈರಸ್ ಸ್ಥಿತಿಗತಿ ಅಧ್ಯಯನ ನಡೆಸಲು ಬಂದಿರುವ ಕೇಂದ್ರ ತಂಡಕ್ಕೆ ಅನುಮತಿ ನೀಡಿದ್ದಾರೆ. ಅದರಂತೆ ಕೇಂದ್ರ ತಂಡ ಕೋಲ್ಕತ್ತಾ ನಗರದಲ್ಲಿ ವಸ್ತುಸ್ಥಿತಿ ಪರಿಶೀಲನೆ ನಡೆಸಿದೆ.

Vijaya Karnataka Web 21 Apr 2020, 6:45 pm
ಕೋಲ್ಕತ್ತಾ: ಕೊರೊನಾ ವೈರಸ್ ವಸ್ತುಸ್ಥಿತಿ ಅರಿಯಲು ಬಂದಿರುವ ಕೇಂದ್ರ ಅಧ್ಯಯನ ತಂಡಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊನೆಗೂ ಹಸಿರು ನಿಶಾನೆ ತೋರಿದ್ದಾರೆ.
Vijaya Karnataka Web Mamata Banerjee
ಸಂಗ್ರಹ ಚಿತ್ರ


ಕೊರೊನಾ ವೈರಸ್ ಹಾವಳಿಯ ವಸ್ತುಸ್ಥಿತಿ ಅಧ್ಯಯನ ಮಾಡಲು ಕೇಂದ್ರ ಗೃಹ ಸಚಿವಾಲಯ, ಒಟ್ಟು ನಾಲ್ಕು ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳುಹಿಸಿತ್ತು. ಆದರೆ ಮಮತಾ ಬ್ಯಾನರ್ಜಿ ಈ ತಂಡದ ರಚನೆಯನ್ನೇ ಪ್ರಶ್ನಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿಯೇತರ ಸರ್ಕಾರಗಳಿದ್ದು, ಇಂತಹ ಸಂಕಷ್ಟದ ಸಮಯದಲ್ಲೂ ಕೇಂದ್ರ ಸರ್ಕಾರ ಕೀಳು ರಾಜಕೀಯ ಮಾಡುತ್ತಿದೆ ಎಂದು ಮಮತಾ ಆರೋಪಿಸಿದ್ದರು.


ಆದರೆ ಕೇಂದ್ರ ಗೃಹ ಸಚಿವಾಲಯದ ಗಂಭೀರ ಎಚ್ಚರಿಕೆಯ ಪರಿಣಾಮ ಮಮತಾ ಇದೀಗ ಕೇಂದ್ರ ತಂಡಕ್ಕೆ ಪರಿಶೀಲನೆ ನಡೆಸಲು ಅನುಮತಿ ನೀಡಿದ್ದಾರೆ. ಅದರಂತೆ ಕೇಂದ್ರ ಅಧ್ಯಯನ ತಂಡ ಕೋಲ್ಕತ್ತಾ ನಗರದಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಕೇಂದ್ರ ಅಧ್ಯಯನ ತಂಡಕ್ಕೆ ಭಾರೀ ಭದ್ರತೆ ಒದಗಿಸಲಾಗಿತ್ತು.

ಲಾಕ್‌ಡೌನ್‌ ಉಲ್ಲಂಘನೆ, ಕೇಂದ್ರ ಸರಕಾರ - ಪಶ್ಚಿಮ ಬಂಗಾಳದ ನಡುವೆ ಸಂಘರ್ಷ

ಮುಂದೆ ರಾಜ್ಯದ ಪೂರ್ವ ಮಿಡ್ನಾಪುರ್, 24 ಪರಗಣ ಉತ್ತರ, ಡಾರ್ಜಿಲಿಂಗ್, ಕಾಲಿಮ್‌ಪಾಂಗ್‌, ಹಾಗೂ ಜಲ್‌ಪೈಗುರಿ ಜಿಲ್ಲೆಗಳಿಗೂ ತೆರಳಿ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸಿದೆ.


ಕೇಂದ್ರ ಅಧ್ಯಯನ ತಂಡ ತೆರಳಿರುವ ರಾಜ್ಯಗಳ ಪಟ್ಟಿ:
1. ಮಧ್ಯಪ್ರದೇಶ
2. ರಾಜಸ್ಥಾನ
3. ಪಶ್ಚಿಮ ಬಂಗಾಳ
4. ಮಹಾರಾಷ್ಟ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ