ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸುಮಾರು ಒಂದು ವರ್ಷದ ನಂತರ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬುಧವಾರ ಹೊಸದಿಲ್ಲಿಯಲ್ಲಿ ಭೇಟಿಯಾದರು. ಸಭೆಯ ನಂತರ ಮಮತಾ ಬ್ಯಾನರ್ಜಿ ಮಾತನಾಡಿ, 'ಸೋನಿಯಾ ಗಾಂಧಿ ಅವರೊಂದಿಗಿನ ಸಭೆ ಉತ್ತಮವಾಗಿತ್ತು, ನಾವು ಕೋವಿಡ್-19 ಮತ್ತು ಪೆಗಾಸಸ್ ವಿಷಯದ ಬಗ್ಗೆ ಚರ್ಚಿಸಿದ್ದೇವೆ' ಎಂದು ಹೇಳಿದರು. ಒಕ್ಕೂಟದ ಪ್ರತಿಪಕ್ಷದ ಕುರಿತು ಪ್ರತಿಕ್ರಿಯಿಸಿ, 'ನಾನು ಮಾತ್ರ ಏನನ್ನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗೂಡಬೇಕು' ಎಂದು ಹೇಳಿದರು.
2020ರಲ್ಲಿ ವಿರೋಧ ಪಕ್ಷದ ನಾಯಕರು ಎನ್ಇಇಟಿ ವಿರುದ್ಧ ವರ್ಚ್ಯುಯಲ್ ಸಭೆ ನಡೆಸಿದ್ದಾಗ ಮಮತಾ ಬ್ಯಾನರ್ಜಿ ಮತ್ತು ಸೋಂನಿಯಾ ಗಾಂಧಿ ಭೇಟಿಯಾಗಿದ್ದರು.
ಕಳೆದ ಮೇ ನಲ್ಲಿ ನಡೆದ ಪಶ್ಚಿಮ ಬಂಗಾಳವಿಧಾನ ಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ನಂತರ ಮಮತಾ ಬ್ಯಾನರ್ಜಿ ಹಾಗೂ ಸೋನಿಯಾ ಗಾಂಧಿ ಭೇಟಿಯಾಗಿರುವುದು ಮಹತ್ವಪೂರ್ಣ ಸಂಗತಿ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.
ಇಬ್ಬರು ರಾಜಕೀಯ ನಾಯಕಿಯರು ಉತ್ಸಾಹದಿಂದಲೇ ಭೇಟಿಯಾಗಿದ್ದಾರೆ. ಅವರಿಬ್ಬರ ನಡುವೆ ಆಭಿಮಾನ, ಪ್ರೀತಿ ಮತ್ತು ಗೌರವಗಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಮಮತಾ ಅವರು 2024 ರ ಚುನಾವಣೆಯಲ್ಲಿ ಬಿಜೆಪಿಯನ್ನು ತಡೆಯಲು ಒಂದು ಸಂಯುಕ್ತ ವಿರೋಧ ಪಕ್ಷದ ಅವಶ್ಯಕತೆಯಿರುವುದು ಬಹಿರಂಗವಾಗಿ ಹೇಳಿದ್ದರು ಮತ್ತು ಕಾಂಗ್ರೆಸ್ ಇಲ್ಲದೆ ಯಾವುದೇ ಸಂಯುಕ್ತ ವಿರೋಧ ಪಕ್ಷ ಪರಿಪೂರ್ಣವೆನಿಸದು ಅಂತ ಪ್ರತಿಪಾದಿಸಿದ್ದರು. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಸಹ ತನ್ನ ಧೋರಣೆಯಲ್ಲಿ ಬದಲಾವಣೆ ತಂದುಕೊಂಡು, ವಿರೋಧ ಪಕ್ಷಗಳ ಒಕ್ಕೂಟದ ಬಗ್ಗೆ ಒಲವು ತೋರಿದೆ.
ಮಂಗಳವಾರ ಹೇಳಕೆಯೊಂದನ್ನು ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಮಮತಾ ಅವರಲ್ಲಿ ಬಿಜೆಪಿಯನ್ನು ಸೋಲಿಸುವ ಶಕ್ತಿ ಇದೆ ಅಂತ ಹೇಳಿದ್ದರು. ಅವರ ಪಕ್ಷದ ಸಹೋದ್ಯೋಗಿ ಆನಂದ ಶರ್ಮ ಸಹ ಬಿಜೆಪಿಯ ಓಟವನ್ನು ತಡೆಯಲು, ಸಮಾನ-ಮನಸ್ಕ ಪಕ್ಷಗಳಿ ಒಂದುಗೂಡಬೇಕು ಎಂದು ಹೇಳಿದ್ದರು.
ಎನ್ಸಿಪಿ ಸಂಸ್ಥಾಪಕ ಶರದ್ ಪವಾರ ಸಹ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದು ಸಾಧ್ಯವಾದರೆ, ಈ ತ್ರಿಮೂರ್ತಿಗಳಿಂದ-ಮಮತಾ, ಸೋನಿಯಾ ಮತ್ತು ಪವಾರ್ ಅವರ ತ್ರಿಕೋನ ವಿರೋಧ ಪಕ್ಷದ ಬಲವು ದೇಶದ ಮೂರು ಭಾಗಗಳಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಪಶ್ಚಿಮ ಭಾರತದಲ್ಲಿ ಪವಾರ್, ಪೂರ್ವ ಭಾಗದಲ್ಲಿ ಮಮತಾ ಮತ್ತು ಕೇಂದ್ರದಲ್ಲಿ ಸೋನಿಯಾ ತಮ್ಮ ವರ್ಚಸ್ಸು ಬೀರಲಿದ್ದಾರೆ.
2020ರಲ್ಲಿ ವಿರೋಧ ಪಕ್ಷದ ನಾಯಕರು ಎನ್ಇಇಟಿ ವಿರುದ್ಧ ವರ್ಚ್ಯುಯಲ್ ಸಭೆ ನಡೆಸಿದ್ದಾಗ ಮಮತಾ ಬ್ಯಾನರ್ಜಿ ಮತ್ತು ಸೋಂನಿಯಾ ಗಾಂಧಿ ಭೇಟಿಯಾಗಿದ್ದರು.
ಕಳೆದ ಮೇ ನಲ್ಲಿ ನಡೆದ ಪಶ್ಚಿಮ ಬಂಗಾಳವಿಧಾನ ಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ನಂತರ ಮಮತಾ ಬ್ಯಾನರ್ಜಿ ಹಾಗೂ ಸೋನಿಯಾ ಗಾಂಧಿ ಭೇಟಿಯಾಗಿರುವುದು ಮಹತ್ವಪೂರ್ಣ ಸಂಗತಿ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸುತ್ತಿದ್ದಾರೆ.
ಇಬ್ಬರು ರಾಜಕೀಯ ನಾಯಕಿಯರು ಉತ್ಸಾಹದಿಂದಲೇ ಭೇಟಿಯಾಗಿದ್ದಾರೆ. ಅವರಿಬ್ಬರ ನಡುವೆ ಆಭಿಮಾನ, ಪ್ರೀತಿ ಮತ್ತು ಗೌರವಗಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಮಮತಾ ಅವರು 2024 ರ ಚುನಾವಣೆಯಲ್ಲಿ ಬಿಜೆಪಿಯನ್ನು ತಡೆಯಲು ಒಂದು ಸಂಯುಕ್ತ ವಿರೋಧ ಪಕ್ಷದ ಅವಶ್ಯಕತೆಯಿರುವುದು ಬಹಿರಂಗವಾಗಿ ಹೇಳಿದ್ದರು ಮತ್ತು ಕಾಂಗ್ರೆಸ್ ಇಲ್ಲದೆ ಯಾವುದೇ ಸಂಯುಕ್ತ ವಿರೋಧ ಪಕ್ಷ ಪರಿಪೂರ್ಣವೆನಿಸದು ಅಂತ ಪ್ರತಿಪಾದಿಸಿದ್ದರು. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್ ಸಹ ತನ್ನ ಧೋರಣೆಯಲ್ಲಿ ಬದಲಾವಣೆ ತಂದುಕೊಂಡು, ವಿರೋಧ ಪಕ್ಷಗಳ ಒಕ್ಕೂಟದ ಬಗ್ಗೆ ಒಲವು ತೋರಿದೆ.
ಮಂಗಳವಾರ ಹೇಳಕೆಯೊಂದನ್ನು ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಮಮತಾ ಅವರಲ್ಲಿ ಬಿಜೆಪಿಯನ್ನು ಸೋಲಿಸುವ ಶಕ್ತಿ ಇದೆ ಅಂತ ಹೇಳಿದ್ದರು. ಅವರ ಪಕ್ಷದ ಸಹೋದ್ಯೋಗಿ ಆನಂದ ಶರ್ಮ ಸಹ ಬಿಜೆಪಿಯ ಓಟವನ್ನು ತಡೆಯಲು, ಸಮಾನ-ಮನಸ್ಕ ಪಕ್ಷಗಳಿ ಒಂದುಗೂಡಬೇಕು ಎಂದು ಹೇಳಿದ್ದರು.
ಎನ್ಸಿಪಿ ಸಂಸ್ಥಾಪಕ ಶರದ್ ಪವಾರ ಸಹ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅದು ಸಾಧ್ಯವಾದರೆ, ಈ ತ್ರಿಮೂರ್ತಿಗಳಿಂದ-ಮಮತಾ, ಸೋನಿಯಾ ಮತ್ತು ಪವಾರ್ ಅವರ ತ್ರಿಕೋನ ವಿರೋಧ ಪಕ್ಷದ ಬಲವು ದೇಶದ ಮೂರು ಭಾಗಗಳಲ್ಲಿ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಪಶ್ಚಿಮ ಭಾರತದಲ್ಲಿ ಪವಾರ್, ಪೂರ್ವ ಭಾಗದಲ್ಲಿ ಮಮತಾ ಮತ್ತು ಕೇಂದ್ರದಲ್ಲಿ ಸೋನಿಯಾ ತಮ್ಮ ವರ್ಚಸ್ಸು ಬೀರಲಿದ್ದಾರೆ.