ಆ್ಯಪ್ನಗರ

ಸಿಎಂ ಮಮತಾಗೆ ಪ್ರಚಾರ ನಡೆಸಲು ನಿಷೇಧ: ಚುನಾವಣಾ ಆಯೋಗದ ವಿರುದ್ಧ ದೀದಿ ಧರಣಿ

ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗವು 24 ಗಂಟೆಗಳ ಪ್ರಚಾರ ನಿಷೇಧ ವಿಧಿಸಿದೆ. ಕೇಂದ್ರೀಯ ಪಡೆಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಮತ್ತು ಧಾರ್ಮಿಕ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗ ದಿಟ್ಟ ಕ್ರಮ ಕೈಗೊಂಡಿದೆ.

Vijaya Karnataka Web 13 Apr 2021, 1:27 pm
ಹೊಸದಿಲ್ಲಿ: ಕೇಂದ್ರೀಯ ಪಡೆಗಳ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ಮತ್ತು ಧಾರ್ಮಿಕ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ಆಯೋಗವು 24 ಗಂಟೆಗಳ ಪ್ರಚಾರ ನಿಷೇಧ ವಿಧಿಸಿದೆ. ನಿಷೇಧವು ಸೋಮವಾರ ರಾತ್ರಿ 8 ಗಂಟೆಯಿಂದಲೇ ಜಾರಿಗೆ ಬಂದಿದ್ದು, ಮಂಗಳವಾರ ರಾತ್ರಿ 8 ಗಂಟೆಗೆ ಕೊನೆಗೊಳ್ಳಲಿದೆ.
Vijaya Karnataka Web Mamata Banerjee


''ರಾಜ್ಯಾದ್ಯಂತ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದೇ ಹೇಳಿಕೆಗಳನ್ನು ಚುನಾವಣಾ ಆಯೋಗ ಖಂಡಿಸುತ್ತದೆ. ಈ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಖಡಕ್‌ ಎಚ್ಚರಿಕೆ ನೀಡಲಾಗಿದೆ ಮತ್ತು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಾರ್ವಜನಿಕ ಸಭೆಗಳಲ್ಲಿಇಂತಹ ಹೇಳಿಕೆಗಳನ್ನು ನೀಡದಂತೆ ಸಲಹೆಯನ್ನೂ ನೀಡಲಾಗಿದೆ,'' ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಡೆರೆಕ್‌ ಓ'ಬ್ರಿಯಾನ್‌ ಸೇರಿದಂತೆ ತೃಣಮೂಲ ಕಾಂಗ್ರೆಸ್‌ನ ಅನೇಕ ನಾಯಕರು ಚುನಾವಣಾ ಆಯೋಗದ ತೀರ್ಮಾನವನ್ನು ಖಂಡಿಸಿದ್ದಾರೆ. ''ಚುನಾವಣಾ ಆಯೋಗವು ಬಿಜೆಪಿಯ ಒಂದು ವಿಭಾಗದಂತೆ ಕೆಲಸ ಮಾಡುತ್ತಿದೆ ಮತ್ತು ಮಮತಾ ಬ್ಯಾನರ್ಜಿ ಅವರಿಗೆ ಪ್ರಚಾರ ನಿರ್ಬಂಧ ವಿಧಿಸಿದ ಕ್ರಮದ ಹಿಂದೆ ಸರ್ವಾಧಿಕಾರಿ ಧೋರಣೆ ರಾಚುತ್ತದೆ,'' ಎಂದೂ ಈ ಮುಖಂಡರು ಆರೋಪಿಸಿದ್ದಾರೆ.

ನೂತನ ಚುನಾವಣಾ ಆಯುಕ್ತ ಸುಶೀಲ್ ‌ಚಂದ್ರ ಮಂಗಳವಾರ ಅಧಿಕಾರ ಸ್ವೀಕಾರ

ರಾಜ್ಯದಲ್ಲಿ ಚುನಾವಣೆ ಭದ್ರತೆಗೆ ನಿಯೋಜನೆಯಾಗಿರುವ ಸಿಆರ್‌ಪಿಎಫ್‌, ಸಿಐಎಸ್‌ಎಫ್‌ ಮೊದಲಾದ ಕೇಂದ್ರೀಯ ಪಡೆಗಳು ಬಿಜೆಪಿ ಮತ ಹಾಕುವಂತೆ ಮತದಾರರಿಗೆ ಬೆದರಿಕೆ ಹಾಕುತ್ತಿವೆ ಎಂದು ಮಮತಾ ದೀದಿ ಆರೋಪಿಸಿದ್ದರು. ಕೂಚ್‌ಬೆಹಾರ್‌ನ ಸಿತಲ್‌ಕುಚಿಯ ಮತಗಟ್ಟೆಯೊಂದರಲ್ಲಿ ನಾಲ್ಕನೇ ಹಂತದ ಮತದಾನದ ವೇಳೆ ಸಿಐಎಸ್‌ಎಫ್‌ ಗುಂಡೇಟಿಗೆ ನಾಲ್ವರು ಬಲಿಯಾದ ಘಟನೆಯನ್ನು 'ನರಮೇಧ' ಎಂದು ಮಮತಾ ಕರೆದಿದ್ದರು. ಅಲ್ಪಸಂಖ್ಯಾತರು ತಮ್ಮ ಮತಗಳು ವಿಭಜನೆಯಾಗದಂತೆ ಎಚ್ಚರವಹಿಸಬೇಕು ಎಂದೂ ಪ್ರಚಾರ ಸಭೆಗಳಲ್ಲಿ ಮನವಿ ಮಾಡಿದ್ದರು.

ಬ್ಯಾನ್‌ ವಿರುದ್ಧ ದೀದಿ ಪ್ರತಿಭಟನೆ!
ಇನ್ನು ಪ್ರಚಾರಕ್ಕೆ ತನನ್ನು ಬ್ಯಾನ್‌ ಮಾಡಿರುವುನ್ನು ವಿರೋಧಿಸಿರುವ ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಧರಣಿ ನಡೆಸುತ್ತಿದ್ದಾರೆ. ಕೊಲ್ಕತ್ತಾದ ಗಾಂಧಿ ಪ್ರತಿಮೆ ಮುಂಭಾಗ ಧರಣಿ ಕುಳಿತಿರುವ ಮಮತಾ ದೀದಿ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ