ಆ್ಯಪ್ನಗರ

ಮೋದಿ ಭೇಟಿಯಾದ ದೀದಿ, ರಾಜ್ಯಕ್ಕೆ ಆಹ್ವಾನ

ಇದೇ ವೇಳೆ, ದುರ್ಗಾ ಪೂಜೆ ಬಳಿಕ ನಡೆಯುವ 'ದಿಯೋಚಾ ಪಂಚಮಿ'ಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ಅವರಿಗೆ ಮಮತಾ ಆಹ್ವಾನ ನೀಡಿದರು.

Agencies 19 Sep 2019, 5:00 am
ಹೊಸದಿಲ್ಲಿ: ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ಕಟು ಟೀಕೆಗಳ ಮೂಲಕ ಗಮನ ಸೆಳೆಯುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಮಮತಾ ಬ್ಯಾನರ್ಜಿ ಅವರು ಬುಧವಾರ ದಿಲ್ಲಿಯಲ್ಲಿಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದರು.
Vijaya Karnataka Web mamata meets pm modi raises issue of renaming west bengal
ಮೋದಿ ಭೇಟಿಯಾದ ದೀದಿ, ರಾಜ್ಯಕ್ಕೆ ಆಹ್ವಾನ


ರಾಜ್ಯದ ಹೆಸರು ಬದಲಾವಣೆಗೆ ಕೇಂದ್ರದ ಬೆಂಬಲ, ರಾಜ್ಯದಲ್ಲಿನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಯೋಜನೆಗಳು, ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮೋದಿ ಜತೆ ಮಮತಾ ಚರ್ಚಿಸಿದರು.

ಇದೇ ವೇಳೆ, ದುರ್ಗಾ ಪೂಜೆ ಬಳಿಕ ನಡೆಯುವ 'ದಿಯೋಚಾ ಪಂಚಮಿ'ಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರಧಾನಿ ಅವರಿಗೆ ಮಮತಾ ಆಹ್ವಾನ ನೀಡಿದರು.

ಮೋದಿ ಅವರ ಅಧಿಕೃತ ನಿವಾಸದಲ್ಲಿಈ ಸಭೆ ನಡೆಯಿತು. ಉಭಯ ನಾಯಕರ ಭೇಟಿಯ ಫೋಟೊಗಳನ್ನು ಪ್ರಧಾನಿ ಕಾರ್ಯಾಲಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿಪ್ರಕಟಿಸಿದೆ. ಪ್ರಧಾನಿ ಜತೆ ಚರ್ಚೆ ಬಳಿಕ ಮಾತನಾಡಿದ ಮಮತಾ, ಈ ಭೇಟಿಗೆ ವಿಶೇಷ ರಾಜಕೀಯ ಅರ್ಥ ಕಲ್ಪಿಸುವುದು ಬೇಡವೆಂದು ಮನವಿ ಮಾಡಿದರು.

ಒಂದು ವೇಳೆ ಗೃಹ ಸಚಿವ ಅಮಿತ್‌ ಶಾ ಸಮಯ ನೀಡಿದರೆ ಗುರುವಾರ ಅವರನ್ನೂ ಭೇಟಿಯಾಗಲು ಬಯಸಿದ್ದೇನೆ ಎಂದು ದೀದಿ ತಿಳಿಸಿದರು.

ಒಂದೂವರೆ ವರ್ಷದ ಬಳಿಕ: ಪ್ರಧಾನಿ ಮೋದಿ ಮತ್ತು ಮಮತಾ ಸುಮಾರು ಒಂದೂವರೆ ವರ್ಷದ ಇದೇ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. 2018ರ ಮೇನಲ್ಲಿಕಡೆಯ ಬಾರಿಗೆ ಇಬ್ಬರು ಒಂದೇ ವೇದಿಕೆಯಲ್ಲಿಕಾಣಿಸಿಕೊಂಡಿದ್ದರು.

ಜಶೋದಾ ಬೆನ್‌ಗೆ ಸೀರೆ ಉಡುಗೊರೆ: ಮೋದಿ ಭೇಟಿಗೂ ಮೊದಲು ಅವರ ಪತ್ನಿ ಜಶೋದಾ ಬೆನ್‌ ಅವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ, ಅವರಿಗೆ ಸೀರೆಯೊಂದನ್ನು ಕಾಣಿಕೆಯಾಗಿ ನೀಡಿದರು. ಕೋಲ್ಕೊತಾದಲ್ಲಿಕಲ್ಯಾಣೇಶ್ವರಿ ದೇವಸ್ಥಾನಕ್ಕೆ ತಮ್ಮ ಸಹೋದರ ಮತ್ತು ಅವರ ಪತ್ನಿಯೊಂದಿಗೆ ತೆರಳಿದ್ದ ಜಶೋದಾಬೆನ್‌ ಅವರನ್ನು ವಿಮಾನ ನಿಲ್ದಾಣದಲ್ಲಿಭೇಟಿಯಾದ ಮಮತಾ, ಅವರ ಯೋಗಕ್ಷೇಮ ವಿಚಾರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ