ಆ್ಯಪ್ನಗರ

ಸರ್ವಪಕ್ಷ ಸಭೆ ಕರೆಯಲು ಮೋದಿಗೆ ದೀದಿ ಪತ್ರ

ಚುನಾವಣೆಗಳಿಗಾಗಿ ಪಕ್ಷಗಳು ಮಾಡುವ ಭಾರಿ ವೆಚ್ಚಕ್ಕೆ ಲಗಾಮು ಹಾಕುವ ಬಗ್ಗೆ 2014 ಮತ್ತು 2019ರ ಲೋಕಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಟಿಎಂಸಿ ಉಲ್ಲೇಖಿಸಿತ್ತು.

PTI 26 Jul 2019, 5:00 am
ಕೋಲ್ಕೊತಾ: ಸಾರ್ವಜನಿಕ ದೇಣಿಗೆಯಲ್ಲಿ ಮುಂಬರುವ ಚುನಾವಣೆಗಳನ್ನು ರಾಜಕೀಯ ಪಕ್ಷಗಳು ಎದುರಿಸುವಂತೆ ಚುನಾವಣಾ ನಿಯಮಗಳ ಪರಿಷ್ಕರಣೆಗಾಗಿ ಚರ್ಚೆ ನಡೆಸಲು ಸರ್ವಪಕ್ಷಗಳ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳು ಪ್ರಚಾರ ಹಾಗೂ ಇತರ ಕೆಲಸಗಳಿಗಾಗಿ ಭಾರಿ ವೆಚ್ಚ ಮಾಡಿವೆ. ಈ ದುಂದುವೆಚ್ಚಕ್ಕೆ ಲಗಾಮು ಹಾಕುವ ಉದ್ದೇಶದಿಂದ ಸಾರ್ವಜನಿಕರ ದೇಣಿಗೆಯಲ್ಲಿ ಪಕ್ಷಗಳು ಚುನಾವಣೆ ಎದುರಿಸುವಂಥ ಕ್ರಾಂತಿಕಾರಿ ಸುಧಾರಣೆ ಆಗಬೇಕಿದೆ. ಇದರಿಂದ ಭಷ್ಟಾಚಾರಕ್ಕೂ ಕಡಿವಾಣ ಹಾಕಬಹುದು. ಸದ್ಯ ವಿಶ್ವದ 65 ದೇಶಗಳಲ್ಲಿ ಈ ಮಾದರಿ ಚಾಲ್ತಿಯಲ್ಲಿದೆ. ಈ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ಕರೆಯುವಂತೆ ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಮಮತಾ ಪತ್ರದಲ್ಲಿ ತಿಳಿಸಿದ್ದಾರೆ. ಚುನಾವಣೆಗಳಿಗಾಗಿ ಪಕ್ಷಗಳು ಮಾಡುವ ಭಾರಿ ವೆಚ್ಚಕ್ಕೆ ಲಗಾಮು ಹಾಕುವ ಬಗ್ಗೆ 2014 ಮತ್ತು 2019ರ ಲೋಕಸಭಾ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಟಿಎಂಸಿ ಉಲ್ಲೇಖಿಸಿತ್ತು.
Vijaya Karnataka Web mamata-banerjee

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ