ಆ್ಯಪ್ನಗರ

ಅತ್ತೆ ಬಾಯಲ್ಲಿ ನಾಗರಿಕ ಯುದ್ಧದ ಮಾತು, ಪ್ರಶ್ನೆ ಕೇಳಲು ಪರದಾಡಿದ ಅಳಿಯ

ಅತ್ತೆ ನಾಗರಿಕ ಯುದ್ಧದ ಮಾತಾಡುತ್ತಾರೆ. ಆದರೆ ಅಳಿಯ ಪ್ರಶ್ನೆ ಕೇಳಲು ಥರಗುಡುತ್ತಾರೆ. ಹೌದು ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಕೇಳಬೇಕೆಂದುಕೊಂಡು ತಾವೇ ಬರೆದಿಟ್ಟಿದ್ದ ಪ್ರಶ್ನೆಯನ್ನೇ ಮರೆತು ಲೋಕಸಭೆಯಲ್ಲಿ ನಗೆಪಾಟಲಿಗೀಡಾಗಿದ್ದಾರೆ.

TIMESOFINDIA.COM 1 Aug 2018, 12:56 pm
ಹೊಸದಿಲ್ಲಿ: ಅತ್ತೆ ನಾಗರಿಕ ಯುದ್ಧದ ಮಾತಾಡುತ್ತಾರೆ. ಆದರೆ ಅಳಿಯ ಪ್ರಶ್ನೆ ಕೇಳಲು ಥರಗುಡುತ್ತಾರೆ. ಹೌದು ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಕೇಳಬೇಕೆಂದುಕೊಂಡು ತಾವೇ ಬರೆದಿಟ್ಟಿದ್ದ ಪ್ರಶ್ನೆಯನ್ನೇ ಮರೆತು ಲೋಕಸಭೆಯಲ್ಲಿ ನಗೆಪಾಟಲಿಗೀಡಾಗಿದ್ದಾರೆ.
Vijaya Karnataka Web TMC Leader


'ಸ್ಟಾರ್ಡ್ (ಚುಕ್ಕೆ ಗುರುತಿನ ಪ್ರಶ್ನೆ)' ಪ್ರಶ್ನೆಗಳನ್ನು ಕೇಳುವವರ ಪಟ್ಟಿಯಲ್ಲಿ ಟಿಎಸ್ಆರ್ ಸದಸ್ಯೆ ಕೆ. ಕವಿತಾ ಹೆಸರಿನ ಜತೆಗೆ ಬ್ಯಾನರ್ಜಿ ಹೆಸರು ಕೂಡ ಇತ್ತು. ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ಸಮಯವಿದ್ದರೆ ಸ್ಟಾರ್ಡ್ ಗುರುತಿನ ಪ್ರಶ್ನೆಗಳಿಗೆ ಮೌಖಿರ ಉತ್ತರ ನೀಡಲಾಗುತ್ತದೆ.

ಆ ಸಮಯದಲ್ಲಿ ಕವಿತಾ ಅಲ್ಲಿರಲಿಲ್ಲ, ಹೀಗಾಗಿ ಪ್ರಶ್ನೆ ಕೇಳುವಂತೆ ಸಭಾಪತಿ ಸುಮಿತ್ರಾ ಮಹಾಜನ್ ಅಭಿಷೇಕ್ ಹೆಸರು ಕೂಗಿದ್ದಾರೆ. ಎದ್ದು ನಿಂತು ಪ್ರಶ್ನೆ ಕೇಳುವ ಬದಲಾಗಿ ಮಮತಾ ಸೋದರಳಿಯ ಗಲಿಬಿಲಿಗೊಂಡಂತೆ ಕಂಡುಬಂದರು. ಹೀಗಾಗಿ ಮಹಾಜನ್ ನೀವು ಪ್ರಶ್ನೆ ಕೇಳಬಹುದು, ಮರೆತಿದ್ದರೆ ಬಿಟ್ಟು ಬಿಡಿ ಎಂದರು.

ತಕ್ಷಣ ಸಹಾಯಕ್ಕೆ ಬಂದ ಟಿಎಂಸಿ ಹಿರಿಯ ನಾಯಕರಾದ, ಸುಗತಾ ಬೋಸ್, ಸುಗತಾ ರಾಯ್ ಪಟ್ಟಿಯಲ್ಲಿದ್ದ ಅವರ ಪ್ರಶ್ನೆಯನ್ನು ತೋರಿಸಿ ಪ್ರಶ್ನೆ ಕೇಳಲು ಸಹಾಯ ಮಾಡಿದ್ದಲ್ಲದೆ, ಅದಕ್ಕೆ ಭಾರಿ ಕೈಗಾರಿಕೆಗಳ ಖಾತೆ ರಾಜ್ಯ ಸಚಿವರಾದ ಬಬೂಲ್ ಸುಪ್ರಿಯೊ ಅವರು ಉತ್ತರ ನೀಡಿದ ಬಳಿಕ ಪೂರಕ ಪ್ರಶ್ನೆಗಳನ್ನು ಕೇಳಲು ಮಾರ್ಗದರ್ಶನ ಮಾಡಿದರು. ಈ ಸಂಪೂರ್ಣ ಘಟನಾವಳಿ ಗಮನಿಸುತ್ತಿದ್ದ ಲೋಕಸಭೆ ನಗೆಗಲೆಡಲಲ್ಲಿ ತೇಲಿ ಹೋಯಿತು.

ರಕ್ತಪಾತ, ನಾಗರಿಕ ಯುದ್ಧಕ್ಕೆ ನಾಂದಿ

ಅಸ್ಸಾಂನಲ್ಲಿ ಕೈಗೊಳ್ಳಲಾಗಿರುವ ಎನ್ಆರ್‌ಸಿ ಪ್ರಕ್ರಿಯೆ ದೇಶಾದ್ಯಂತ ರಕ್ತಪಾತ, ನಾಗರಿಕ ಯುದ್ಧಕ್ಕೆ ನಾಂದಿ ಹಾಡಲಿದೆ ಎಂದು ಮಮತಾ ಮಂಗಳವಾರ ಕಿಡಿಕಾರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ