ಆ್ಯಪ್ನಗರ

'ಎ ಪ್ಲಸ್‌' ಗ್ರೇಡ್‌ ಬರದಿದ್ದಕ್ಕೆ ಗುದ್ದಲಿಯಿಂದ ಮಗನಿಗೆ ಹೊಡೆದ ತಂದೆ: ಪೊಲೀಸರಿಂದ ವ್ಯಕ್ತಿ ಬಂಧನ

ಗುದ್ದಲಿಯ ಮರದ ಹಿಡಿಯಿಂದ ಮಗನ ಮೇಲೆ ತಂದೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕೇರಳ ಪೊಲೀಸರು ಮೇ 7, 2019 ರಂದು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ 43 ವರ್ಷದ ವ್ಯಕ್ತಿ ಸಾಬು ಎಂಬ ದಿನಗೂಲಿ ಕಾರ್ಮಿಕನ ವಿರುದ್ಧ ಕೇಸ್‌ ದಾಖಲಾಗಿದೆ.

Times Now 8 May 2019, 2:40 pm
ತಿರುವನಂತಪುರ: ಕೇರಳದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಎಲ್ಲ ವಿಷಯಗಳಲ್ಲೂ 'ಎ ಪ್ಲಸ್‌' ಗ್ರೇಡ್‌ ತೆಗೆದುಕೊಳ್ಳಲು ವಿಫಲನಾದ ಮಗನ ಮೇಲೆ ತಂದೆ ಹಲ್ಲೆ ಮಾಡಿದ್ದಾರೆ.
Vijaya Karnataka Web student_thrashed


ಗುದ್ದಲಿಯ ಮರದ ಹಿಡಿಯಿಂದ ಮಗನ ಮೇಲೆ ಫಲಿತಾಂಶ ಬಂದ ಕೆಲವೇ ಗಂಟೆಗಳ ಬಳಿಕ ಮೇ 6, 2019 ರಂದು ತಂದೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕೇರಳ ಪೊಲೀಸರು ಮೇ 7, 2019 ರಂದು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ 43 ವರ್ಷದ ವ್ಯಕ್ತಿ ಸಾಬು ಎಂಬ ದಿನಗೂಲಿ ಕಾರ್ಮಿಕನ ವಿರುದ್ಧ ಕೇಸ್‌ ದಾಖಲಾಗಿದೆ.

ತನ್ನ ಪುತ್ರನ ಕಾಲಿಗೆ ಹೊಡೆದಿದ್ದಾರೆ ಎಂದು ಪುತ್ರ ಹಾಗೂ ತಾಯಿ ಪೊಲೀಸ್‌ ಠಾಣೆಗೆ ಹೋಗಿ ತಂದೆ ವಿರುದ್ಧ ದೂರು ನೀಡಿದ್ದರು. ನಂತರ ಪೊಲೀಸರು ಆತನನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಒಟ್ಟು 10 ವಿಷಯಗಳಲ್ಲಿ 6 ವಿಷಯಗಳಲ್ಲಿ ಬಾಲಕ 'ಎ ಪ್ಲಸ್‌' ಗ್ರೇಡ್ ಪಡೆದುಕೊಂಡಿದ್ದಾನೆ. ಆದರೆ, ತನ್ನ ಪುತ್ರ ಎಲ್ಲಾ ವಿಷಯಗಳಲ್ಲೂ ಟಾಪರ್‌ ಆಗಲಿದ್ದಾನೆ ಎಂದು ತಂದೆ ಎಣಿಸಿದ್ದರು ಎಂದು ತಿಳಿದುಬಂದಿದೆ.

ಮೇ 6,2019 ರಂದು ಕೇರಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ