ಆ್ಯಪ್ನಗರ

ಅತ್ಯುತ್ತಮ ಚಾಲಕ ಪ್ರಶಸ್ತಿ ಪುರಸ್ಕೃತನಿಂದಲೇ ಅಪಘಾತ

ರಸ್ತೆ ಅಪಘಾತದಲ್ಲಿ 58 ಜನರನ್ನು ಬಲಿಪಡೆದ ತೆಲಂಗಾಣದ ಟಿಎಸ್‌ಆರ್‌ಟಿಸಿ ಬಸ್‌ನ ಚಾಲಕ ಕಳೆದ ತಿಂಗಳಷ್ಟೇ 'ಅತ್ಯುತ್ತಮ ಚಾಲಕ' ಪ್ರಶಸ್ತಿಗೆ ಭಾಜನನಾಗಿದ್ದ ಎಂಬ ಅಚ್ಚರಿಯ ಸುದ್ದಿ ಬಹಿರಂಗವಾಗಿದೆ.

Vijaya Karnataka 13 Sep 2018, 11:15 am
ಹೈದರಾಬಾದ್‌: ರಸ್ತೆ ಅಪಘಾತದಲ್ಲಿ 58 ಜನರನ್ನು ಬಲಿಪಡೆದ ತೆಲಂಗಾಣದ ಟಿಎಸ್‌ಆರ್‌ಟಿಸಿ ಬಸ್‌ನ ಚಾಲಕ ಕಳೆದ ತಿಂಗಳಷ್ಟೇ 'ಅತ್ಯುತ್ತಮ ಚಾಲಕ' ಪ್ರಶಸ್ತಿಗೆ ಭಾಜನನಾಗಿದ್ದ ಎಂಬ ಅಚ್ಚರಿಯ ಸುದ್ದಿ ಬಹಿರಂಗವಾಗಿದೆ.
Vijaya Karnataka Web telangana bus accident


'ಅತ್ಯುತ್ತಮ ಚಾಲಕ' ಪ್ರಶಸ್ತಿ ಮಾತ್ರವಲ್ಲದೇ ಈ ಹಿಂದೆ ಅತ್ಯುತ್ತಮ ಇಂಧನ ಸಾಮರ್ಥ್ಯ‌ಕ್ಕಾಗಿ ಬಹುಮಾನವನ್ನು ಸಹ ಈ ಚಾಲಕ ಪಡೆದಿದ್ದ.

ಹೈದರಾಬಾದ್‌ನಿಂದ 200 ಕಿ.ಮೀ. ದೂರದ ಶನಿವಾರಪೇಟೆ ಗ್ರಾಮದ ಘಾಟ್‌ ರಸ್ತೆಯಲ್ಲಿ ಮಂಗಳವಾರ ನಡೆದ ಅಪಫಾತದಲ್ಲಿ 37 ಮಹಿಳೆಯರು, ಐವರು ಮಕ್ಕಳು ಸೇರಿದಂತೆ 57 ಮಂದಿ ಮೃತಪಟ್ಟು, 28 ಮಂದಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡ ಮಹಿಳೆಯೊಬ್ಬರು ಬುಧವಾರ ಮೃತಪಟ್ಟಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.

54 ಆಸನಗಳ ಈ ಬಸ್‌ನಲ್ಲಿ ಸುಮಾರು 90 ಮಂದಿ ಪ್ರಯಾಣಿಸುತ್ತಿದ್ದರು. ಘಾಟ್‌ ರಸ್ತೆಯಲ್ಲಿ ಮುಂದಿನಿಂದ ಬರುತ್ತಿದ್ದ ವಾಹನದೊಂದಿಗಿನ ಘರ್ಷಣೆ ಅಥವಾ ಪಕ್ಕದಲ್ಲಿ ಇದ್ದ ಆಳದ ಕಮರಿ ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ