ಆ್ಯಪ್ನಗರ

ಪೊಲೀಸರಿಂದ ಸಿಗದ ನ್ಯಾಯ: ಬೀದಿಬದಿ ವ್ಯಾಪಾರಿ ಆತ್ಮಹತ್ಯೆ

ಪೊಲೀಸರಿಂದ ನ್ಯಾಯ ದೊರಕದೇ ಇದ್ದ ಹಿನ್ನೆಲೆಯಲ್ಲಿ ಹೆಣ್ಣುಮಗುವಿನ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Navbharat Times 7 Sep 2018, 5:28 pm
[This story originally published in times of India on sept 7, 2018]
Vijaya Karnataka Web police


ಮೀರತ್‌: ಪೊಲೀಸರಿಂದ ನ್ಯಾಯ ದೊರಕದೇ ಇದ್ದ ಹಿನ್ನೆಲೆಯಲ್ಲಿ ಹೆಣ್ಣುಮಗುವಿನ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗಳನ್ನು ಅಪಹರಿಸಿ, ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದ ವೀಡಿಯೋಗಳನ್ನು ತೋರಿಸುತ್ತಿದ್ದ ನೆರೆಯ ವ್ಯಕ್ತಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಟುಂಬಕ್ಕೆ ಆದಾಯದ ಮೂಲವಾಗಿರುವ ವ್ಯಾಪಾರಿಯ ಪುತ್ರಿಯನ್ನು ಆ.27ರಂದು ರಾಮ್‌ಗೋಪಲ್‌ ಯಾದವ್‌ ಎಂಬಾತ ಅಪಹರಿಸಿದ್ದ. ಇದಕ್ಕೆ ಮೊದಲು ಪುತ್ರಿ ಜತೆ ಅಸಭ್ಯವಾಗಿ ನಡೆದುಕೊಂಡಿದ್ದ. ಈ ಸಂಬಂಧ ಪೊಲೀಸರಿಗೆ ವ್ಯಾಪಾರಿ ದೂರು ನೀಡಿದ್ದಾನೆ.

ವ್ಯಾಪಾರಿಯ ಪುತ್ರಿಯನ್ನು ರಕ್ಷಿಸಿದ್ದ ಪೊಲೀಸರು, ಯಾದವ್‌ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದೂರು ವಾಪಾಸು ಪಡೆಯುವಂತೆ ಯಾದವ್‌ ಮತ್ತು ಬೆಂಬಲಿಗರು ಬೆದರಿಸಿದ್ದು, ಅಶ್ಲೀಲ ಚಿತ್ರಗಳನ್ನು ತೋರಿಸಿ, ಪುತ್ರಿಯನ್ನೂ ಇದೇ ರೀತಿ ಮಾಡುತ್ತೇವೆ. ಈ ಚಿತ್ರವನ್ನು ಎಲ್ಲರಿಗೂ ಕಳಿಸುತ್ತೇವೆ ಎಂದು ಬೆದರಿಸಿದ್ದಾರೆ.

ಈ ವೇಳೆ ಪೊಲೀಸ್‌ ಠಾಣೆಗೆ ಹೋದ ವ್ಯಾಪಾರಿ, ಯಾದವ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ. ಈ ವೇಳೆ ಪೊಲೀಸರು, ಪುತ್ರಿಯ ನಡತೆ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಅಸಹ್ಯವಾಗಿ ಮಾತನಾಡಿದ್ದಾರೆ. ಮನನೊಂದ ವ್ಯಾಪಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪೊಲೀಸರು ಈ ವರೆಗೆ ಯಾದವ್‌ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ಬಾರಿ ಸಾರ್ವಜನಿಕವಾಗಿ ನನ್ನನ್ನು ಛೇಡಿಸಿದ್ದು ಮಾತ್ರವಲ್ಲದೆ, ಬಟ್ಟೆ ಹರಿದಿದ್ದ. ಆಗಲೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವ್ಯಾಪಾರಿ ಪುತ್ರಿ ಆರೋಪಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ