ಆ್ಯಪ್ನಗರ

ಆಂಬ್ಯುಲೆನ್ಸ್‌ ಸಿಗದೆ ತಾಯಿಯ ಶವವನ್ನು ಬೈಕ್‌ನಲ್ಲಿ ಸಾಗಿಸಿದ ಪುತ್ರ

ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಮುಂದುವರಿದಿದ್ದು, ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಕ್‌ನಲ್ಲಿ ಸಾಗಿಸಿರುವ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಶವ ಸಾಗಿಸುವ ವಾಹನ ಕಳಿಸಲು ಆಸ್ಪತ್ರೆಯವರು ಹಿಂದೇಟು ಹಾಕಿದ ಕಾರಣದಿಂದಾಗಿ ಪುತ್ರ ಬೈಕ್‌ನಲ್ಲೇ ತಾಯಿಯ ಮೃತದೇಹವನ್ನು ತೆಗೆದುಕೊಂಡುಹೋಗಿದ್ದಾನೆ.

TIMESOFINDIA.COM 11 Jul 2018, 4:12 pm
ಭೋಪಾಲ್: ದೇಶದಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆ ಮುಂದುವರಿದಿದ್ದು, ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಕ್‌ನಲ್ಲಿ ಸಾಗಿಸಿರುವ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಶವ ಸಾಗಿಸುವ ವಾಹನ ಕಳಿಸಲು ಆಸ್ಪತ್ರೆಯವರು ಹಿಂದೇಟು ಹಾಕಿದ ಕಾರಣದಿಂದಾಗಿ ಪುತ್ರ ಬೈಕ್‌ನಲ್ಲೇ ತಾಯಿಯ ಮೃತದೇಹವನ್ನು ತೆಗೆದುಕೊಂಡುಹೋಗಿದ್ದಾನೆ.
Vijaya Karnataka Web dead body on motorcycle


ಸೋಮವಾರ ಹಾವಿನ ಕಡಿತದಿಂದಾಗಿ ಕುನ್ವರ್ ಬಾಯಿ ಮೃತಪಟ್ಟಿದ್ದರು. ಬಳಿಕ, ಮೋಹನ್‌ಗಢದ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಪೋಸ್ಟ್‌ಮಾರ್ಟಂ ಮಾಡುವಂತೆ ಮಾಹಿತಿ ನೀಡಿದ್ದರು. ಆದರೆ, ಹೆಣ ಸಾಗಿಸುವ ವಾಹನನೀಡಲು ಆಸ್ಪತ್ರೆಯವರು ನಿರಾಕರಿಸಿದ ಕಾರಣ ಕುನ್ವರ್ ಬಾಯಿಯ ಪುತ್ರ ಹಾಗೂ ಸಂಬಂಧಿಕರು ಮೃತದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಘಟನೆ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಘಟನೆಯ ಬಗ್ಗೆ ತನಗೆ ಮಾಹಿತಿ ಇಲ್ಲ. ಈ ಬಗ್ಗೆ ತಾನು ಸೂಕ್ತ ತನಿಖೆ ಮಾಡುವಂತೆ ಕೇಳಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಾಗಿಯೂ ಜಿಲ್ಲೆಯ ಹಿರಿಯ ಅಧಿಕಾರಿ ಎಸ್‌.ಕೆ. ಅಹಿರ್ವಾರ್ ಮಾಹಿತಿ ನೀಡಿದ್ದಾರೆ. ಈ ರೀತಿಯ ಅನೇಕ ಘಟನೆಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದು, ಮೇ ತಿಂಗಳಲ್ಲಿ ಉತ್ತರ ಪ್ರದೇಶದ ಬದೌನ್‌ ನಗರದಲ್ಲೂ ಈ ರೀತಿಯ ಘಟನೆ ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ