ಆ್ಯಪ್ನಗರ

ಇಚ್ಛೆಗೆ ವಿರುದ್ಧವಾಗಿ ವಿವಾಹ: ಪುತ್ರಿಯನ್ನು ನಡು ರಸ್ತೆಯಲ್ಲೇ ಸುಟ್ಟ ತಂದೆ

ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಲು ಬಯಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪುತ್ರಿಯನ್ನು ಹೆತ್ತ ತಂದೆಯೇ ನಡು ರಸ್ತೆಯಲ್ಲಿ ಬೆಂಕಿ ಹಚ್ಚಿ ಸಾಯಿಸಿರುವ ಪೈಶಾಚಿಕ ಕೃತ್ಯ ಖಂಡ್ವಾದ ಚೈನ್‌ಪುರ್ ಸರ್ಕಾರ್ ಗ್ರಾಮದಲ್ಲಿ ನಡೆದಿದೆ.

TIMESOFINDIA.COM 21 Jul 2018, 2:29 pm
Vijaya Karnataka Web fire
ಇಂದೋರ್: ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಲು ಬಯಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪುತ್ರಿಯನ್ನು ನಡುರಸ್ತೆಯಲ್ಲೇ ಸುಟ್ಟು ಸಾಯಿಸಿದ ಕ್ರೂರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಖಂಡ್ವಾದ ಚೈನ್‌ಪುರ್ ಸರ್ಕಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನ್ಯಾಯಾಲಯದಲ್ಲಿ ವಯಸ್ಸಿನ ಪುರಾವೆ ನೀಡಬೇಕಾಗಿದ್ದರಿಂದ ಅಂಕ ಪಟ್ಟಿ ತರಲು ಯುವತಿ ಮನೆಗೆ ಮರಳಿದ್ದಳು. ಈ ವೇಳೆ ತಂದೆ ಸುಂದರ್ ಲಾಲ್ ಹಾಗೂ ಪುತ್ರಿಯ ನಡುವೆ ಮಾತಿನ ಚಕಮಕಿ ನಡೆದಿದೆ. ತಾಳ್ಮೆ ಕಳೆದುಕೊಂಡ ತಂದೆ ಯುವತಿ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಮನೆಯ ಎದುರೇ ಯುವತಿಯ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಿ ತಂದೆಯನ್ನು ಬಂಧಿಸಲಾಗಿದೆ' ಎಂದು ಡಿಎಸ್‌ಪಿ ಶಶಿಕಾಂತ್ ತಿಳಿಸಿದ್ದಾರೆ.

ಈ ಪ್ರಕರಣವನ್ನು ಮರ್ಯಾದೆ ಹತ್ಯೆ ಎಂದು ಒಪ್ಪಲು ಡಿಎಸ್‌ಪಿ ಶಶಿಕಾಂತ್ ಸಿದ್ದರಿಲ್ಲ. ಆದರೆ, ಯುವತಿ ರಾಜಕುಮಾರ ಹೆಸರಿನ ಬೇರೆ ಜಾತಿಯ ಯುವಕನನ್ನು ವಿವಾಹವಾಗಲು ಮುಂದಾಗಿದ್ದಳು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ