ಆ್ಯಪ್ನಗರ

ದಿಲ್ಲಿ: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ವ್ಯಕ್ತಿ, ಯೋಧನ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ!

ದಿಲ್ಲಿಯ ಮೆಟ್ರೋ ನಿಲ್ದಾಣದಲ್ಲಿ ನೋಡ ನೋಡುತ್ತಿದ್ದಂತೆ ವ್ಯಕ್ತಿಯೊಬ್ಬರು ಕುಸಿದು ಬೀಳುತ್ತಾರೆ. ದಿಲ್ಲಿಯ ದಾಬ್ರಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಬೀಳುತ್ತಿದ್ದಂತೆ ಎಚ್ಚೆತ್ತ ಯೋಧ ಕುಳಿತ ಸ್ಥಳದಿಂದ ವೇಗವಾಗಿ ಅವರತ್ತ ಧಾವಿಸುತ್ತಾನೆ. ಕೂಡಲೇ ವ್ಯಕ್ತಿಯ ಎದ್ದೆಯನ್ನ ಜೋರಾಗಿ ಒತ್ತೋದ್ರ ಮೂಲಕ ಹೃದಯ ಬಡಿತ ನಿಲ್ಲದಂತೆ ನೋಡಿಕೊಂಡಿದ್ದಾರೆ.

Vijaya Karnataka Web 19 Jan 2021, 12:05 pm
ಹೊಸದಿಲ್ಲಿ: ಯೋಧರು ಗಡಿ ಕಾಯುತ್ತ ಮಾತ್ರ ನಮ್ಮ ರಕ್ಷಣೆಗೆ ನಿಲ್ಲುತ್ತಿಲ್ಲ, ಬದಲಾಗಿ ಎಲ್ಲ ಸಂದರ್ಭಗಳಲ್ಲೂ ಯೋಧರು ದೇಶ ಸೇವೆ ಹಾಗೂ ಜನ ಸೇವೆ ಮಾಡುತ್ತಿರುವುದು ಇದೀಗ ಮತ್ತೆ ಪ್ರೂವ್‌ ಆಗಿದೆ. ಹೌದು, ದಿಲ್ಲಿಯ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದಾಗ ಅವರಿಗೆ ಸಿಪಿಆರ್‌ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಅವರ ಪ್ರಾಣವನ್ನು ಸಿಐಎಸ್ಎಫ್ ಯೋಧರೊಬ್ಬರು ಉಳಿಸಿದ್ದಾರೆ. ಈ ಘಟನೆ ಮೆಟ್ರೋ ಸ್ಟೇಷನ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಯೋಧನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
Vijaya Karnataka Web cisf jawan


ಘಟನೆ ವಿವರ ಇಲ್ಲಿದೆ!
ದಿಲ್ಲಿಯ ಮೆಟ್ರೋ ನಿಲ್ದಾಣದಲ್ಲಿ ನೋಡ ನೋಡುತ್ತಿದ್ದಂತೆ ವ್ಯಕ್ತಿಯೊಬ್ಬರು ಕುಸಿದು ಬೀಳುತ್ತಾರೆ. ದಿಲ್ಲಿಯ ದಾಬ್ರಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಬೀಳುತ್ತಿದ್ದಂತೆ ಎಚ್ಚೆತ್ತ ಯೋಧ ಕುಳಿತ ಸ್ಥಳದಿಂದ ವೇಗವಾಗಿ ಅವರತ್ತ ಧಾವಿಸುತ್ತಾನೆ. ಕೂಡಲೇ ವ್ಯಕ್ತಿಯ ಎದ್ದೆಯನ್ನ ಜೋರಾಗಿ ಒತ್ತೋದ್ರ ಮೂಲಕ ಹೃದಯ ಬಡಿತ ನಿಲ್ಲದಂತೆ ನೋಡಿಕೊಂಡಿದ್ದಾರೆ.


ನಂತರ ಇನ್ನಿತರ ಆರೋಗ್ಯ ಸಿಬ್ಬಂದಿಗಳು ಬಂದು ವ್ಯಕ್ತಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ಸಂಜೆ 6:50ರ ಸುಮಾರಿಗೆ ಸಂಭವಿಸಿದೆ. ಸಿಸಿ ಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು, ಸಿಐಎಸ್ಎಫ್ ಪೇದೆಯನ್ನು ವಿಕಾಸ್‌ ಎಂದು ಗುರುತಿಸಲಾಗಿದೆ. ಇನ್ನು ಕುಸಿದ ಬಿದ್ದ ವ್ಯಕ್ತಿಯ ಹೆಸರು ಸತ್ಯನಾರಾಯಣ. ದೆಹಲಿಯ ಜಾನಕಪುರಿ ನಿವಾಸಿಯಾಗಿದ್ದಾರೆ. ಒಂದು ವೇಳೆ ಯೋಧ ಆ ರೀತಿ ಮಾಡದೆ ಸುಮ್ಮನಿರುತ್ತಿದ್ದರೆ ಸತ್ಯನಾರಾಯಣ ಸಾವನಪ್ಪುವ ಸಾಧ್ಯತೆ ಇತ್ತು.

ಕೇರಳದಲ್ಲೊಂದು ಹೀನ ಕೃತ್ಯ: 17ರ ಅಪ್ರಾಪ್ತೆ ಮೇಲೆ ಬರೋಬ್ಬರಿ 38 ಮಂದಿಯಿಂದ ಲೈಂಗಿಕ ದೌರ್ಜನ್ಯ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ