ಆ್ಯಪ್ನಗರ

ಮೂವರು ಪುತ್ರಿಯರನ್ನು ಕೊಂದು ತಂದೆ ಆತ್ಮಹತ್ಯೆ

ಗುರುವಾರ ಈ ಘಟನೆ ನಡೆದಿದ್ದು ಮೃತ ದೀಪಕ್ ಗುಪ್ತಾ(30) ನಯೇ ಸಡಕ್ ಪ್ರದೇಶದ ನಿವಾಸಿಯಾಗಿದ್ದ.

TIMESOFINDIA.COM 10 May 2019, 9:15 am
ವಾರಾಣಸಿ: ಆರ್ಥಿಕ ಬಿಕ್ಕಟ್ಟಿನಿಂದ ಬೇಸತ್ತಿದ್ದ ತಂದೆಯೊಬ್ಬ ತನ್ನ ಮೂವರು ಹೆಣ್ಣು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ವಾರಾಣಸಿಯಲ್ಲಿ ನಡೆದಿದೆ.
Vijaya Karnataka Web Death


ಗುರುವಾರ ಈ ಘಟನೆ ನಡೆದಿದ್ದು ಮೃತ ದೀಪಕ್ ಗುಪ್ತಾ(30) ನಯೇ ಸಡಕ್ ಪ್ರದೇಶದ ನಿವಾಸಿಯಾಗಿದ್ದ.

ಮೂವರು ಮಕ್ಕಳು ಅಪ್ರಾಪ್ತರಾಗಿದ್ದು ಅವರಿಗೆ ವಿಷ ಬೆರೆಸಿದ ಪೇಯವನ್ನು ಕುಡಿಸಿದ ಆತ ಬಳಿಕ ತಾನು ಕುಡಿದಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಯಾರು ಕೂಡ ಬದುಕುಳಿಯಲಿಲ್ಲ.

ನಿಬಿಯಾ(9), ಅದ್ವಿತಾ (7) ಮತ್ತು ರಿಯಾ (5) ಮೃತ ಮಕ್ಕಳಾಗಿದ್ದಾರೆ.

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ