ಆ್ಯಪ್ನಗರ

ಫಾರೂಕ್‌ ಅಬ್ದುಲ್ಲಾ ಮನೆಗೆ ಕಾರು ನುಗ್ಗಿಸಿದ ವ್ಯಕ್ತಿ ಬಲಿ

ಭಾರಿ ಭದ್ರತೆಯ ನಡುವೆಯೂ ತರುಣನೊಬ್ಬ ಜಮ್ಮುವಿನಲ್ಲಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ನಿವಾಸಕ್ಕೆ ಕಾರನ್ನು ನುಗ್ಗಿಸಿ ದಾಂಧಲೆ ನಡೆಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

Vijaya Karnataka 5 Aug 2018, 8:20 am
ಜಮ್ಮು/ಹೊಸದಿಲ್ಲಿ: ಭಾರಿ ಭದ್ರತೆಯ ನಡುವೆಯೂ ತರುಣನೊಬ್ಬ ಜಮ್ಮುವಿನಲ್ಲಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರ ನಿವಾಸಕ್ಕೆ ಕಾರನ್ನು ನುಗ್ಗಿಸಿ ದಾಂಧಲೆ ನಡೆಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಇತ್ತ ದಿಲ್ಲಿಯಲ್ಲಿರುವ ಕೇರಳ ಹೌಸ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಹಾಗೂ ರಾಷ್ಟ್ರಧ್ವಜ ಹಿಡಿದು ಅವರತ್ತ ನುಗ್ಗಲು ಯತ್ನಿಸಿದ ಪ್ರಕರಣ ನಡೆದಿದೆ.
Vijaya Karnataka Web Shot


ಜಮ್ಮುವಿನ ಘಟನೆಯಲ್ಲಿ ಕಾರು ನುಗ್ಗಿಸಿದ ವ್ಯಕ್ತಿ ಸಿಆರ್‌ಪಿಎಫ್‌ ಯೋಧರ ಗುಂಡೇಟಿಗೆ ಬಲಿಯಾದರೆ, ಕೇರಳ ಹೌಸ್‌ ಘಟನೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಫಾರೂಕ್‌ ಅಬ್ದುಲ್ಲಾ ಅವರಿಗೆ ಅತ್ಯುನ್ನತ ಝೆಡ್‌ ಪ್ಲಸ್‌ ಶ್ರೇಣಿಯ ಭದ್ರತೆ ಕಲ್ಪಿಸಲಾಗಿದೆ. ಫೂಂಚ್‌ ಜಿಲ್ಲೆಯ ಮುರಾದ್‌ ಅಲಿ ಶಾ (20) ಭದ್ರತೆಯನ್ನೂ ಲೆಕ್ಕಿಸದೇ ಫಾರೂಕ್‌ ಮನೆಗೆ ಮಹೀಂದ್ರಾ ಕಾರು ನುಗ್ಗಿಸಿ ದಾಂಧಲೆ ನಡೆಸಿ ಬಳಿಕ ಸಿಆರ್‌ಪಿಎಫ್‌ ಯೋಧರ ಗುಂಡಿಗೆ ಬಲಿಯಾಗಿದ್ದಾನೆ. ಘಟನೆ ನಡೆದಾಗ ಫಾರೂಕ್‌ ಮನೆಯಲ್ಲಿ ಇರಲಿಲ್ಲ. ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಲಿ ಶಾ ಯಾವುದೇ ಶಸ್ತ್ರಾಸ್ತ್ರ ತಂದಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆ ಅಲಿ ಶಾ ತಂದೆ ಇಮಾಜ್‌ ಹುಸೇನ್‌ ಶಾ ಘಟನೆಯ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.

ಇತ್ತ, ದಿಲ್ಲಿಯ ಕೇರಳ ಹೌಸ್‌ನಲ್ಲಿ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸಿಎಂ ಪಿಣರಾಯಿ ವಿಜಯನ್‌ ಅವರ ಹತ್ಯೆಗೆ ಯತ್ನಿಸಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ವಿಮಲ್‌ ಕುಮಾರ್‌ (40) ಎಂದು ಗುರುತಿಸಲಾಗಿದೆ. ''ವಿಮಲ್‌ ಕುಮಾರ್‌ ಮಾನಸಿಕ ಸ್ಥಿತಿ ಅಷ್ಟು ಸರಿಯಿಲ್ಲ. ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ,'' ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಆರ್‌ಎಸ್‌ಎಸ್‌ ನಾಯಕರೊಬ್ಬರಿಂದ ಜೀವ ಬೆದರಿಕೆ ಬಂದಿತ್ತು, ಅವರ ತಲೆ ಕತ್ತರಿಸುವವರಿಗೆ 1 ಕೋಟಿ ರೂ. ಇನಾಮು ಕೊಡುವುದಾಗಿ ಷೋಷಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ