ಆ್ಯಪ್ನಗರ

ಪೊಲೀಸ್ ಠಾಣೆಯಿಂದಲೇ ಪತ್ನಿಗೆ ತಲಾಖ್ ನೀಡಿ, ಪ್ರೇಯಸಿ ಕೈ ಹಿಡಿದ ಭಂಡನ ವಿರುದ್ಧ ದೂರು

ಪೊಲೀಸ್ ಠಾಣೆಯಿಂದಲೇ ಪತ್ನಿಗೆ ಕರೆ ಮಾಡಿ ತಲಾಖ್ ನೀಡಿದ್ದಲ್ಲದೆ, ಅದೇ ಆವರಣದಲ್ಲಿ ಪ್ರಿಯಸಿಯನ್ನು ಎರಡನೇ ವಿವಾಹವಾದ ಭಂಡನ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜ್ನುರ್‌ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

TIMESOFINDIA.COM 27 Sep 2018, 2:16 pm
ಬಿಜ್ನುರ್: ಪೊಲೀಸ್ ಠಾಣೆಯಿಂದಲೇ ಪತ್ನಿಗೆ ಕರೆ ಮಾಡಿ ತಲಾಖ್ ನೀಡಿದ್ದಲ್ಲದೆ, ಅದೇ ಆವರಣದಲ್ಲಿ ಪ್ರೇಯಸಿಯನ್ನು ಎರಡನೇ ವಿವಾಹವಾದ ಭಂಡನ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜ್ನುರ್‌ನ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
Vijaya Karnataka Web talaq


ಸಂತ್ರಸ್ತೆಯ ತಾಯಿ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿ ಸೇರಿದಂತೆ ಐವರ ವಿರುದ್ಧ ಮಸ್ಲಿಂ ಮಹಿಳೆಯರ ಕಾಯಿದೆ (ವಿವಾಹ ಹಕ್ಕು ರಕ್ಷಣೆ ಸುಗ್ರೀವಾಜ್ಞೆ 2018) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಕಹಾನಿ?
ಕೊತ್ವಾಲಿ ಠಾಣಾ ವ್ಯಾಪ್ತಿಯ ಬಾರ್ವಾಕಿ ಗ್ರಾಮದ ಗುಲ್ಫಂ ಎಂಬಾತ ನೆರೆ ಮನೆಯ ತರನುಂ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಇವರಿಬ್ಬರ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ತಾಯಿಯ ಸೋದರ ಸಂಬಂಧಿಯಾದ ಸುಲ್ತಾನಾತ್ ಎಂಬಾಕೆಯ ಜತೆ ಮದುವೆ ಮಾಡಿಸಿದ್ದರು. ಬಲವಂತವಾಗಿ ಮದುವೆ ಮಾಡಿಸಿದ್ದಾರೆಂಬ ಕಾರಣಕ್ಕೆ ಗುಲ್ಫಂ ಪ್ರತಿನಿತ್ಯ ಪತ್ನಿ ಜತೆ ಜಗಳ ಕಾಯುತ್ತಿದ್ದ. ಹೀಗಾಗಿ ಆಕೆ ಪಾವತಿ ಗ್ರಾಮದಲ್ಲಿರುವ ತನ್ನ ತವರು ಮನೆ ಸೇರಿದ್ದಳು.

ಇದೇ ಸಂದರ್ಭದಲ್ಲಿ ಗುಲ್ಫಂ ಮನೆಗೆ ಬಂದ ಪ್ರೇಯಸಿ ತರನುಂ, ನನ್ನ ವಿವಾಹವಾಗು ಇಲ್ಲದಿದ್ದರೆ, ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಈ ವಿಷಯ ತಿಳಿದ ಮೊದಲ ಪತ್ನಿ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಜಿ ಸಂಧಾನಕ್ಕೆಂದು ಎರಡು ಕಡೆಯವರನ್ನು ಠಾಣೆಗೆ ಕರೆಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಕೆಲವು ಪ್ರಭಾವಶಾಲಿ ವ್ಯಕ್ತಿಗಳ ಒತ್ತಡಕ್ಕೆ ಮಣಿದ ಪೊಲೀಸರು ನಮ್ಮನ್ನು ಠಾಣೆಗೆ ಕರೆತಂದರು. ಬಳಿಕ ಅಲ್ಲಿಂದಲೇ ನನ್ನ ಮಗಳಿಗೆ ಫೋನ್ ಕರೆ ಮಾಡಿ ತಲಾಖ್ ನೀಡಿಸಿದ್ದಾರೆ. ಇದರಲ್ಲಿ ಪೊಲೀಸರು ಸಹ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ.

ನಾನು ನನ್ನ ಅತ್ತೆ ಹಾಗೂ ಪತ್ನಿಯ ಜತೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಅವರು ಅನುಮತಿ ನೀಡಿದ ಬಳಿಕವಷ್ಟೇ ಪ್ರಿಯತಮೆ ತರನುಂನನ್ನು ವಿವಾಹವಾಗಿರುವುದಾಗಿ ಆರೋಪಿ ಗುಲ್ಫಂ ಹೇಳಿಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ