ಆ್ಯಪ್ನಗರ

4000ರೂ ಸ್ಮಾರ್ಟ್ ಫೋನ್‌ಗಾಗಿ 11 ವರ್ಷದ ಬಾಲಕನನ್ನು ಕೊಂದ!

ಯುವಜನಾಂಗದಲ್ಲಿ ಸ್ಮಾರ್ಟೋ ಫೋನ್ ಹುಚ್ಚು ಹೆಚ್ಚಾಗುತ್ತಿದ್ದು, ಅದನ್ನು ಪಡೆಯಲು ಎಂತಹ ಕುಕೃತ್ಯವನ್ನು ಮಾಡಲು ಸಹ ಹಿಂಜರಿಯಲಾರರು. ಅದಕ್ಕೊಂದು ನಿದರ್ಶನವಿದು.

TIMESOFINDIA.COM 12 Sep 2019, 2:19 pm
ಅಹಮದಾಬಾದ್: ಸ್ಮಾರ್ಟ್‌ಫೋನ್ ಹುಚ್ಚಿಗೆ ಬಿದ್ದ 21 ವರ್ಷದ ಯುವಕನೊಬ್ಬ, 11 ವರ್ಷದ ಪುಟ್ಟ ಬಾಲಕನನ್ನು ಹತ್ಯೆಗೈದ ಕರಾಳ ಘಟನೆ ಗುಜರಾತ್‌ನಲ್ಲಿ ನಡೆದಿದೆ.
Vijaya Karnataka Web Mobile 34


ಅಹಮದಾಬಾದ್ ಗ್ರಾಮೀಣ ಪೊಲೀಸ್ ಇಲಾಖೆಯ ಸ್ಥಳೀಯ ಅಪರಾಧ ದಳದ ಅಧಿಕಾರಿಗಳು ಬುಧವಾರ ಆರೋಪಿಯನ್ನು ಬಂಧಿಸಿದ್ದು. ಆತನನ್ನು ಪ್ರವೀಣ್ ಬಂಜಾನಿಯಾ ಎಂದು ಗುರುತಿಸಲಾಗಿದೆ. ಈತ ರಾಂಪುರ ಬಳಿಯ ಕಾಜ್ ನಿವಾಸಿಯಾಗಿದ್ದಾನೆ.

ಆಗಸ್ಟ್ 2 ರಂದು ಈ ಹತ್ಯೆ ನಡೆದಿದ್ದು, ಕೃಷಿ ಕಾರ್ಮಿಕರ ಮಗ ಪುನಾಜಿ ಅಮೃತ್‌ಜಿ ಸ್ಮಾರ್ಟ್‌ಫೋನ್‌ನಲ್ಲಿ ಆಟವಾಡುತ್ತ ಮನೆಗೆ ಹೋಗುತ್ತಿದ್ದ. ಆತನನ್ನು ನೋಡಿದ ಬಂಜಾನಿಯಾ ಮೊಬೈಲ್ ಫೋನ್ ಕಿತ್ತುಕೊಳ್ಳಬೇಕೆಂದು ಯೋಚಿಸಿದ.

ಆತ ಮೊಬೈಲ್ ಫೋನ್ ಕಸಿದುಕೊಳ್ಳಲು ಬಂದಾಗ ಬಾಲಕ ಪ್ರತಿಭಟಿಸಿದ್ದಾನೆ ಮತ್ತು ಕೂಗಾಡಿದ್ದಾನೆ. ತಕ್ಷಣ ಆತನ ಬಾಯಿ ಮುಚ್ಚಿ ಪೊದೆಯೊಂದರ ಬಳಿ ಎಳೆಯೊಯ್ದ ಆರೋಪಿ ರಹಿತವಾದ ಆಯುಧದಿಂದ ಕುತ್ತಿಗೆಯನ್ನು ಕತ್ತರಿಸಿದ್ದಾನೆ. ಬಳಿಕ ಶವವನ್ನು ಹೊಂಡ ತೆಗೆದು ಹೂತು ಫೋನ್‌ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ.

ಬಾಲಕನನ್ನು ಕೊಂದು ಕಿತ್ತುಕೊಂಡ ಮೊಬೈಲ್‌ ಅನ್ನಾತ ಹಲವು ದಿನಗಳ ಕಾಲ ಸ್ವಿಚ್ಡ್ ಆಫ್ ಮಾಡಿಟ್ಟಿದ್ದ. ಮಂಗಳವಾರ ಆತ ಆ ಮೊಬೈಲ್‌ನ್ನು ಆನ್ ಮಾಡಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ನನ್ನ ಬಳಿ Android phone ಇರಲಿಲ್ಲ. ಹೇಗಾದರೂ ಮಾಡಿ ಪಡೆಯಲೇ ಬೇಕೆಂದು ಹಠ ತೊಟ್ಟಿದ್ದೆ. ಬಾಲಕನ ಬಳಿ ಮೊಬೈಲ್ ಇರೋದನ್ನ ನೋಡಿ ಕಸಿದುಕೊಳ್ಳಲು ಹೋಗಿ , ಕೊಲೆಗೈದು ಬಿಟ್ಟೆ ಎಂದಾತ ತಪ್ಪೊಪ್ಪಿಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ