ಆ್ಯಪ್ನಗರ

ಕ್ರಿಕೆಟ್‌ ಬ್ಯಾಟ್‌ನಿಂದ ಬಡಿದು ಯುವಕನ ಕೊಲೆ

ನೆಟ್ಟಗೆ ಕ್ರಿಕೆಟ್‌ ಆಡಿ ಎಂದು ಬೈದಿದ್ದಕ್ಕೆ ರೊಚ್ಚಿಗೆದ್ದ ಅಪ್ರಾಪ್ತ ಬಾಲಕರು ಕ್ರಿಕೆಟ್‌ ಬ್ಯಾಟ್‌ನಲ್ಲಿ ಯುವಕನನ್ನು ಬಡಿದು ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 29 Jun 2017, 1:30 pm
ಹೊಸದಿಲ್ಲಿ: ನೆಟ್ಟಗೆ ಕ್ರಿಕೆಟ್‌ ಆಡಿ ಎಂದು ಬೈದಿದ್ದಕ್ಕೆ ರೊಚ್ಚಿಗೆದ್ದ ಅಪ್ರಾಪ್ತ ಬಾಲಕರು ಕ್ರಿಕೆಟ್‌ ಬ್ಯಾಟ್‌ನಲ್ಲಿ ಯುವಕನನ್ನು ಬಡಿದು ಕೊಲೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
Vijaya Karnataka Web man hit by ball protests boy beats him to death
ಕ್ರಿಕೆಟ್‌ ಬ್ಯಾಟ್‌ನಿಂದ ಬಡಿದು ಯುವಕನ ಕೊಲೆ


ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ ಅಂಗದ್‌ ಗುಪ್ತಾ ಎಂಬಾತ ಮಂಗಳವಾರ ಸಂಜೆ ವೇಳೆ ತನ್ನ ಮಾನವ ಮನೆಗೆ ತೆರಳುತ್ತಿದ್ದ ವೇಳೆ ಮೈದಾನಲ್ಲಿ ಕ್ರಿಕೆಟ್‌ ಆಡುತ್ತಿದ್ದ ಮಕ್ಕಳ ಕ್ರಿಕೆಟ್‌ ಚೆಂಡು ಗುಪ್ತಾ ತಲೆಗೆ ಬಿದ್ದಿದೆ. ಇದರಿಂದ ಸಿಟ್ಟಿಗೆದ್ದ ಗುಪ್ತಾ ಯಾರಿಗೂ ತೊಂದರೆಯಾಗದಂತೆ ಆಡುವಂತೆ ಹೇಳಿ ಮನೆಗೆ ತೆರಳಿದ್ದಾರೆ.

ಗುಪ್ತಾ ಮಾತಿನಿಂದ ರೊಚ್ಚಿಗೆದ್ದ ಬಾಲಕರು ಮೊದಲಿಗೆ ಸುಮ್ಮನಾದರೂ ಕೆಲ ಸಮಯದ ಬಳಿಕ ಗುಪ್ತಾ ಮನೆಗೆ ಬಂದು ಜಗಳವಾಡಿದ್ದಾರೆ. ಬಳಿಕ ಬಾಲಕನೊಬ್ಬ ಗುಪ್ತಾಗೆ ಬ್ಯಾಟ್‌ನಿಂದ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಗುಪ್ತಾ ಕೂಡಾ ಹೊಡೆಯಲು ಯತ್ನಿಸಿದರಾದರೂ ಬಾಲಕ ಒಂದೇ ಸಮನೆ ಬ್ಯಾಟ್‌ನಿಂದ ತಲೆಗೆ ರಕ್ತ ಬರುವವೆಗೂ ಹೊಡೆದು ಬಳಿಕ ಪರಾರಿಯಾಗಿದ್ದಾರೆ.

ಕೆಲ ಸಮಯದ ಬಳಿಕ ಗುಪ್ತಾ ಅವರ ಮಾವ ಮನೆಯಿಂದ ಹೊರ ಬಂದು ನೋಡಿದ ವೇಳೆ ರಕ್ತದ ಮಡುವಿನಲ್ಲಿ ಗುಪ್ತಾ ನೆಲದ ಮೇಲೆ ಬಿದ್ದಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನು ಆಧರಿಸಿ ಪೊಲೀಸರು ಗುಪ್ತಾರನ್ನು ಕೊಲೆ ಮಾಡರುವ ಬಾಲಕ ಮನೆಯನ್ನು ಹುಡುಕಿ ಬಂಧಿಸಿದ್ದಾರೆ. ಈ ವೇಳೆ ಬಾಲಕ ಪರಾರಿಯಾಗಲು ಸಂಚು ರೂಪಿಸಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ