ಆ್ಯಪ್ನಗರ

ವರದಕ್ಷಿಣೆಗಾಗಿ ವಿವಾಹ ನಿರಾಕರಿಸಿದ ವರನ ತಲೆ ಬೋಳಿಸಿದರು!

ವಿವಾಹವಾಗಿ ನೆಮ್ಮದಿಯ ಜೀವನ ಸಾಗಿಸಬೇಕಾಗಿದ್ದ ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ನಿವಾಸಿ ಅಬ್ದುಲ್ ಕಲಾಂ, ಮದುವೆ ಮನೆಯಲ್ಲಿ ಕಿರಿಕ್ ಮಾಡಿಕೊಂಡು ಪೇಚೆಗೆ ಸಿಲುಕಿದ್ದಾನೆ.

Navbharat Times 22 Oct 2018, 12:02 pm
ಲಖನೌ: ವರದಕ್ಷಿಣೆಯಾಗಿ ಬೈಕ್ ಹಾಗೂ ಬಂಗಾರ ನೀಡಲಿಲ್ಲವೆಂದು ವಿವಾಹ ನಿರಾಕರಿಸಿದ ಕಾರಣ ಆಕ್ರೋಶಗೊಂಡ ವಧುವಿನ ಕಡೆಯವರು ವರನನ್ನು ಕಟ್ಟಿಹಾಕಿ ತಲೆ ಬೋಳಿಸಿರುವ ಘಟನೆ ಇಲ್ಲಿನ ಇಂದಿರಾ ನಗರದ ಕಲ್ಯಾಣ ಮಂಟಪದಲ್ಲಿ ನಡೆದಿದೆ.
Vijaya Karnataka Web tale


ವಿವಾಹವಾಗಿ ನೆಮ್ಮದಿಯ ಜೀವನ ಸಾಗಿಸಬೇಕಾಗಿದ್ದ ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ನಿವಾಸಿ ಅಬ್ದುಲ್ ಕಲಾಂ, ಮದುವೆ ಮನೆಯಲ್ಲಿ ಕಿರಿಕ್ ಮಾಡಿಕೊಂಡು ಪೇಚೆಗೆ ಸಿಲುಕಿದ್ದಾನೆ.

ಹೌದು, ವಿವಾಹದ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಬೈಕ್ ಹಾಗೂ ಬಂಗಾರ ನೀಡಬೇಕೆಂದು ವರ, ವಧುವಿನ ಕುಟುಂಬಸ್ಥರನ್ನು ಪೀಡಿಸಿದ್ದಾನೆ. ಇದಕ್ಕೆ ವಧುವಿನ ಕಡೆಯವರು ನಿರಾಕರಿಸಿದ ಕಾರಣ ಮದುವೆಯನ್ನೇ ಮುರಿಯಲು ಮುಂದಾದ ಕಾರಣ ಆಕ್ರೋಶಗೊಂಡ ವಧುವಿನ ಕಡೆಯವರು ಆತನನ್ನು ಕಟ್ಟಿಹಾಕಿ ತಲೆ ಬೋಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

'ನಾನು ವಿವಾಹ ಮಂಟಪದಲ್ಲಿ ಯಾವುದೇ ಹೊಸ ಬೇಡಿಕೆನ್ನಿಟ್ಟಿರಲಿಲ್ಲ. ವಿವಾಹಕ್ಕೂ ಮುನ್ನವೇ ವರದಕ್ಷಣೆಯಾಗಿ ಬೈಕ್ ಹಾಗೂ ಬಂಗಾರ ನೀಡಬೇಕೆಂಬ ಮಾತಕತೆ ನಡೆದಿತ್ತು' ಎಂದು ವರ ಹೇಳಿಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ