ಆ್ಯಪ್ನಗರ

ಫ್ಲೈ ಓವರ್‌ನಿಂದ ಹಾರಿ ಆತ್ಮಹತ್ಯೆ: ಡೈರಿ ಹೇಳಿತು ಸಾವಿನ ಹಿಂದಿನ ರಹಸ್ಯ

ಮೃತನನ್ನು ಸೌರಭ್ ಕುಮಾರ್ ರಜಪೂತ್ ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ( ಪೂರ್ವ) ಜಸ್ಮಿತ್ ಸಿಂಗ್ ಹೇಳಿದ್ದಾರೆ.

TIMESOFINDIA.COM 11 Feb 2019, 3:21 pm
ಹೊಸದಿಲ್ಲಿ: ನಿರುದ್ಯೋಗಕ್ಕೆ ಬೇಸತ್ತ 31 ವರ್ಷದ ವ್ಯಕ್ತಿಯೊಬ್ಬ ಮೇಲ್ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸದಿಲ್ಲಿಯ ಮಯೂರ್ ವಿಹಾರದಲ್ಲಿ ಶುಕ್ರವಾರ ನಡೆದಿದೆ. ಕೆಲಸ ಸಿಗದಿದ್ದರಿಂದ ಒತ್ತಡಕ್ಕೊಳಗಾಗಿದ್ದ ಆತ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ ಎಂಬುದು ಆತನ ಡೈರಿಯಿಂದ ಬಯಲಾಗಿದೆ.
Vijaya Karnataka Web 67937389


ಮೃತನನ್ನು ಸೌರಭ್ ಕುಮಾರ್ ರಜಪೂತ್ ಎಂದು ಗುರುತಿಸಲಾಗಿದೆ ಎಂದು ಡಿಸಿಪಿ ( ಪೂರ್ವ) ಜಸ್ಮಿತ್ ಸಿಂಗ್ ಹೇಳಿದ್ದಾರೆ.

ದೊರೆತಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಶುಕ್ರವಾರ ಸಂಜೆ ಫ್ಲೈ ಓವರ್ ಹತ್ತಿದ ಆತ ಮೇಲಿಂದ ಕೆಳಕ್ಕೆ ಜಿಗಿದಿದ್ದಾನೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತನದಾಗಲೇ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಮೊದಲು ಆತ ಅಪಘಾತಕ್ಕೀಡಾಗಿದ್ದಾನೆ ಎಂದು ಭಾವಿಸಲಾಗಿತ್ತು, ಆದರೆ ತನಿಖೆ ಬಳಿಕ ಆತ ಮೇಲಿಂದ ಜಿಗಿದಿದ್ದಾನೆ ಎಂದು ತಿಳಿದುಬಂದಿದೆ.

ಮೃತನ ಶವವನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಬಿಹಾರ್ ಬಕ್ಸಾರ್ ಜಿಲ್ಲೆಯಲ್ಲಿರುವ ಆತನ ಪರಿವಾರದವರಿಗೆ ಮಾಹಿತಿ ರವಾನಿಸಲಾಗಿದೆ.

ರಜಪೂತ್ ಎಂಜಿನಿಯರಿಂಗ್ ಪದವೀಧರನಾಗಿದ್ದು ಕಳೆದ 3 ತಿಂಗಳ ಹಿಂದೆ ದಿಲ್ಲಿಗೆ ಬಂದಿದ್ದ . ಎಷ್ಟು ಕಂಪನಿಗಳಿಗೆ ಅಲೆದಾಡಿದರೂ ಕೆಲಸ ಗಿಟ್ಟಿಸಲು ವಿಫಲನಾಗಿದ್ದ ಆತ ಮನೆಗೆ ಆರ್ಥಿಕವಾಗಿ ಆಧಾರವಾಗಲಾಗದ್ದಕ್ಕೆ ಖಿನ್ನನಾಗಿದ್ದ . ಇದೇ ಬೇಸರದಿಂದ ಸಾವಿಗೆ ಶರಣಾಗಿದ್ದಾನೆ ಎಂದು ಆತನ ಡೈರಿಯಿಂದ ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ