ಆ್ಯಪ್ನಗರ

ಮಾಟಗಾತಿ ಎಂದುಕೊಂಡು ಚಿಕ್ಕಮ್ಮನ ಕೊಲೆ; ದೆವ್ವವಾಗಿ ಕಾಡುವ ಭಯಕ್ಕೆ ಏನು ಮಾಡಿದ ಗೊತ್ತೇ!

ತಮ್ಮ ಕುಟುಂಬದ ಸಮಸ್ಯೆಗೆ ಚಿಕ್ಕಮ್ಮನೇ ಕಾರಣ ಎಂದುಕೊಂಡು ಆಕೆಯನ್ನು ಕೊಂದ. ಸಿಕ್ಕಿ ಹಾಕಿಕೊಳ್ಳಬಹುದೆಂಭ ಭಯದಲ್ಲಿ ಆಕೆಯ ಗಂಡನನ್ನು ಉಳಿಸಲಿಲ್ಲ.

TIMESOFINDIA.COM 5 Sep 2019, 1:01 pm
ಭೋಪಾಲ್: ತಮ್ಮ ಕುಟುಂಬಕ್ಕೆ ಕೆಟ್ಟದಾಗಲೆಂದು ಮಾಟ ಮಾಡಿಸುತ್ತಿದ್ದಾರೆಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬ, ತನ್ನ ಚಿಕ್ಕಮ್ಮ( ತಾಯಿಯ ಸಹೋದರಿ), ಚಿಕ್ಕಪ್ಪನನ್ನು ಕೊಂದು ಹಾಕಿದ ಹೇಯ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
Vijaya Karnataka Web Kill


ಆರೋಪಿಯನ್ನು 43 ವರ್ಷದ ಶಂಖು ಗೊಂಡ್ ಎಂದು ಗುರುತಿಸಲಾಗಿದ್ದು, ಆತನನ್ನು ಬುಧವಾರ ಬಂಧಿಸಲಾಗಿದೆ. ತನ್ನ ತಪ್ಪನ್ನು ಒಪ್ಪಿಕೊಂಡಿರುವ ಆತ ಚಿಕ್ಕಮ್ಮ ಮಾಟಗಾತಿಯಾಗಿದ್ದಳು, ಎಂದು ಹೇಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ನುಪುರ್‌ಜಿಲ್ಲಾ ಕೇಂದ್ರದಿಂದ 12 ಕಿಮೀ ದೂರದಲ್ಲಿರುವ ದುಧ್‌ಮಾನಿಯಾ ಗ್ರಾಮದ ಜನರು ಮಂಗಳವಾರದಂದು ಎರಡು ಶವಗಳು ಕಾಡಲ್ಲಿ ಬಿದ್ದಿರುವುದಾಗಿ ಹೇಳಿದ್ದರು. ಅದರಲ್ಲಿ ಒಬ್ಬ ಭಾಗ್‌ವಂದಿನ್ ಗೊಂಡ್ (65) ಆಗಿದ್ದು, ಆತನ ದೇಹದ ಮೇಲೆ ಚಾಕುವಿನಿಂದ ಚುಚ್ಚಿದ ಅನೇಕ ಗುರುತುಗಳಿದ್ದವು. ಮತ್ತೊಬ್ಬಾಕೆ ಆತನ ಪತ್ನಿ ಬೇಶಾನಿ ಗೊಂಡ್ (60) ಆಗಿರಬಹುದು. ರುಂಡ ಇಲ್ಲದಿರುವುದರಿಂದ ಗುರುತಿಸುವುದು ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ ಹೇಳಿದ್ದರು.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿದರು. ಆದರೆ ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಹೆಚ್ಚು ಕಷ್ಟವಾಗಲಿಲ್ಲ. ಕಾರಣ ಆತ ರಕ್ತ ಲೇಪಿತ ಬಟ್ಟೆ ಮತ್ತು ಚಾಕುವಿನೊಂದಿಗೆ ನಡೆದು ಬರುತ್ತಿದ್ದುದನ್ನು ಊರವರು ನೋಡಿದ್ದರು.

ವಿಚಾರಣೆಗೊಳಪಡಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ತನ್ನ ಮನೆಯವರಿಗೆ ಕೆಟ್ಟದಾಗಲೆಂದು ಚಿಕ್ಕಮ್ಮ ಮಾಟ ಮಾಡಿಸುತ್ತಿದ್ದಳು. ಈ ಕಾರಣದಿಂದಲೇ ನಮಗೆ ಪದೇ ಪದೇ ಕೆಡುಕಾಗುತ್ತಿತ್ತು. ಇತ್ತೀಚಿಗೆ ಮಗನ ಆರೋಗ್ಯ ಕೆಟ್ಟಿತ್ತು. ಆಕಳು ಸತ್ತಿತ್ತು. ಇದಕ್ಕೆಲ್ಲ ಚಿಕ್ಕಮ್ಮನೇ ಕಾರಣ ಎಂದು ಆಕೆಯನ್ನು ಕೊಂದು ಹಾಕಿದೆ ಎಂದು ಆತ ಹೇಳಿದ್ದಾಗಿ ಅನ್ನುಪುರ್ ಹೆಚ್ಚುವರಿ ಎಸ್ಪಿ ಅಭಿಷೇಕ್ ರಾಜನ್ ಹೇಳಿದ್ದಾರೆ.

ಬಹಿರ್ದೆಸೆಗೆಂದು ಚಿಕ್ಕಮ್ಮ ಕಾಡಲ್ಲಿ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿದ ಆತ, ಚಾಕುವಿನಿಂದ ಚುಚ್ಚಿ ಕೊಂದು, ತಲೆ ಕಡಿದು ಹೂತು ಹಾಕಿದ. ಬಳಿಕ ಆಕೆಯನ್ನು ಹುಡುಕಿಕೊಂಡು ಬರುತ್ತಿದ್ದ ಚಿಕ್ಕಪ್ಪನನ್ನು ಸಹ ಕೊಂದು ಅಲ್ಲಿಂದ ಪರಾರಿಯಾದ. ಆತ ರಕ್ತ ಲೇಪಿತ ಬಟ್ಟೆಯೊಂದಿಗೆ ಓಡಿ ಹೋಗುತ್ತಿದ್ದುದನ್ನು ಗ್ರಾಮದ ಕೆಲ ಜನರು ಕಂಡಿದ್ದರು. ಹೀಗಾಗಿ ಪೊಲೀಸರ ಕೆಲಸ ಸುಗಮವಾದಂತಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ