ಆ್ಯಪ್ನಗರ

ಚಲಿಸುವ ರೈಲು ಹತ್ತಲು ಹೋಗಿ ಕಾಲು ಕಳೆದುಕೊಂಡ

ಚಲಿಸುತ್ತಿರುವ ರೈಲನ್ನು ಹತ್ತುವ ದುಸ್ಸಾಹಸಕ್ಕೆ ಮುಂದಾಗಿ ವ್ಯಕ್ತಿಯೊಬ್ಬ ಸಾವಿನ ದವಡೆಯಿಂದ ಪಾರಾದ ಘಟನೆ ವರದಿಯಾಗಿದೆ.

Mumbai Mirror 19 Apr 2017, 5:41 pm
ದಾದರ್‌: ಚಲಿಸುತ್ತಿರುವ ರೈಲನ್ನು ಹಿಡಿಯಲು ಹೋಗಿ ಅದೆಷ್ಟೋ ಜನರು ತಮ್ಮ ಜೀವವನ್ನೇ ಕಳೆದುಕೊಂಡಿರುವ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ಇದೇ ದುಸ್ಸಾಹಸಕ್ಕೆ ಮುಂದಾಗಿ ಸಾವಿನ ದವಡೆಯಿಂದ ಪಾರಾದ ಘಟನೆ ವರದಿಯಾಗಿದೆ.
Vijaya Karnataka Web man lives to tell the tale after 2 coaches pass over him
ಚಲಿಸುವ ರೈಲು ಹತ್ತಲು ಹೋಗಿ ಕಾಲು ಕಳೆದುಕೊಂಡ


ದಾದರ್‌ ರೈಲ್ವೇ ನಿಲ್ದಾಣದಲ್ಲಿ ಸೋಮವಾರದಂದು ಮುನ್ನ ಕುಮಾರ್‌ ಹಾಗೂ ಕುಟುಂಬ ಶಿರಡಿಗೆ ಭೇಟಿ ನೀಡಲು ದಾದರ್‌ ರೈಲ್ವೇ ನಿಲ್ದಾಣದಿಂದ ಹೊರಡಿದ್ದರು. ಮುನ್ನಾ ಕುಟುಂಬ ನಿಲ್ದಾಣಕ್ಕೆ ತಲುಪಿದಾಗ ರೈಲು ಹೊರಟಿತ್ತು. ಹೀಗಾಗಿ ಮುನ್ನಾ ಚಲಿಸುತ್ತಿರುವ ರೈಲಿನ್ನು ಏರಲು ಮುಂದಾಗಿದ್ದಾರೆ.

ಆದರೆ ಆಯ ತಪ್ಪಿ ಮುನ್ನ ರೈಲು ಹಾಗೂ ಪ್ಲಾಟ್‌ಫಾರ್ಮ್‌ ನಡುವಿನ ಸಂದಿಯಲ್ಲಿ ಸಿಲುಕಿ ಹಾಕಿಕೊಂಡು ರಕ್ಷಣೆಗಾಗಿ ಕಿರುಚಿ ಕೊಂಡಿದ್ದಾರೆ. ' ರೈಲು ನಿಧಾನವಾಗಿಯೇ ಚಲಿಸುತ್ತಿತ್ತು, ಹೀಗಾಗಿ ನಾನು ರೈಲು ಏರಬಹುದು ಎಂಬ ಯೋಚನೆಯಲ್ಲಿ ಬೋಗಿ ಏರಲು ಯತ್ನಿಸಿದೆ. ಆದರೆ ಕಾಲು ಜಾರಿ ಸಂದಿ ಮಧ್ಯೆ ಸಿಲುಕಿಕೊಂಡೆ' ಎನ್ನುತ್ತಾರೆ ಮುನ್ನ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ರೈಲನ್ನು ನಿಲ್ಲಿಸಲಾಯಿತಾದರೂ, ಈ ವೇಳೆಗಾಗಲೇ ಇವರ ಕಾಲಿನ ಮೇಲೆ ಎರಡು ಬೋಗಿಗಳು ಹರಿದಿದ್ದವು ಪರಿಣಾಮ ಇವರ ಒಂದು ಕಾಲು ಮುರಿದುಕೊಂಡಿದೆ. ಸದ್ಯ ಮುನ್ನಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ