ಆ್ಯಪ್ನಗರ

ಅಪರಿಚಿತರಿಗೆ ಲಿಫ್ಟ್‌ ಕೊಟ್ಟರೆ ದಂಡ ಕಟ್ಟಬೇಕಾದೀತು... ಹುಷಾರ್...!

ದಾರಿಯಲ್ಲಿ ಸಿಕ್ಕವರಿಗೆ ಲಿಫ್ಟ್‌ ನೀಡುವ ಮುನ್ನ ಎಚ್ಚರದಿಂದಿರಿ. ಅವರ ವ್ಯಕ್ತಿತ್ವದ ಬಗ್ಗೆ ಅಲ್ಲ. ಪೊಲೀಸರು ಕಂಡರೆ, ದಂಡ ಕಟ್ಟಬೇಕಾಗುತ್ತದೆ...

Mumbai Mirror 25 Jun 2018, 3:46 pm
ಮುಂಬಯಿ: ದಾರಿಯಲ್ಲಿ ಸಿಕ್ಕವರಿಗೆ ಲಿಫ್ಟ್‌ ನೀಡುವ ಮುನ್ನ ಎಚ್ಚರದಿಂದಿರಿ. ಅವರ ವ್ಯಕ್ತಿತ್ವದ ಬಗ್ಗೆ ಅಲ್ಲ. ಪೊಲೀಸರು ಕಂಡರೆ, ದಂಡ ಕಟ್ಟಬೇಕಾಗುತ್ತದೆ.
Vijaya Karnataka Web ಮುಮಬಾಇ


ಹೌದು... ಮಳೆಯಲ್ಲಿ ಒದ್ದೆಯಾಗುತ್ತಿದ್ದ ಮೂವರಿಗೆ ಲಿಫ್ಟ್‌ ನೀಡಿದ ಕಾರಣಕ್ಕೆ ಮುಂಬಯಿಯ ನಿತಿನ್‌ ನಾಯರ್‌ 1500 ರೂ. ದಂಡ ಕಟ್ಟಿದ್ದಾರೆ.

ಅಪರಿಚಿತರನ್ನು ಸ್ವಂತ ವಾಹನದಲ್ಲಿ ಲಿಫ್ಟ್‌ ನೀಡುವುದು ಅಪರಾಧ ಎಂದ ಪೊಲೀಸ್‌ ನಿತಿನ್‌ನ (32) ಚಾಲನಾ ಪರವಾನಗಿ ಪಡೆದುಕೊಂಡು, ದಂಡದ ಚಲನ್‌ ಕೊಟ್ಟು ಹೋಗಿದ್ದಾರೆ. ಮತ್ತೊಬ್ಬರಿಗೆ ಸಹಾಯ ಮಾಡಲು ಮುಂದಾಗಿದ್ದಕ್ಕೆ, ತಮ್ಮ ಕಚೇರಿ ಕೆಲಸಕ್ಕೆ ಒಂದು ದಿನ ರಜೆ ಹಾಕಿ, ಲೈಸನ್ಸ್‌ ಪಡೆಯಲು ಹರ ಪೊಲೀಸ್‌ ಠಾಣೆ ಹಾಗೂ ನ್ಯಾಯಾಲಯಕ್ಕೆ ಅಲೆದಾಡಿದ್ದಾರೆ.

ಮುಂಬಯಿ ಮಿರರ್‌ ಜತೆ ಸಾಮಾಜಿಕ ತಾಣದ ಮೂಲಕ ಮಾತನಾಡಿದ ನಿತಿನ್‌, ಲಿಫ್ಟ್‌ ನೀಡುವುದು ಸಂಚಾರ ನಿಯಮ ಉಲ್ಲಂಘನೆ ಎಂದಾದಲ್ಲಿ, ಅಪಘಾತದ ವೇಳೆಯಲ್ಲೂ ಯಾರೊಬ್ಬರೂ ಸಹಾಯಕ್ಕೆ ಮುಂದೆ ಬರಲಾರರು. ಇಂತಹ ನಿಯಮಗಳು ಅಮಾನವೀಯ ಗುಣವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 66(1), ಸೆಕ್ಷನ್‌ 192(2)ರಲ್ಲಿ ಬೇರೆಯವರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸವರು ಹೇಳಿದ್ದಾರೆ.

ಅಂಧೇರಿಯಲ್ಲಿರುವ ತನ್ನ ಮನೆಯಿಂದ ಕಚೇರಿಗೆ ತೆರಳುವ ಭಾಗದಲ್ಲಿ ನಿತಿನ್‌ ಮಳೆಯಲ್ಲಿ ಒದ್ದೆಯಾಗುತ್ತಿದ್ದ ಮೂವರನ್ನು ನೋಡಿದ್ದಾರೆ. ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮೂವರಿಗೆ ನಿತಿನ್‌ ಗಾಂಧಿನಗರಕ್ಕೆ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ತಮ್ಮ ವಾಹನಕ್ಕೆ ಅಪರಿಚಿತರನ್ನು ಹತ್ತಿಸಿಕೊಳ್ಳುವುದನ್ನು ಕಂಡ ಪೊಲೀಸ್‌, ನಿತಿನ್‌ನನ್ನು ನಿಲ್ಲಿಸಿ, ಅಪರಾಧದ ಬಗ್ಗೆ ವಿವರಿಸಿ, ಅವರ ಚಾಲನಾ ಪರವಾನಗಿ ವಶಕ್ಕೆ ಪಡೆದಿದ್ದಾರೆ. ನಿತಿನ್‌ನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನ್ಯಾಯಾಲಯದಲ್ಲಿ ದಂಡ ಕಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಘನ ನ್ಯಾಯಾಲಯ ಪರಿಶೀಲಿಸಿರುವ ಸಾಧ್ಯತೆಗಳಿವೆ. ಇದಲ್ಲದೆ ಅಧಿಕಾರಿಗಳಲ್ಲೂ ಸೆಕ್ಷನ್‌ 66/192 ಅಡಿ ಪ್ರಕರಣ ದಾಖಲಿಸುವ ಮುನ್ನ ಪರಿಶೀಲಿಸುವಂತೆ ಸಾಕಷ್ಟು ಬಾರಿ ನಿರ್ದೇಶಿಸಲಾಗಿದೆ. ಉತ್ತಮ ಭಾವನೆಯಿಂದ ಮತ್ತೊಬ್ಬರಿಗೆ ಸಹಾಯಕ್ಕಾಗಿ ಮಾಡುವ ಕೆಲಸಕ್ಕೆ ಕಾನೂನು ಅಡ್ಡಿಯಾಗಬಾರದಿತ್ತು. ಈ ಪ್ರಕರಣದ ಕುರಿತು ಮತ್ತೊಮ್ಮೆ ವಿಚಾರಣೆ ನಡೆಸುವುದಾಗಿ ಸಂಚಾರ ವಿಭಾಗದ ಉಪ ಆಯುಕ್ತ ನಿತಿನ್‌ ಪವಾರ್‌ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರು ಹಾಗೂ ವಾಹನ ಮಾಲಿಕರ ಸುರಕ್ಷತೆ ದೃಷ್ಟಿಯಿಂದ ಖಾಸಗಿ ವಾಹನಗಳಲ್ಲಿ ಅಪರಿಚಿತರನ್ನು ಕರೆದುಕೊಂಡು ಹೋಗುವುದು ಕಾನೂನು ಪ್ರಕಾರ ಅಪರಾಧ ಎಂದು ನಿತಿನ್‌ಗೆ ಕೋರ್ಟ್‌ ತಿಳಿಸಿ, ದಂಡ ಕಟ್ಟಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ