ಆ್ಯಪ್ನಗರ

ಅವನು ಪೆಟ್ರೋಲ್ ಸುರಿದುಕೊಂಡ, ಪ್ರಿಯತಮೆ ಕಡ್ಡಿ ಗೀರಿದಳು

ಉತ್ತರ ಪ್ರದೇಶದಲ್ಲಿ ಈ ದಾರುಣ ಕೃತ್ಯ ನಡೆದಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವಕನನ್ನು ಅರವಿಂದ್ ನಿಶಾದ್ (20) ಎಂದು ಗುರುತಿಸಲಾಗಿದೆ.

TIMESOFINDIA.COM 28 Apr 2019, 3:45 pm
ಲಖನೌ: ನೀನು ನನ್ನನ್ನು ಮದುವೆಯಾಗದಿದ್ದರೆ ಬೆಂಕಿ ಹಚ್ಚಿಕೊಂಡು ಸಾಯುತ್ತೇನೆ ಎಂದು ಬೆದರಿಸಲು ಆತ ಮೈಮೇಲೆ ಪೆಟ್ರೋಲ್ ಸುರಿದುಕೊಂಡ. ಬೆದರಿಸಿಯಾದರೂ ಆಕೆಯನ್ನು ಪಡೆಯುವುದು ಆತನ ಉದ್ದೇಶವಾಗಿತ್ತು. ಆದರಾಕೆ ಬಗ್ಗಲಿಲ್ಲ. ಬದಲಾಗಿ ಕಡ್ಡಿ ಗೀರಿ ಬೆಂಕಿ ಹಚ್ಚಿದಳು. 60% ಸುಟ್ಟಗಾಯಗಳಿಂದ ಬಳಲುತ್ತಿರುವ ಆತನೀಗ ಆಸ್ಪತ್ರೆ ಪಾಲಾಗಿದ್ದಾನೆ.
Vijaya Karnataka Web Fire- Kill


ಉತ್ತರ ಪ್ರದೇಶದಲ್ಲಿ ಈ ದಾರುಣ ಕೃತ್ಯ ನಡೆದಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವಕನನ್ನು ಅರವಿಂದ್ ನಿಶಾದ್ (20) ಎಂದು ಗುರುತಿಸಲಾಗಿದೆ.

ಖಾದ್ರಾ ಪ್ರದೇಶದ ನಿವಾಸಿಯಾಗಿದ್ದ ಆತ ತನ್ನ ನೆರೆಮನೆಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆ ಅಪ್ರಾಪ್ತೆಯಾಗಿದ್ದು 9ನೇ ತರಗತಿಯಲ್ಲಿ ಓದುತ್ತಿದ್ದಳು. ಬಾಲಕಿಯ ಕುಟುಂಬ ಕೂಡ ಮದುವೆಗೆ ಒಪ್ಪಿದ್ದು, ಆಕೆಗೆ 18 ವರ್ಷವಾದ ಕೂಡಲೇ ಮದುವೆ ಮಾಡುವುದಾಗಿ ಹೇಳಿದ್ದರು. ಆದರಾತ ಈಗಲೇ ಮದುವೆ ಮಾಡಿಕೊಡಿರೆಂದು ಪಟ್ಟು ಹಿಡಿದಿದ್ದ.

ಆತನ ಹಠದಿಂದ ರೋಸಿ ಹೋದ ಬಾಲಕಿಯ ಮನೆಯವರು, ಏಪ್ರಿಲ್ 20 ರಂದು ಆತನ ಮನೆಯವರ ಜತೆ ಮಾತನಾಡಲು ಬಂದಿದ್ದರು. ಆದರಾತ ಕಾಯಲು ಒಪ್ಪದಿದ್ದಾಗ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪದ ಭರದಲ್ಲಿ ಅರವಿಂದ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದು, ಮದುವೆಯಾಗಲು ಒಪ್ಪದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ.

ಆತನನ್ನು ತಡೆಯುವ ಬದಲು ಬಾಲಕಿ ಬೆಂಕಿ ಕಡ್ಡಿ ಗೀರಿ ಆತನ ಮೈಮೇಲೆ ಎಸೆದಿದ್ದಾಳೆ. ಬಳಿಕ ಅಲ್ಲಿಂದ ಓಡಿ ಹೋಗಿದ್ದಾರೆ. ತಕ್ಷಣ ಓಡಿ ಬಂದ ನಿಶಾದ್ ತಾಯಿ ಮತ್ತು ನೆರೆಹೊರೆಯವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ನಿಶಾದ್ ತಾಯಿ ತನ್ನ ಮಗನೇ ಪೆಟ್ರೋಲ್ ಸುರಿದುಕೊಂಡ ಎಂಬುದನ್ನು ಒಪ್ಪುತ್ತಿಲ್ಲ. ನನ್ನ ಮಗ ಬಾಲಕಿಯಿಂದ ದೂರವಿರಲು ಯತ್ನಿಸಿದ್ದಕ್ಕೆ ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂದಾಕೆ ಆರೋಪಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ