ಆ್ಯಪ್ನಗರ

11 ವರ್ಷದ ಹಿಂದೆ ಕಾಣೆಯಾಗಿದ್ದವನನ್ನು ತಾಯಿ ಮಡಿಲಿಗೆ ಸೇರಿಸಿದ ಫೇಸ್‌ಬುಕ್

ಕಳೆದು 11 ವರುಷದ ಹಿಂದೆ ದೂರವಾಗಿದ್ದ ಯುವಕನನ್ನು ಆತನ ಕುಟುಂಬದ ಜತೆ ಸೇರಿಸಲು ಫೇಸ್‌ಬುಕ್ ಸಹಾಯ ಮಾಡಿದೆ.

TIMESOFINDIA.COM 31 Jul 2018, 3:46 pm
ಸೂರತ್: ಕಳೆದು 11 ವರುಷದ ಹಿಂದೆ ದೂರವಾಗಿದ್ದ ಯುವಕನನ್ನು ಆತನ ಕುಟುಂಬದ ಜತೆ ಸೇರಿಸಲು ಫೇಸ್‌ಬುಕ್ ಸಹಾಯ ಮಾಡಿದೆ.
Vijaya Karnataka Web face


ಸದ್ಯ ಸೂರತ್ ರೈಲ್ವೆ ನಿಲ್ದಾಣದ ಬಳಿಯ ಕೊಹಿನೂರ್ ಕೆಫೆಯಲ್ಲಿ ಅಡುಗೆಭಟ್ಟನಾಗಿ ಕೆಲಸ ಮಾಡುತ್ತಿರುವ ತೇಜ್ಪಾಲ್ ಮೂಲತಃ ಖೇಡಾ ಜಿಲ್ಲೆಯ ರತ್ನಾಪುರ ಗ್ರಾಮದ ನಿವಾಸಿಯಾಗಿದ್ದಾನೆ. 2006 ನವೆಂಬರ್‌ನಲ್ಲಿ 9 ನೇ ತರಗತಿ ಓದುತ್ತಿದ್ದ ವೇಳೆ ಕುಟುಂಬದ ಸದಸ್ಯರ ಜತೆ ಜಗಳವಾಡಿ ಮನೆಯಿಂದಾತ ಓಡಿ ಹೋಗಿದ್ದ. ಕುಟುಂಬ ಸದಸ್ಯರು ಎಷ್ಟು ಹುಡುಕಾಡಿದರೂ ಆತ ಪತ್ತೆಯಾಗಿರಲಿಲ್ಲ.

ಮಗ ದೂರವಾದಾಗಿನಿಂದ ತಾಯಿ ಕಾಲಿಗೆ ಚಪ್ಪಲಿ ಹಾಕೋದನ್ನೇ ಬಿಟ್ಟಿದ್ದ ತಾಯಿ ದಿನಕ್ಕೊಂದೇ ಬಾರಿ ಊಟ ಮಾಡುತ್ತಿದ್ದಳು. ಮಗ ಬರಲೆಂದು ದಿನನಿತ್ಯ ಹರಕೆ ಕಟ್ಟುತ್ತಿದ್ದ ಆಕೆಯ ಪ್ರಾರ್ಥನೆ ದೇವರಿಗೆ ಕೇಳಿಸಿರಬೇಕು. ಕೊನೆಗೂ ಫೇಸ್‌ಬುಕ್ ಸಹಾಯದಿಂದ ಆಕೆಯ ಮಗ ಮನೆಗೆ ಮರಳುವಂತಾಗಿದೆ.

ಕಾಣೆಯಾದ ನಿಮ್ಮ ಮನೆಯ ಹುಡುಗನನ್ನು ಹೋಲುವ ಯುವಕನ ಫೋಟೊವೊಂದನ್ನು ಫೇಸ್‌ಬುಕ್‌ನಲ್ಲಿ ನೋಡಿರುವುದಾಗಿ ಕೆಲವರು ತೇಜ್ವಾಲ್ ಮನೆಯವರ ಬಳಿ ಹೇಳಿದ್ದರು. ತಕ್ಷಣ ಪೊಲೀಸ್ ಠಾಣೆಗೆ ಧಾವಿಸಿದ ಕುಟುಂಬಸ್ಥರು ಆತನ ಚಿಕ್ಕಂದಿನ ಫೋಟೊವನ್ನು ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ಆತನ ವಿವರ ಪಡೆದ ಪೊಲೀಸರು ಸೂರತ್ ನಗರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ತಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ ಬಳಿ ಸೆಲ್ಫಿ ತೆಗೆದುಕೊಂಡಿದ್ದ ತೇಜ್ಪಾಲ್ ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ. ಅದರ ಸಹಾಯದಿಂದ ಆತನಿರುವ ಜಾಗ ಪತ್ತೆ ಹಚ್ಚಿದ ಪೊಲೀಸರು ಆತನನ್ನು ಕರೆ ತಂದು ನೊಂದ ತಾಯಿಯ ಕಣ್ಣಲ್ಲಿ ಪನ್ನೀರು ತರಿಸಿದ್ದಾರೆ.

ಕೂದಲು ಕಟ್ ಮಾಡಿಸಿಕೊಂಡು ಬರುತ್ತೇನೆ ಎಂದು ಮನೆ ಬಿಟ್ಟಿದ್ದ ತೇಜ್ಪಾಲ್ ಮತ್ತೆ ಮನೆಗೆ ಮರಳಿರಲಿಲ್ಲ. ಮನೆ ಬಿಟ್ಟ ಬಳಿಕ ಅನೇಕ್ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡಿದ್ದ ಈತ ಅಡುಗೆ ಕೆಲಸದಲ್ಲಿ ಪಾರಂಗತನಾಗಿ ಕೆಲ ತಿಂಗಳ ಹಿಂದಷ್ಟೇ ಸೂರತ್‌ಗೆ ಬಂದಿದ್ದ ಎಂದು ತಿಳಿದುಬಂದಿದೆ.

ಬಸ್ ನಿರ್ವಾಹಕನಾಗಿ ನಿವೃತ್ತಿಯಾಗಿರುವ ತಂದೆ- ಮಗನಿಗಾಗಿ ಕಾದಿದ್ದ ತಾಯಿ ಮತ್ತು ಕೃಷಿಯಲ್ಲಿ ತೊಡಗಿರುವ ಮೂವರು ಸಹೋದರರ ಸಂತೋಷವೀಗ ಹೇಳತೀರದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ