(ಈ ಸುದ್ದಿ ಮೂಲತಃ 20 ಆಗಸ್ಟ್ 2018ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿದೆ)
ಮುಜಫ್ಫರ್ನಗರ: ವ್ಯಾಟ್ಸ್ಆ್ಯಪ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅವಹೇಳನಕಾರಿ ಪೋಟೊ ಶೇರ್ ಮಾಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಾರುಖ್ ಅಹ್ಮದ್ (25) ಬಂಧಿತ ಆರೋಪಿಯಾಗಿದ್ದು, ಶಹಾನ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಶಾರುಖ್ ಅವಹೇಳನಕಾರಿಯಾಗಿ ಪ್ರಧಾನಿಯ ಪೋಟೊ ಪೋಸ್ಟ್ ಮಾಡಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಆತನನ್ನು ಬಂಧಿಸಿದ್ದಾರೆ.
ಈ ಪ್ರದೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ಈ ರೀತಿ ನಡೆದುಕೊಂಡಿರುವ ಪ್ರಕರಣ ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಮಲಂಡಿ ಗ್ರಾಮದ ರಾಜು ಕುಮಾರ್ ಎಂಬ ರೈತನನ್ನು ಬಂಧಿಸಲಾಗಿತ್ತು. ಆತ ಮೋದಿ ಮತ್ತು ಸಿಎಂ ಆದಿತ್ಯನಾಥ್ ವಿರುದ್ಧ ಕೀಳು ಭಾಷೆ ಪ್ರಯೋಗಿಸಿ ವೀಡಿಯೊ ಪೋಸ್ಟ್ ಮಾಡಿದ್ದ. ಬಿಜೆಪಿಯ ಮುಖಂಡ ರಾಜೀವ್ ಕುಮಾರ್ ಆ ರೈತನ ವಿರುದ್ಧ ಗರಿಪುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಮುಜಫ್ಫರ್ನಗರ: ವ್ಯಾಟ್ಸ್ಆ್ಯಪ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅವಹೇಳನಕಾರಿ ಪೋಟೊ ಶೇರ್ ಮಾಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಾರುಖ್ ಅಹ್ಮದ್ (25) ಬಂಧಿತ ಆರೋಪಿಯಾಗಿದ್ದು, ಶಹಾನ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಶಾರುಖ್ ಅವಹೇಳನಕಾರಿಯಾಗಿ ಪ್ರಧಾನಿಯ ಪೋಟೊ ಪೋಸ್ಟ್ ಮಾಡಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಆತನನ್ನು ಬಂಧಿಸಿದ್ದಾರೆ.
ಈ ಪ್ರದೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ಈ ರೀತಿ ನಡೆದುಕೊಂಡಿರುವ ಪ್ರಕರಣ ಇದೇ ಮೊದಲಲ್ಲ. ಕೆಲವು ತಿಂಗಳ ಹಿಂದೆ ಮಲಂಡಿ ಗ್ರಾಮದ ರಾಜು ಕುಮಾರ್ ಎಂಬ ರೈತನನ್ನು ಬಂಧಿಸಲಾಗಿತ್ತು. ಆತ ಮೋದಿ ಮತ್ತು ಸಿಎಂ ಆದಿತ್ಯನಾಥ್ ವಿರುದ್ಧ ಕೀಳು ಭಾಷೆ ಪ್ರಯೋಗಿಸಿ ವೀಡಿಯೊ ಪೋಸ್ಟ್ ಮಾಡಿದ್ದ. ಬಿಜೆಪಿಯ ಮುಖಂಡ ರಾಜೀವ್ ಕುಮಾರ್ ಆ ರೈತನ ವಿರುದ್ಧ ಗರಿಪುಕ್ತ ಪೊಲೀಸರಿಗೆ ದೂರು ನೀಡಿದ್ದರು.