ಆ್ಯಪ್ನಗರ

ಬೆನ್ನಿನಲ್ಲಿ ಚೂರಿ.. ಸೋರುತ್ತಿದೆ ರಕ್ತ..! ಗಂಟೆಗಟ್ಟಲೆ ನಿಲ್ಲಿಸಿ ವಿಚಾರಣೆ ಮಾಡಿದ ಪೊಲೀಸರು..!

ಬೆನ್ನಿಗೆ ಚುಚ್ಚಿದ್ದ ಚೂರಿ ಹಾಗೆಯೇ ಇದ್ದರೂ ಕೂಡಾ ಆತನನ್ನು ಆಸ್ಪತ್ರೆಗೆ ದಾಖಲಿಸುವುದಿರಲಿ, ಪ್ರಥಮ ಚಿಕಿತ್ಸೆಯನ್ನೂ ಪೊಲೀಸರು ನೀಡಲಿಲ್ಲ. ಬದಲಿಗೆ ಆತನನ್ನು ಗಂಟೆಗಟ್ಟಲೆ ನಿಲ್ಲಿಸಿ ವಿಚಾರಣೆ ನಡೆಸಿದರು..! ಇದೀಗ ಈ ದೃಶ್ಯ ಭಾರೀ ವೈರಲ್ ಆಗಿದೆ.

TIMESOFINDIA.COM 18 Oct 2020, 6:52 pm

ಹೈಲೈಟ್ಸ್‌:

  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯ
  • ಪೊಲೀಸ್ ದೌರ್ಜನ್ಯದ ಪರಮಾವಧಿ..!
  • ರಕ್ತ ಸೋರುತ್ತಿದ್ದರೂ ಗಂಟೆಗಟ್ಟಲೆ ನಿಲ್ಲಿಸಿ ವಿಚಾರಣೆ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಜಬಲ್‌ಪುರ (ಮಧ್ಯಪ್ರದೇಶ): ಪೊಲೀಸ್‌ ದೌರ್ಜನ್ಯದ ಪರಮಾವಧಿಗೆ ಇಲ್ಲೊಂದು ಉದಾಹರಣ ಇದೆ. ಆತ ಬಡವ. ಆತನಿಗೆ ಯಾರೋ ಚೂರಿ ಇರಿದಿದ್ದರು. ಬೆನ್ನಿಗೆ ಗಂಭೀರ ಗಾಯವಾಗಿತ್ತು. ಆತನ ಬೆನ್ನಿಗೆ ಚುಚ್ಚಿದ್ದ ಚೂರಿ ಕೂಡಾ ಹಾಗೆಯೇ ಇತ್ತು. ರಕ್ತ ಸೋರುತ್ತಿತ್ತು.. ಆದ್ರೆ, ಆತ ಗಂಟೆಗಟ್ಟಲೆ ನಿಂತಿರಬೇಕಿತ್ತು..!
ಏಕೆಂದರೆ, ಆತ ತನಗೆ ಚೂರಿ ಇರಿತವಾದ ಕೂಡಲೇ ಈ ಬಗ್ಗೆ ಪೊಲೀಸರ ಗಮನಕ್ಕೆ ತರಲು ನೇರವಾಗಿ ಠಾಣೆಗೆ ಹೋಗಿದ್ದ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ತನ್ನ ಸುತ್ತಲೂ ಪ್ಲಾಸ್ಟಿಕ್ ಪರದೆಯನ್ನು ಹಾಕಿಕೊಂಡಿದ್ದರು. ಬೆನ್ನಿನಲ್ಲಿ ರಕ್ತ ಸೋರುತ್ತಾ ಬಂದ ವ್ಯಕ್ತಿಯನ್ನು ಕಂಡ ಕೂಡಲೇ ಹಾಗೇ ನಿಲ್ಲಲು ಹೇಳಿದರು.

9 ದಿನ ಮಹಿಳೆಯನ್ನು ಪೂಜಿಸುವ ನಾಡಿನಲ್ಲಿಯೇ ಮಹಿಳೆಯರ ಮೇಲೆ ದೌರ್ಜನ್ಯ ಜಾಸ್ತಿ: ವಿಜಯಲಕ್ಷ್ಮೀ ದರ್ಶನ್!

ಆತನ ಬೆನ್ನಿಗೆ ಚುಚ್ಚಿದ್ದ ಚೂರಿ ಹಾಗೆಯೇ ಇದ್ದರೂ ಕೂಡಾ ಆತನನ್ನು ಆಸ್ಪತ್ರೆಗೆ ದಾಖಲಿಸುವುದಿರಲಿ, ಪ್ರಥಮ ಚಿಕಿತ್ಸೆಯನ್ನೂ ನೀಡಲಿಲ್ಲ. ಬದಲಿಗೆ ಆತನನ್ನು ಗಂಟೆಗಟ್ಟಲೆ ನಿಲ್ಲಿಸಿ ವಿಚಾರಣೆ ನಡೆಸಿದರು..!

ಯುಪಿಯಲ್ಲಿ ಹಿಂದುಳಿದ ವರ್ಗದ ವೃದ್ಧನಿಗೆ ಮೂತ್ರ ಕುಡಿಸಿ ಥಳಿತ: ಕೇಸ್ ವಾಪಸ್ ಪಡೆಯಲು ಒತ್ತಡ..!

ಈ ಅಮಾನವೀಯ ಘಟನೆ ನಡೆದಿರೋದು ಮಧ್ಯ ಪ್ರದೇಶದ ಜಬಲ್‌ಪುರದಲ್ಲಿ. ಇಲ್ಲಿನ ಪೊಲೀಸರ ಅಮಾನವೀಯ ಕೃತ್ಯವನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ. ಪೊಲೀಸರ ವರ್ತನೆಗೆ ನೆಟ್ಟಿಗರು ಚಾಟಿ ಬೀಸಿದ್ದಾರೆ.

ಮಂಗಳೂರು ವಿವಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಎಬಿವಿಪಿ ಪ್ರತಿಭಟನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ