ಆ್ಯಪ್ನಗರ

ಡುಮ್ಮ ಎಂದಿದ್ದಕ್ಕೆ ತಮ್ಮನ ಹತ್ಯೆ; ಪುಟ್ಟ ಮಗು ಬಿಚ್ಚಿಟ್ಟಿತು ಅಪ್ಪ ಮಾಡಿದ ಕೊಲೆ ರಹಸ್ಯ

ಯುವಕನೊಬ್ಬ ಕತ್ತರಿ ಎದೆಗೆ ಚುಚ್ಚಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆಯಿಂದ ಫೋನ್ ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

TIMESOFINDIA.COM 6 Mar 2019, 11:25 am
ಹೊಸದಿಲ್ಲಿ: ದಪ್ಪಗಿದ್ದೀಯಾ ಎಂದು ಹೀಯಾಳಿಸಿದ್ದಕ್ಕೆ ಅಣ್ಣನೇ ತಮ್ಮನ ಎದೆಗೆ ಕತ್ತರಿ ಚುಚ್ಚಿ ಕೊಲೆಗೈದ ಬೆಚ್ಚಿ ಬೀಳಿಸುವ ಘಟನೆ ಹೊಸದಿಲ್ಲಿಯಲ್ಲಿ ಕಳೆದ ವಾರ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web Crime


25 ವರ್ಷದ ಆರೀಫ್ ತನ್ನಣ್ಣ ನಿಜಾಂ(28)ನಿಂದ ಹತ್ಯೆಯಾದ ವ್ಯಕ್ತಿ.

ಯುವಕನೊಬ್ಬ ಕತ್ತರಿ ಎದೆಗೆ ಚುಚ್ಚಿ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆಯಿಂದ ಫೋನ್ ಕರೆ ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದಾಗ ಕತ್ತರಿ ಚುಚ್ಚಿ ಹೀಗಾಯಿತು ಎಂದು ಕುಟುಂಬ ಸದಸ್ಯರು ಹೇಳಿದ್ದರು. ನಾನು ಕೆಲಸದಿಂದ ಮನೆಗೆ ಬಂದಾಗ ತಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದ. ನಾನು ಆತನನ್ನು ಆಸ್ಪತ್ರೆಗೆ ಸೇರಿಸಿದೆ. ಕಪಾಟಿನಿಂದ ಕತ್ತರಿ ತೆಗೆಯುವಾಗ ಆಕಸ್ಮಿಕವಾಗಿ ಅದವನ ಮೇಲೆ ಬಿದ್ದು ಚುಚ್ಚಿ ಬಿಟ್ಟಿದೆ ಎಂದು ಅಣ್ಣ ನಿಜಾಂ ಹೇಳಿದ್ದ.

ಪೊಲೀಸರಿಗೆ ಈ ಹೇಳಿಕೆಯಲ್ಲಿ ನಂಬಿಕೆ ಮೂಡಲಿಲ್ಲ. ಆದರೆ ಕುಟುಂಬದ ಇತರ ಸದಸ್ಯರು ಕೂಡ ಇದೇ ಹೇಳಿಕೆ ನೀಡಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಎದೆಯಲ್ಲಿ ಹಲವು ಬಾರಿ ಚುಚ್ಚಿರುವುದು ಬೆಳಕಿಗೆ ಬಂತು. ಅದು ಬಲವಾಗಿ ಚುಚ್ಚಿದ್ದರಿಂದಲೇ ಆಗಿರುವ ಗಾಯ ಎಂಬುದು ಸಹ ಪತ್ತೆಯಾಯ್ತು. ಹೀಗಾಗಿ ಮೃತನ ಮನೆ ತಪಾಸಣೆಗೆ ಪೊಲೀಸರು ಮುಂದಾದರು. ಘಟನೆಯ ಮರುಸೃಷ್ಟಿ ಮಾಡಿ ಎತ್ತರದಿಂದ ಕತ್ತರಿ ಬಿದ್ದು ಸಾವಾಗಲಿಲ್ಲ ಎಂಬುದನ್ನು ಪೊಲೀಸರು ಸ್ಪಷ್ಟ ಪಡಿಸಿಕೊಂಡರು.

ಕೊನೆಗೆ ಸತ್ಯ ಕಂಡುಕೊಳ್ಳಲು ಪೊಲೀಸರು ಮೊರೆ ಹೋಗಿದ್ದು ನಿಜಾಂನ 3 ವರ್ಷದ ಮಗನ ಬಳಿ. ಆತ ತನ್ನ ಚಿಕ್ಕಪ್ಪನಿಗೆ ಕತ್ತರಿಯಿಂದ ಚುಚ್ಚಿದ್ದು ಅಪ್ಪನೇ ಎಂದು ಮುಗ್ಧವಾಗಿ ಹೇಳಿದ್ದಾನೆ.

ಕೊನೆಗೂ ಬೇರೆ ದಾರಿಯಿಲ್ಲದೆ ಸತ್ಯ ಒಪ್ಪಿಕೊಂಡ ನಿಜಾಂ, ತನ್ನ ಧಡೂತಿಕಾಯದ ಬಗ್ಗೆ ಅಣಕವಾಡಿದ್ದಕ್ಕೆ ಕೋಪದ ಭರದಲ್ಲಿ ಹೀಗೆ ಮಾಡಿದೆ ಎಂದೊಪ್ಪಿಕೊಂಡಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ