ಆ್ಯಪ್ನಗರ

ಕರ್ಮದ ಫಲ; ಕಾರಿಗೆ ಇಟ್ಟಿಗೆ ಎಸೆದವನಿಗೆ ಏನಾಯಿತು ಗೊತ್ತಾ?

ಕರ್ಮ. ಇದು ಎಲ್ಲರನ್ನು ಕಾಡುತ್ತದೆ. ಯಾರನ್ನೂ ಬಿಡುವುದಿಲ್ಲ. ಇಂದಲ್ಲದಿದ್ದರೂ ನಾಳೆಯಾದರೂ ಇದರ ಪ್ರತಿಫಲ ಕಾಣುತ್ತದೆ. ಆದರೆ ಕೆಲವರಿಗೆ ಇನ್‌ಸ್ಟಾಂಟ್‌ ಆಗಿ ಕರ್ಮ ಅನುಭವಿಸುತ್ತಾರೆ.

Vijaya Karnataka Web 15 Oct 2019, 8:18 pm
ಹೊಸದಿಲ್ಲಿ: ಕರ್ಮ ಎನ್ನುವುದು ಈಗ ಬಹು ನಂಬಿಕೆಯ ಹಾಗೂ ಚರ್ಚೆಯ ವಿಷಯ. ಕರ್ಮ ಇಲ್ಲಿ ಅನುಭವಿಸಬೇಕು ಗುರೂ ಎಂದು ಎಲ್ಲರೂ ಮಾತನಾಡಿಕೊಳ್ಳುವುದು ನಾವು ಕೇಳಿರುತ್ತೇವೆ ಅಥವಾ ನೋಡಿರುತ್ತೇವೆ.
Vijaya Karnataka Web ಕಾರು
ಕಾರು


ಇಲ್ಲೊಂದು ವೀಡಿಯೋ ಇದೆ. ಇದನ್ನು ನೋಡಿದರೆ ಕರ್ಮ ಹೇಗಿರುತ್ತದೆ ಎಂಬುದು ಸಾಬೀತಾಗುತ್ತದೆ.

ಈ ವೀಡಿಯೋ ಈಗ ವೈರಲ್‌ ಸಾಗಿದ್ದು. ಸಾಮಾಜಿಕ ಜಾಲತಾಣದಲ್ಲಿ ಭಾರಿ ಲೈಕ್‌, ಕಮೆಂಟ್‌ಗಳು ಬರುತ್ತಿವೆ.

ಕೆಲವರು ಇದನ್ನು ಇನ್‌ಸ್ಟಾಂಟ್‌ ಕರ್ಮ ಎಂದು ಬಣ್ಣಿಸಿದ್ದಾರೆ. ಇದು ಎಲ್ಲಿ ನಡೆದಿದ್ದ ಎಂಬುದು ನಿಗೂಢವಾಗಿದೆ.

ಅಸಲಿಗೆ ಆಗಿದ್ದು ಏನು ಗೊತ್ತಾ....

ಒಂದು ಕಾರು ಕಾಂಪೌಂಡ್‌ ಬಳಿ ನಿಂತಿರುತ್ತದೆ. ಕಾರಿನ ಪಕ್ಕ ಹಾದು ಹೋಗುವ ವ್ಯಕ್ತಿಯೊಬ್ಬ ಸುಮ್ಮನೆ ಹೋಗುವುದಿಲ್ಲ.

ಕೆಳಗೆ ಬಿದ್ದಿರುವ ಇಟ್ಟಿಗೆಯನ್ನು ತೆಗೆದುಕೊಂಡು ಕಾರಿನ ಗಾಜಿಗೆ ಹೊಡೆಯುತ್ತಾನೆ. ಕರ್ಮ ಹೇಗೆ ಆತನಿಗೆ ರಿವರ್ಸ್‌ ಗೇರ್‌ನಲ್ಲಿ ಹೊಡೆಯುತ್ತೆ ಎನ್ನುವುದೇ ಕುತೂಹಲ.


ಕಾರಿಗೆ ಇಟ್ಟಿಗೆ ಎಸೆದ ಕೂಡಲೇ ಅದು ರೀಬೌಂಡ್‌ ಆಗಿ ಮತ್ತೆ ವ್ಯಕ್ತಿಯ ಮುಖಕ್ಕೆ ಬಡಿಯುತ್ತದೆ.

ಇದನ್ನ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಬೆನ್‌ ಕ್ಲೆಮೆಂಟ್‌ ಎಂಬುವರು ಹಾಕಿದ್ದಾರೆ.

ಅದಕ್ಕೆ ಲೈಕ್ ಒತ್ತುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ