ಆ್ಯಪ್ನಗರ

'ಮೊದಲು ಮಂದಿರ ಆಮೇಲೆ ಸರಕಾರ': ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ ಶಿವ ಸೈನಿಕರು

ಗುರುವಾರ ಮಧ್ಯಾಹ್ನ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ ವಿಶೇಷ ರೈಲಿಗೆ ಥಾಣೆ ಮೇಯರ್ ಮೀನಾಕ್ಷಿ ಸಿಂಧೆ ಆರತಿ ಬೆಳಗಿ ಚಾಲನೆ ನೀಡಿದರು.

TIMESOFINDIA.COM 23 Nov 2018, 3:14 pm
ಥಾಣೆ: 2019ರ ಲೋಕಸಭೆ ಚುನಾವಣೆಯ ಪ್ರಮುಖ ಅಸ್ತ್ರವಾಗಿರುವ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ನ. 25ರಂದು ಶಿವಸೇನೆ ಮತ್ತು ವಿಶ್ವ ಹಿಂದು ಪರಿಷದ್ (ವಿಎಚ್‍ಪಿ) ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಸಾವಿರಾರು ಶಿವ ಸೈನಿಕರು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ.
Vijaya Karnataka Web ayodhya


ಗುರುವಾರ ಮಧ್ಯಾಹ್ನ ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ ವಿಶೇಷ ರೈಲಿಗೆ ಥಾಣೆ ಮೇಯರ್ ಮೀನಾಕ್ಷಿ ಸಿಂಧೆ ಆರತಿ ಬೆಳಗಿ ಚಾಲನೆ ನೀಡಿದರು.

ಕೇಸರಿ ಧರಿಸಿದ್ದ 2 ಸಾವಿರಕ್ಕೂ ಅಧಿಕ ಶಿವ ಸೈನಿಕರು, 'ಜೈ ಶ್ರೀ ರಾಮ್', 'ಮೊದಲು ಮಂದಿರ ಆಮೇಲೆ ಸರಕಾರ', 'ನಡೆಯಿರಿ ಅಯೋಧ್ಯೆಗೆ' ಎಂಬ ಘೋಷವಾಕ್ಯದೊಂದಿಗೆ ರಾಮನ ನಾಡಿನತ್ತ ಮುಖ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ, ಇಲ್ಲಿಯವರೆಗೂ ಮಂದಿರ ಮಾತ್ರ ನಿರ್ಮಾಣವಾಗಿಲ್ಲ. ಭಗವಾನ್ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಈಗ ಸಕಾಲ ಕೂಡಿ ಬಂದಿದೆ ಎಂದು ಶಿವಸೇನೆ ಕಾರ್ಪೋರೇಟರ್ ಸರೇಶ್ ಮಸ್ಕೆ ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಅಯೋಧ್ಯೆ ತಲುಪಲಿರುವ ಶಿವ ಸೈನಿಕರು, ಶನಿವಾರ ಸಂಜೆ ನಯಾ ಘಾಟ್‌ನಲ್ಲಿ ಆಯೋಜಿಸಲಾಗಿರುವ ಮಹಾ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ