ಆ್ಯಪ್ನಗರ

ಮನಗೆದ್ದ ಮಣಿಪುರದ 8 ವರ್ಷದ ಬಾಲಕಿ ಲಿಸಿಪ್ರಿಯಾಳ ಹವಾಮಾನ ಕಾಳಜಿ

ಹವಾಮಾನ ಬದಲಾವಣೆ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಶಾಲೆಯನ್ನು ತೊರೆದ 8 ವರ್ಷದ ಬಾಲಕಿ ಲಿಸಿಪ್ರಿಯಾ ಕಾಂಗುಜಮ್‌ಳ ಹವಾಮಾನ ಕಾಳಜಿಗೆ ವಿಶ್ವವೇ ತಲೆದೂಗುತ್ತಿದೆ.

Vijaya Karnataka Web 12 Dec 2019, 1:53 pm
ಮ್ಯಾಡ್ರಿಡ್‌: ಸ್ಪೇನ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ನಿಯಂತ್ರಣ ಸಮ್ಮೇಳನದಲ್ಲಿ (ಸಿಒಪಿ25) ಭಾರತದ 8 ವರ್ಷದ ಬಾಲಕಿ ಲಿಸಿಪ್ರಿಯಾ ಕಾಂಗುಜಮ್‌ ತನ್ನ ಭಾಷಣದಿಂದ ಗಣ್ಯರ ಗಮನ ಸೆಳೆದಿದ್ದಾಳೆ.
Vijaya Karnataka Web licypriya kangujam


ಜಾಗತಿಕ ನಾಯಕರು ಈ ಕೂಡಲೇ ಹವಾಮಾನ ಬದಲಾವಣೆ ಗತಿಯನ್ನು ನಿಯಂತ್ರಿಸಲು ಮುಂದಾಗ ಬೇಕು. ಇಲ್ಲವಾದಲ್ಲಿ ಮುಂದಿನ ತಲೆಮಾರಿಗೆ ವಂಚಿಸಿದಂತೆ. ಈಗ ಉಂಟಾಗಿರುವುದು ನೈಜ ಹವಾಮಾನ ತುರ್ತು ಪರಿಸ್ಥಿತಿ ಎಂದು ಲಿಸಿಪ್ರಿಯಾ ಹೇಳಿದ್ದಾಳೆ. ಸಂಪೂರ್ಣವಾಗಿ ಹವಾಮಾನ ಬದಲಾವಣೆ ವಿರುದ್ಧ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಲಿಸಿಪ್ರಿಯಾ ಕಳೆದ ಫೆಬ್ರವರಿಯಲ್ಲಿ ಶಾಲೆಯನ್ನು ತೊರೆದಳು. ಈಗಾಗಲೇ 21 ರಾಷ್ಟ್ರಗಳಲ್ಲಿ ಆಕೆ ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ ಕುರಿತಾಗಿ ಭಾಷಣ ನೀಡಿ ಗಮನ ಸೆಳೆದಿದ್ದಾಳೆ. ಸ್ಪೇನ್‌ನ ಸ್ಥಳೀಯ ಮಾಧ್ಯಮಗಳು ಆಕೆಯನ್ನು ದಕ್ಷಿಣ ಜಗತ್ತಿನ ಗ್ರೆಟಾ ಥನ್‌ಬರ್ಗ್‌ ಎಂದು ಕರೆದಿವೆ.

ಕ್ರೌಡ್‌ಫಂಡಿಂಗ್‌ನಿಂದ ಸಮ್ಮೇಳನದಲ್ಲಿ ಭಾಗಿ: ವಿಶ್ವಸಂಸ್ಥೆಯಿಂದ ಆಹ್ವಾನ ಬಂದ ಕೂಡಲೇ ಸ್ಪೇನ್‌ಗೆ ತೆರಳುವ ವೆಚ್ಚಕ್ಕೆ ಸಹಾಯ ಮಾಡುವ ಬಗ್ಗೆ ಹಲವು ಸಚಿವರಿಗೆ ಮನವಿ ಮಾಡಲಾಯಿತು. ಆದರೆ ಪ್ರತಿಕ್ರಿಯೆ ಸಿಗಲಿಲ್ಲ. ಭುವನೇಶ್ವರ ವ್ಯಕ್ತಿಯೊಬ್ಬರು ವಿಮಾನದ ಟಿಕೆಟ್‌ಗಳನ್ನು ಮಾಡಿಸಿಕೊಟ್ಟರು ಎಂದು ಲಿಸಿಪ್ರಿಯಾ ತಂದೆ ಕೆ.ಕೆ. ಸಿಂಗ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ