ಆ್ಯಪ್ನಗರ

ಎನ್‌ಡಿಎ ಸರಕಾರಕ್ಕೆ ಮಾತಿನಲ್ಲೇ ಚಾಟಿ ಬೀಸಿದ ಮೃದು ಭಾಷಿ ಮನಮೋಹನ್‌ ಸಿಂಗ್

ಯುಪಿಎ ಅವಧಿಯಲ್ಲಿ ಏನೋ ಆಗಿದೆ ಎಂಬಂತೆ ಆರೋಪ ಮಾಡಲಾಗುತ್ತಿದೆ. ಈಗ ಬಿಜೆಪಿಯು 5 ವರ್ಷ ಆಡಳಿತ ನಡೆಸಿದೆ. ಈಗ ಆರ್ಥಿಕ ಪರಿಸ್ಥಿತಿ ಹೀಗೇಕೆ ಇದೆ. ನಮ್ಮ ಸರಕಾರವನ್ನು ಟೀಕಿಸುವುದನ್ನು ಬಿಟ್ಟು ಪರಿಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳಿ ಎಂದು ಮನಮೋಹನ್‌ ಸಿಂಗ್‌ ಸಲಹೆ ನೀಡಿದರು.

Vijaya Karnataka Web 17 Oct 2019, 8:10 pm
ಮುಂಬಯಿ: ಮೃದು ಭಾಷಿ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಈಗ ತಿರುಗೇಟು ನೀಡಲು ಆರಂಭಿಸಿದ್ದಾರೆ.
Vijaya Karnataka Web ಮನಮೋಹನ್‌ ಸಿಂಗ್
ಮನಮೋಹನ್‌ ಸಿಂಗ್


ಮುಂಬಯಿಗೆ ಆಗಮಿಸಿದ ಮನಮೋಹನ್‌ ಸಿಂಗ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

ದೇಶದ ಪ್ರಮುಖ ಆರ್ಥಿಕ ತಜ್ಞರಾಗಿರುವ ಮನಮೋಹನ್‌ ಸಿಂಗ್‌ ದೇಶದ ಆರ್ಥಿಕತೆ ಕುಸಿಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ 21 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನವೇ ಜನರ ಮುಂದೆ ಆರ್ಥಿಕ ಪರಿಸ್ಥಿತಿಯ ಕಠೋರ ಸತ್ಯವನ್ನು ಮನಮೋಹನ್ ಸಿಂಗ್‌ ಜನತೆಯ ಮುಂದಿಟ್ಟಿದ್ದಾರೆ.

ಎನ್‌ಡಿಎ ಸರಕಾರದ ನಿರಾಸಕ್ತಿ ಮತ್ತು ವಿಳಂಬ ನೀತಿಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಇಳಿಮುಖವಾಗಿದೆ. ಆಟೊಮೊಬೈಲ್‌ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಮಹಾರಾಷ್ಟ್ರದಲ್ಲಿ ಹಲವಾರು ಕೈಗಾರಿಕೆಗಳು ಮುಚ್ಚುವ ಹಂತ ತಲುಪಿವೆ. ಆದರೆ ಸರಕಾರ ಹಾಗೂ ಅದರ ಮುಖ್ಯಸ್ಥರು ಬೇರೆಯದೇ ಲೋಕದಲ್ಲಿ ಮುಳುಗಿದ್ದಾರೆ ಎಂದು ಟೀಕಿಸಿದರು.

ದೇಶದ ವಾಣಿಜ್ಯ ರಾಜಧಾನಿ ಮುಂಬಯಿ, ಮಹಾರಾಷ್ಟ್ರ ಹೂಡಿಕೆಯಲ್ಲಿ ನಂಬರ್‌ 1 ಸ್ಥಾನದಲ್ಲಿತ್ತು. ಈಗ ರೈತರ ಆತ್ಮಹತ್ಯೆಯಲ್ಲಿ ನಂಬರ್‌ 1 ಸ್ಥಾನ ಪಡೆದುಕೊಂಡಿದೆ ಎಂದು ಮನಮೋಹನ್‌ ಸಿಂಗ್‌ ವಿಶ್ಲೇಷಿಸಿದರು.

ನರೇಂದ್ರ ಮೋದಿ ನೇತೃತ್ವದ ಸರಕಾರ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯ ಗುರಿ ಹೊಂದಿದೆ. ಇದನ್ನು ಮುಟ್ಟಬೇಕಾದರೆ ಜಿಡಿಪಿ ಶೇ. 10 ರಿಂದ 12 ತಲುಪಬೇಕು. ಆದರೆ ಸದ್ಯದ ಜಿಡಿಪಿ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಮನಮೋಹನ್‌ ಸಿಂಗ್‌ ತಮ್ಮದೇ ಧಾಟಿಯಲ್ಲಿ ಚಾಟಿ ಬೀಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ