ನವದೆಹಲಿ: ಬಾನುಲಿ ಮಾಸಿಕ ಕಾರ್ಯಕ್ರಮವಾದ ಮನ್ ಕೀ ಬಾತ್ ಇಂದು ಪ್ರಸಾರವಾಗಿದ್ದು, ಈ ವರ್ಷದ ಮೊದಲ ಕಾರ್ಯಕ್ರಮದಲ್ಲಿ ಪ್ರಧಾನಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಮಾದಕ ವ್ಯಸನ, ಭ್ರಷ್ಟಾಚಾರ, ರೈತರ ಸಮಸ್ಯೆ, ಲಿಂಗ ಅಸಮಾನತೆ ಬಗ್ಗೆ ಮಾತನಾಡಿದ ಮೋದಿ ಇಂದು ವಿದ್ಯಾರ್ಥಿಗಳು ಹಾಗೂ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ಪ್ರಮುಖವಾಗಿ ಅವರು ಹೇಳಿದ್ದೇನು?
- ವಿದ್ಯಾರ್ಥಿಗಳಿಗೆ ಪರೀಕ್ಷೆಯೆಂದರ ಪೂರಾ ಕುಟುಂಬದಲ್ಲಿಯೇ ಆತಂಕದ ವಾತಾವರಣ ಸೃಷ್ಟಿಯಾಗಿರುತ್ತದೆ. ಪರೀಕ್ಷೆ ಹಾಗೂ ಆತಂಕಕ್ಕೆ ಸಂಬಂಧಿಸಿದಂತೆ ಪೋಷಕರು, ವಿದ್ಯಾರ್ಥಿಗಳಿಂದ ಪ್ರಶ್ನೆ ಹಾಗೂ ಸಲಹೆಗಳನ್ನು ಕೇಳಿದ್ದು, ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವು ವಿದ್ಯಾರ್ಥಿ ಹಾಗೂ ಪೋಷಕರ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಮೋದಿ ಉಲ್ಲೇಖಿಸಿದ್ದರು.
- ಪರೀಕ್ಷೆ ಎಂಬುದನ್ನು pressure ಎಂದು ಪರಿಗಣಿಸುವುದಕ್ಕಿಂತ, pleasure ಎಂದು ಪರಿಗಣಿಸಿದರೆ ಹೆಚ್ಚು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಆಗ ಮಾತ್ರ ಉತ್ತಮದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಲು ಸಾಧ್ಯ. ಉತ್ಸಾಹದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಇಡೀ ಕುಟುಂಬದಲ್ಲಿ ಪರೀಕ್ಷೆ ಎಂದರೆ ನಾಲ್ಕೈದು ತಿಂಗಳ ಕಾಲ ಉತ್ಸವದ ವಾತಾವರಣ ಸೃಷ್ಟಿಯಾಗಬೇಕು. ಈ ಉತ್ಸವದಲ್ಲಿ ಕುಟುಂಬದ ಎಲ್ಲರೂ ಪಾಲ್ಗೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಆತಂಕ ಕಡಿಮೆ ಮಾಡಬಹುದು.
- ನಗ್ ನಗ್ತಾ ಪರೀಕ್ಷೆಗೆ ತಯಾರಿ ನಡೆಸಿದರೆ ಮಾತ್ರ ಉತ್ತಮ ಅಂಕ ಗಳಿಸುವಲ್ಲಿ ನೆರವಾಗುತ್ತದೆ. ಸಂತೋಷದಿಂದ ಓದಿದ್ದು ಮನದಲ್ಲಿ ಉಳಿಯಲಿದ್ದು, ಪರೀಕ್ಷಾ ಕೊಠಡಿಯಲ್ಲಿ ಎಲ್ಲವನ್ನೂ ನನೆಪಿಸಿಕೊಳ್ಳಲು ಅನುಕೂಲವಾಗುತ್ತದೆ. ಆತಂಕದ ವಾತಾವರಣದಲ್ಲಿಯೇ ಪರೀಕ್ಷೆ ಬರೆದರೆ ನೆನಪಾಗಬೇಕಾದ ಪದವೂ ಮರೆತು ಹೋಗುತ್ತದೆ. ಪರೀಕ್ಷಾ ಕೊಠಡಿಯಿಂದ ಹೊರ ಬಂದ ಕೂಡಲೇ ಎಲ್ಲವೂ ನೆನಪಾಗುತ್ತದೆ. ಅದಕ್ಕೆ ಒತ್ತಡದಲ್ಲಿರುವ ಇರುವ ಬದಲು, ಸಂತೋಷವಾಗಿದ್ದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಸಾಧ್ಯವಾಗುತ್ತದೆ.
- ಖುಷಿಯಾಗಿರುವುದೇ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಇರುವ ಅತ್ಯುತ್ತಮ ಪರಿಹಾರ. ಪರೀಕ್ಷೆಯೇ ಜೀವನದ ಯಶಸ್ಸಿನ ಮಂತ್ರವಲ್ಲ. ಕ್ಲಾಸಿನಲ್ಲಿ ಕಲಿತದ್ದನ್ನು ಅಭಿವ್ಯಕ್ತಗೊಳಿಸಲು ಮಾತ್ರ ಪರೀಕ್ಷೆ ವೇದಿಕೆಯೇ ಹೊರತು, ಅದು ಜೀವನದ ಸಂತೋಷಕ್ಕೂ ಕಾರಣವಾಗುವ ಅಸ್ತ್ರವಲ್ಲವೆಂಬುವುದು ನೆನಪಿರಲಿ.
- ಅಂಕವೇ ಪ್ರಮುಖ ಮಾನದಂಡವಾಗಿದೆ. ಇದರಿಂದ ಪರೀಕ್ಷಾ ಕೇಂದ್ರಿತ ಶಿಕ್ಷಣವಾಗಿದೆ. ಇದರಿಂದ ಹೊರ ಬರುವುದು ಹೇಗೆಂಬ ಪ್ರಶ್ನೆಗೆ, ಶಿಕ್ಷಣವೆಂದರೆ ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು. ಸೂಕ್ತ ಗುರಿಯೊಂದಿಗೆ ಜೀವನದಲ್ಲಿ ಮುಂದುವರಿಯಬೇಕು. ಆಗ ಮಾತ್ರ ಕಲಿತ ಪಾಠ ಜೀವನದಲ್ಲಿ ಉಪಯೋಗಕ್ಕೆ ಬರುತ್ತೆ. ನಿಮ್ಮ ಸಂಕಲ್ಪ ಶಕ್ತಿ ಜೀವನಕ್ಕೆ ಅತ್ಯಗತ್ಯ. ನಾವು ಯಾವತ್ತೂ ವೈದ್ಯರ ಸೇವೆ ಪಡೆಯುತ್ತೇವೆ ಹೊರತು, ಅವರು ಪಡೆದ ಮಾರ್ಕ್ ಶೀಟ್ ಕೇಳೋಲ್ಲ. ಶಿಕ್ಷಣದ ಮೂಲಕ ಪಡೆದ ಜ್ಞಾನ ಮಾತ್ರ ಸದಾ ಮನುಷ್ಯನ ನೆರವಿಗೆ ಬರುತ್ತೆ ಹೊರತು, ಪಡೆದ ಅಂಕವಲ್ಲವೆಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಅಂಕದ ಹಿಂದೆ ಬಿದ್ದರೆ ಮಾತ್ರ ಅದನ್ನು ಪಡೆಯಲು ಬೇರೆ ರಸ್ತೆ ನೋಡಿಕೊಳ್ಳುತ್ತೇವೆ. ಅಂಕದ ಮೇಲೆ ಗಮನಿಸಿದರೆ ಮಾತ್ರ, ನಿಮಗೆ ನೀವು ಗಡಿ ಹಾಕಿಕೊಳ್ಳುತ್ತೀರಿ.
- ಜೀವನದಲ್ಲಿ ಮುಂದೆ ಬರಬೇಕಾದರೆ ಪ್ರತಿಸ್ಪರ್ಧೆಗಿಂತ, ನಮ್ಮೊಂದಿಗೆ ನಾವು ಸ್ಪರ್ಧೆಗಿಳಿಯುವುದು ಅತ್ಯಗತ್ಯ. ನಿಮ್ಮ ದಿನವನ್ನು ನಿನ್ನೆಗಿಂತ ಇಂದು ಹೇಗೆ ಅತ್ಯುತ್ತಮ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಜೀವನದ ಯಶಸ್ಸು ಅವಲಂಬಿತವಾಗಿರುತ್ತದೆ. ಸಚಿನ್ ತೆಂಡೂಲ್ಕರ್ ಅವರಂಥವರು ಅವರಿಗೆ ಅವರೇ ಸ್ಪರ್ಧೆ ಒಡ್ಡಿಕೊಂಡಿದ್ದರಿಂದ, ಅವರ ದಾಖಲೆಗಳನ್ನೇ ಮುರಿದು, ಕ್ರಿಕೆಟ್ ದಂತೆಕಥೆಯಾದರು.
- ಆತ್ಮ ಮಂಥನ, ಆತ್ಮ ಚಿಂತನೆಗೆ ಕಾರಣವಾಗುವ ನಿಮ್ಮೊಂದಿಗಿನ ನಿಮ್ಮ ಸ್ಪರ್ಧೆ ಜೀವನದಲ್ಲಿ ಬರುವ ಕಗ್ಗಂಟುಗಳನ್ನು ಬಿಡಿಸಲು ಅನುಕೂಲವಾಗುತ್ತದೆ. ನೀವು ನಿಜವಾಗಲೂ ಪ್ರತಿಭಾಶಾಲಿಗಳಾಗಿದ್ದರೆ ಅತೀವ ಆತ್ಮವಿಶ್ವಾಸಿಗಳಾಗುತ್ತೀರಿ. ಇಲ್ಲವೋ ಆತ್ಮವಿಶ್ವಾಸ ಗಳಿಸಲು ಏನು ಮಾಡಬೇಕೋ ಅದನ್ನು ಮಾಡಬೇಕು. ಆಂತರಿಕವಾಗಿ ನಾವು ಬೆಳೀತಾ ಹೋದಲ್ಲಿ ಮಾತ್ರ ಯಶಸ್ಸು ನಮ್ಮದಾಗುತ್ತದೆ.
- ಮಕ್ಕಳನ್ನು ಕಲಿಯಲು, ಸ್ವೀಕರಿಸಲು ಪೋಷಕರು ಅನುವು ಮಾಡಿಕೊಳ್ಳಬೇಕು. ಪೋಷಕರ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಮಕ್ಕಳ ಮನಸು ಕಮರುತ್ತದೆ. ಪೋಷಕರ ನಿರೀಕ್ಷೆ ಮಕ್ಕಳ ಶಾಲಾ ಬ್ಯಾಗ್ಗಿಂತಲೂ ಭಾರವಾಗಿರುವುದರಿಂದ ಮಕ್ಕಳ ವಿಶ್ವಾಸವೇ ಕುಂದುತ್ತಿದೆ.
- ಪರೀಕ್ಷೆ ಟೈಮಲ್ಲೂ ಆಡೋದನ್ನು ಬಿಡಬೇಡಿ. ಮನಸ್ಸು ಖುಷಿಯಾಗಿದ್ದರೆ ಮಾತ್ರ ಕಲಿತದ್ದನ್ನು ಮನನ ಮಾಡಿಕೊಳ್ಳಲು ಸುಲಭವಾಗುತ್ತದೆ. ಓದಿನ ಮೇಲೆ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ. ಆಡುತ್ತಲೇ, ಕಲಿಯಿರಿ. ಶರೀರ, ಮನಸ್ಸು ಶಕ್ತಿಯುತವಾಗಿಡಲು ಆಟವಾಡಿ.
ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಮಾದಕ ವ್ಯಸನ, ಭ್ರಷ್ಟಾಚಾರ, ರೈತರ ಸಮಸ್ಯೆ, ಲಿಂಗ ಅಸಮಾನತೆ ಬಗ್ಗೆ ಮಾತನಾಡಿದ ಮೋದಿ ಇಂದು ವಿದ್ಯಾರ್ಥಿಗಳು ಹಾಗೂ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ಪ್ರಮುಖವಾಗಿ ಅವರು ಹೇಳಿದ್ದೇನು?
- ವಿದ್ಯಾರ್ಥಿಗಳಿಗೆ ಪರೀಕ್ಷೆಯೆಂದರ ಪೂರಾ ಕುಟುಂಬದಲ್ಲಿಯೇ ಆತಂಕದ ವಾತಾವರಣ ಸೃಷ್ಟಿಯಾಗಿರುತ್ತದೆ. ಪರೀಕ್ಷೆ ಹಾಗೂ ಆತಂಕಕ್ಕೆ ಸಂಬಂಧಿಸಿದಂತೆ ಪೋಷಕರು, ವಿದ್ಯಾರ್ಥಿಗಳಿಂದ ಪ್ರಶ್ನೆ ಹಾಗೂ ಸಲಹೆಗಳನ್ನು ಕೇಳಿದ್ದು, ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವು ವಿದ್ಯಾರ್ಥಿ ಹಾಗೂ ಪೋಷಕರ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಮೋದಿ ಉಲ್ಲೇಖಿಸಿದ್ದರು.
- ಪರೀಕ್ಷೆ ಎಂಬುದನ್ನು pressure ಎಂದು ಪರಿಗಣಿಸುವುದಕ್ಕಿಂತ, pleasure ಎಂದು ಪರಿಗಣಿಸಿದರೆ ಹೆಚ್ಚು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಆಗ ಮಾತ್ರ ಉತ್ತಮದಲ್ಲಿ ಅತ್ಯುತ್ತಮವಾದದ್ದನ್ನು ಸಾಧಿಸಲು ಸಾಧ್ಯ. ಉತ್ಸಾಹದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಇಡೀ ಕುಟುಂಬದಲ್ಲಿ ಪರೀಕ್ಷೆ ಎಂದರೆ ನಾಲ್ಕೈದು ತಿಂಗಳ ಕಾಲ ಉತ್ಸವದ ವಾತಾವರಣ ಸೃಷ್ಟಿಯಾಗಬೇಕು. ಈ ಉತ್ಸವದಲ್ಲಿ ಕುಟುಂಬದ ಎಲ್ಲರೂ ಪಾಲ್ಗೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಆತಂಕ ಕಡಿಮೆ ಮಾಡಬಹುದು.
- ನಗ್ ನಗ್ತಾ ಪರೀಕ್ಷೆಗೆ ತಯಾರಿ ನಡೆಸಿದರೆ ಮಾತ್ರ ಉತ್ತಮ ಅಂಕ ಗಳಿಸುವಲ್ಲಿ ನೆರವಾಗುತ್ತದೆ. ಸಂತೋಷದಿಂದ ಓದಿದ್ದು ಮನದಲ್ಲಿ ಉಳಿಯಲಿದ್ದು, ಪರೀಕ್ಷಾ ಕೊಠಡಿಯಲ್ಲಿ ಎಲ್ಲವನ್ನೂ ನನೆಪಿಸಿಕೊಳ್ಳಲು ಅನುಕೂಲವಾಗುತ್ತದೆ. ಆತಂಕದ ವಾತಾವರಣದಲ್ಲಿಯೇ ಪರೀಕ್ಷೆ ಬರೆದರೆ ನೆನಪಾಗಬೇಕಾದ ಪದವೂ ಮರೆತು ಹೋಗುತ್ತದೆ. ಪರೀಕ್ಷಾ ಕೊಠಡಿಯಿಂದ ಹೊರ ಬಂದ ಕೂಡಲೇ ಎಲ್ಲವೂ ನೆನಪಾಗುತ್ತದೆ. ಅದಕ್ಕೆ ಒತ್ತಡದಲ್ಲಿರುವ ಇರುವ ಬದಲು, ಸಂತೋಷವಾಗಿದ್ದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಸಾಧ್ಯವಾಗುತ್ತದೆ.
- ಖುಷಿಯಾಗಿರುವುದೇ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಇರುವ ಅತ್ಯುತ್ತಮ ಪರಿಹಾರ. ಪರೀಕ್ಷೆಯೇ ಜೀವನದ ಯಶಸ್ಸಿನ ಮಂತ್ರವಲ್ಲ. ಕ್ಲಾಸಿನಲ್ಲಿ ಕಲಿತದ್ದನ್ನು ಅಭಿವ್ಯಕ್ತಗೊಳಿಸಲು ಮಾತ್ರ ಪರೀಕ್ಷೆ ವೇದಿಕೆಯೇ ಹೊರತು, ಅದು ಜೀವನದ ಸಂತೋಷಕ್ಕೂ ಕಾರಣವಾಗುವ ಅಸ್ತ್ರವಲ್ಲವೆಂಬುವುದು ನೆನಪಿರಲಿ.
- ಅಂಕವೇ ಪ್ರಮುಖ ಮಾನದಂಡವಾಗಿದೆ. ಇದರಿಂದ ಪರೀಕ್ಷಾ ಕೇಂದ್ರಿತ ಶಿಕ್ಷಣವಾಗಿದೆ. ಇದರಿಂದ ಹೊರ ಬರುವುದು ಹೇಗೆಂಬ ಪ್ರಶ್ನೆಗೆ, ಶಿಕ್ಷಣವೆಂದರೆ ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು. ಸೂಕ್ತ ಗುರಿಯೊಂದಿಗೆ ಜೀವನದಲ್ಲಿ ಮುಂದುವರಿಯಬೇಕು. ಆಗ ಮಾತ್ರ ಕಲಿತ ಪಾಠ ಜೀವನದಲ್ಲಿ ಉಪಯೋಗಕ್ಕೆ ಬರುತ್ತೆ. ನಿಮ್ಮ ಸಂಕಲ್ಪ ಶಕ್ತಿ ಜೀವನಕ್ಕೆ ಅತ್ಯಗತ್ಯ. ನಾವು ಯಾವತ್ತೂ ವೈದ್ಯರ ಸೇವೆ ಪಡೆಯುತ್ತೇವೆ ಹೊರತು, ಅವರು ಪಡೆದ ಮಾರ್ಕ್ ಶೀಟ್ ಕೇಳೋಲ್ಲ. ಶಿಕ್ಷಣದ ಮೂಲಕ ಪಡೆದ ಜ್ಞಾನ ಮಾತ್ರ ಸದಾ ಮನುಷ್ಯನ ನೆರವಿಗೆ ಬರುತ್ತೆ ಹೊರತು, ಪಡೆದ ಅಂಕವಲ್ಲವೆಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು. ಅಂಕದ ಹಿಂದೆ ಬಿದ್ದರೆ ಮಾತ್ರ ಅದನ್ನು ಪಡೆಯಲು ಬೇರೆ ರಸ್ತೆ ನೋಡಿಕೊಳ್ಳುತ್ತೇವೆ. ಅಂಕದ ಮೇಲೆ ಗಮನಿಸಿದರೆ ಮಾತ್ರ, ನಿಮಗೆ ನೀವು ಗಡಿ ಹಾಕಿಕೊಳ್ಳುತ್ತೀರಿ.
- ಜೀವನದಲ್ಲಿ ಮುಂದೆ ಬರಬೇಕಾದರೆ ಪ್ರತಿಸ್ಪರ್ಧೆಗಿಂತ, ನಮ್ಮೊಂದಿಗೆ ನಾವು ಸ್ಪರ್ಧೆಗಿಳಿಯುವುದು ಅತ್ಯಗತ್ಯ. ನಿಮ್ಮ ದಿನವನ್ನು ನಿನ್ನೆಗಿಂತ ಇಂದು ಹೇಗೆ ಅತ್ಯುತ್ತಮ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಜೀವನದ ಯಶಸ್ಸು ಅವಲಂಬಿತವಾಗಿರುತ್ತದೆ. ಸಚಿನ್ ತೆಂಡೂಲ್ಕರ್ ಅವರಂಥವರು ಅವರಿಗೆ ಅವರೇ ಸ್ಪರ್ಧೆ ಒಡ್ಡಿಕೊಂಡಿದ್ದರಿಂದ, ಅವರ ದಾಖಲೆಗಳನ್ನೇ ಮುರಿದು, ಕ್ರಿಕೆಟ್ ದಂತೆಕಥೆಯಾದರು.
- ಆತ್ಮ ಮಂಥನ, ಆತ್ಮ ಚಿಂತನೆಗೆ ಕಾರಣವಾಗುವ ನಿಮ್ಮೊಂದಿಗಿನ ನಿಮ್ಮ ಸ್ಪರ್ಧೆ ಜೀವನದಲ್ಲಿ ಬರುವ ಕಗ್ಗಂಟುಗಳನ್ನು ಬಿಡಿಸಲು ಅನುಕೂಲವಾಗುತ್ತದೆ. ನೀವು ನಿಜವಾಗಲೂ ಪ್ರತಿಭಾಶಾಲಿಗಳಾಗಿದ್ದರೆ ಅತೀವ ಆತ್ಮವಿಶ್ವಾಸಿಗಳಾಗುತ್ತೀರಿ. ಇಲ್ಲವೋ ಆತ್ಮವಿಶ್ವಾಸ ಗಳಿಸಲು ಏನು ಮಾಡಬೇಕೋ ಅದನ್ನು ಮಾಡಬೇಕು. ಆಂತರಿಕವಾಗಿ ನಾವು ಬೆಳೀತಾ ಹೋದಲ್ಲಿ ಮಾತ್ರ ಯಶಸ್ಸು ನಮ್ಮದಾಗುತ್ತದೆ.
- ಮಕ್ಕಳನ್ನು ಕಲಿಯಲು, ಸ್ವೀಕರಿಸಲು ಪೋಷಕರು ಅನುವು ಮಾಡಿಕೊಳ್ಳಬೇಕು. ಪೋಷಕರ ಸಿಕ್ಕಾಪಟ್ಟೆ ನಿರೀಕ್ಷೆಯಿಂದ ಮಕ್ಕಳ ಮನಸು ಕಮರುತ್ತದೆ. ಪೋಷಕರ ನಿರೀಕ್ಷೆ ಮಕ್ಕಳ ಶಾಲಾ ಬ್ಯಾಗ್ಗಿಂತಲೂ ಭಾರವಾಗಿರುವುದರಿಂದ ಮಕ್ಕಳ ವಿಶ್ವಾಸವೇ ಕುಂದುತ್ತಿದೆ.
- ಪರೀಕ್ಷೆ ಟೈಮಲ್ಲೂ ಆಡೋದನ್ನು ಬಿಡಬೇಡಿ. ಮನಸ್ಸು ಖುಷಿಯಾಗಿದ್ದರೆ ಮಾತ್ರ ಕಲಿತದ್ದನ್ನು ಮನನ ಮಾಡಿಕೊಳ್ಳಲು ಸುಲಭವಾಗುತ್ತದೆ. ಓದಿನ ಮೇಲೆ ಮನಸ್ಸನ್ನು ಕೇಂದ್ರಿಕರಿಸಲು ಸಾಧ್ಯವಾಗುತ್ತದೆ. ಆಡುತ್ತಲೇ, ಕಲಿಯಿರಿ. ಶರೀರ, ಮನಸ್ಸು ಶಕ್ತಿಯುತವಾಗಿಡಲು ಆಟವಾಡಿ.