ಆ್ಯಪ್ನಗರ

ರಕ್ತ ವಾಂತಿ ಮಾಡಿಕೊಂಡ ಮನೋಹರ್ ಪರಿಕ್ಕರ್

'ನಾನು ಪರಿಕ್ಕರ್ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಪ್ರಮೋದ್ ಅವರನ್ನು ಭೇಟಿಯಾದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರೇ ಹೇಳಿದ್ದಾರೆ. ಎದೆಯ ಸೋಂಕು ಪತ್ತೆಯಾಗಿಲ್ಲ. ಆದರೆ ಸ್ವಲ್ಪ ರಕ್ತ ವಾಂತಿ ಮಾಡಿದ್ದಾರೆ. ಅವರ ಆರೋಗ್ಯದ ಮಾನದಂಡಗಳೆಲ್ಲವೂ ತೃಪ್ತಿಕರವಾಗಿವೆ. ಆವರು ಸಕ್ರಿಯವಾಗಿ ಮತ್ತು ಜಾಗೃತರಾಗಿ ಇದ್ದಾರೆ,' ಎಂದು ಸಾವಂತ್ ತಿಳಿಸಿದ್ದಾರೆ.

TIMESOFINDIA.COM 26 Feb 2019, 10:41 am
ಪಣಜಿ: ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸೋಮವಾರ ರಕ್ತದ ವಾಂತಿ ಮಾಡಿಕೊಂಡಿದ್ದಾರೆ. ಆದರೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಾಜ್ಯ ಸರಕಾರದ ವಕ್ತಾರ ಪ್ರಮೋದ್ ಸಾವಂತ್ ಹೇಳಿದ್ದಾರೆ.
Vijaya Karnataka Web Manohar Parikkar


'ನಾನು ಪರಿಕ್ಕರ್ ಮತ್ತು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಪ್ರಮೋದ್ ಅವರನ್ನು ಭೇಟಿಯಾದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರೇ ಹೇಳಿದ್ದಾರೆ. ಎದೆಯ ಸೋಂಕು ಪತ್ತೆಯಾಗಿಲ್ಲ. ಆದರೆ ಸ್ವಲ್ಪ ರಕ್ತ ವಾಂತಿ ಮಾಡಿದ್ದಾರೆ. ಅವರ ಆರೋಗ್ಯದ ಮಾನದಂಡಗಳೆಲ್ಲವೂ ತೃಪ್ತಿಕರವಾಗಿವೆ. ಆವರು ಸಕ್ರಿಯವಾಗಿ ಮತ್ತು ಜಾಗೃತರಾಗಿ ಇದ್ದಾರೆ,' ಎಂದು ಸಾವಂತ್ ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಕೂಡ ಎರಡು ದಿನಗಳ ಹಿಂದೆ ಪರಿಕ್ಕರ್ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದರು. ನಾನು ಪರಿಕ್ಕರ್ ಅವರ ಜತೆ ಮಾತನಾಡಿದ್ದೇನೆ. ಅವರು ಚೆಕ್ ಅಪ್‌ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ನಾಳೆ ಮನೆಗೆ ಮರಳಲಿದ್ದಾರೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ರಾಣೆ ತಿಳಿಸಿದ್ದರು.

ಶನಿವಾರ ತಡ ರಾತ್ರಿ ಪರಿಕ್ಕರ್ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು.

ಕಳೆದ ವರ್ಷ ಫೆಬ್ರವರಿಯಲ್ಲಿ ಪರಿಕ್ಕರ್‌‌ಗೆ ಕ್ಯಾನ್ಸರ್ ಕಾಯಿಲೆ ಇದೆ ಎಂಬುದು ಪತ್ತೆಯಾಗಿತ್ತು. ಬಳಿಕ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಗೋವಾ, ಮುಂಬಯಿ, ಅಮೆರಿಕಾ ಮತ್ತು ದಿಲ್ಲಿಯಲ್ಲಿ ಚಿಕಿತ್ಸೆ ಪಡೆದ ಬಳಿಕ ನಿವಾಸಕ್ಕೆ ಮರಳಿ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದೆರಡು ದಿನಗಳ ಹಿಂದೆ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದರು. ದಿಲ್ಲಿಯ ಏಮ್ಸ್ ವೈದ್ಯರ ತಂಡ ಭಾನುವಾರ ಗೋವಾಕ್ಕೆ ಆಗಮಿಸಿದ್ದು, ಚಿಕಿತ್ಸೆ ಜಾರಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ