ಆ್ಯಪ್ನಗರ

ಅಸ್ವಸ್ಥಗೊಂಡ ನನ್ನನ್ನು ಭೇಟಿ ಮಾಡಿ ರಾಜಕೀಯ ಲಾಭ ಗಳಿಸಿಕೊಳ್ಳುತ್ತಿರುವ ಅವಕಾಶವಾದಿ ರಾಹುಲ್‌: ಪರಿಕ್ಕರ್‌

ಅಸ್ವಸ್ಥ ವ್ಯಕ್ತಿಯನ್ನು ಭೇಟಿ ಮಾಡಿ, ಅದರಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಅವಕಾಶವಾದಿ ರಾಹುಲ್‌, ನಿಮ್ಮ ನಡೆ ಮೊದಲೇ ಅಸ್ವಸ್ಥಗೊಂಡಿರುವ ನನೆಗೆ ಮತ್ತಷ್ಟು ಬೇಸರ ತರಿಸಿದೆ ಎಂದು ಮನೋಹರ್ ಪರಿಕ್ಕರ್‌ ತಿಳಿಸಿದ್ದಾರೆ.

Vijaya Karnataka Web 30 Jan 2019, 4:55 pm
ಗೋವಾ: ರಫೇಲ್‌ ವಿವಾದ ಕುರಿತು ಆಗಿನ ರಕ್ಷಣಾ ಸಚಿವ, ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಹಲವಾರು ವಿಷಯಗಳನ್ನು ಹಂಚಿಕೊಂಡರು ಎಂದು ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿಗೆ ಮನೋಹರ್ ಪರಿಕ್ಕರ್ ತಿರುಗೇಟು ನೀಡಿದ್ದಾರೆ.
Vijaya Karnataka Web ರಾಹುಲ್‌ ಗಾಂಧಿ, ಮನೋಹರ್‌ ಪರಿಕ್ಕರ್‌
ರಾಹುಲ್‌ ಗಾಂಧಿ, ಮನೋಹರ್‌ ಪರಿಕ್ಕರ್‌


ತೀವ್ರ ಅನಾರೋಗ್ಯಕ್ಕೊಳಗಾಗಿರುವ ಮನೋಹರ್‌ ಪರಿಕ್ಕರ್‌ ಅವರನ್ನು ಮಂಗಳವಾರ ಭೇಟಿ ಮಾಡಿದ ರಾಹುಲ್‌ ಗಾಂಧಿ, ಕುಶಲ ವಿಚಾರಿಸಿದರು.

ನಂತರ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್‌ ಗಾಂಧಿ, ರಫೇಲ್‌ ವಿವಾದ ಕುರಿತು ಮನೋಹರ್‌ ಪರಿಕ್ಕರ್‌ ನನ್ನ ಜತೆ ಚರ್ಚಿಸಿದ್ದರು ಎಂದು ಹೇಳಿಕೆ ನೀಡಿದ್ದರು.


ಇದಕ್ಕೆ ಪತ್ರದ ಮೂಲಕ ಪ್ರತ್ಯುತ್ತರ ನೀಡಿರುವ ಮನೋಹರ್‌ ಪರಿಕ್ಕರ್‌, ಜೀವ ಹಿಂಡುವ ಕಾಯಿಲೆಯಿಂದ ಬಳಲುತ್ತಿರುವ ನನ್ನನ್ನು ಭೇಟಿ ಮಾಡಿ, ಕುಶಲ ವಿಚಾರಿಸಿದ ನಂತರ ಮಾಧ್ಯಮಗಳ ಮುಂದೆ ಬೇರೆಯದೇ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ, ನೀವು ಅತ್ಯಂತ ಕೀಳಮಟ್ಟಕ್ಕೆ ಇಳಿದಿದ್ದೀರಾ ಎಂದು ಸ್ಪಷ್ಟಪಡಿಸಿದ್ದಾರೆ.

ಅಸ್ವಸ್ಥ ವ್ಯಕ್ತಿಯನ್ನು ಭೇಟಿ ಮಾಡಿ, ಅದರಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಅವಕಾಶವಾದಿ ರಾಹುಲ್‌, ನಿಮ್ಮ ನಡೆ ಮೊದಲೇ ಅಸ್ವಸ್ಥಗೊಂಡಿರುವ ನನೆಗೆ ಮತ್ತಷ್ಟು ಬೇಸರ ತರಿಸಿದೆ ಎಂದು ಪತ್ರದಲ್ಲಿ ಪರಿಕ್ಕರ್‌ ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ