ಆ್ಯಪ್ನಗರ

ಮೊದಲ ಪತ್ನಿಯ ಮಕ್ಕಳ ಸಹಾಯದಿಂದ 3ನೇ ಪತ್ನಿಯನ್ನು ಕೊಂದ ಎರಡನೇ ಪತ್ನಿ

ಕಳೆದ ಒಂದು ವರ್ಷದ ಹಿಂದೆ ಸುಶೀಲ್ ಮೂರನೇ ಮದುವೆಯಾಗಿದ್ದ. ವಿವಾಹವಾದ ಕೆಲ ದಿನಗಳ ಬಳಿಕ ತನ್ನ ಮೊದಲ ಪತ್ನಿ ಮಕ್ಕಳು ಮತ್ತು ಎರಡನೇ ಪತ್ನಿಯನ್ನು ಬಿಟ್ಟು ಮೂರನೆಯವಳೊಂದಿಗೆ ವಾಸಿಸಲು ಆರಂಭಿಸಿದ್ದ. ವರದಿಗಳ ಪ್ರಕಾರ ಸುಶೀಲ್ ತನ್ನ ಎರಡನೇ ಪತ್ನಿಗೆ ಮತ್ತು ಮೊದಲ ಪತ್ನಿಯ ಮಕ್ಕಳಿಗೆ ಆರ್ಥಿಕ ಬೆಂಬಲವನ್ನು ನೀಡುತ್ತಿರಲಿಲ್ಲ.

Indiatimes 8 Mar 2019, 12:19 pm
ಮುಂಬಯಿ: ಇದು ನೀವೆಂದೂ ಕೇಳದ ಕೊಲೆ ಕಹಾನಿ. 32 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯ ಮೊದಲನೇ ಪತ್ನಿಯ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಸಹಾಯದಿಂದ ಮೂರನೇ ಪತ್ನಿಯನ್ನು ಕೊಂದ ಬೆಚ್ಚಿ ಬೀಳಿಸುವ ಘಟನೆ ವಾಣಿಜ್ಯ ನಗರಿ ಮುಂಬಯಿಯಲ್ಲಿ ನಡೆದಿದೆ. ಮೃತ ಮಹಿಳೆ ಯೋಗಿತಾ ದೇವ್ರೆ ( 35) ಶವ ಮಾರ್ಚ್ 1 ರಂದು ನೆಲಸೋಪಾರದಲ್ಲಿ ಪತ್ತೆಯಾಗಿತ್ತು.
Vijaya Karnataka Web Arrest


ಮುಖ್ಯ ಆರೋಪಿ ಪಾರ್ವತಿ ಮಾನೆಯನ್ನು ಪೊಲೀಸರು ಬಂಧಿಸಿದ್ದು , ಆಕೆ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಸುಶೀಲ್ ಮಿಶ್ರಾ (45) ಎರಡನೇ ಪತ್ನಿಯಾಗಿದ್ದಾಳೆ. ಪಾರ್ವತಿ ತನ್ನ ಪತಿಯ ಮೊದಲ ಪತ್ನಿಯ ಮಕ್ಕಳೊಂದಿಗೆ ಉತ್ತರ ಪ್ರದೇಶದಲ್ಲಿ ವಾಸಿಸುತಿದ್ದಳು.

ಕಳೆದ ಒಂದು ವರ್ಷದ ಹಿಂದೆ ಸುಶೀಲ್ ಮೂರನೇ ಮದುವೆಯಾಗಿದ್ದ. ವಿವಾಹವಾದ ಕೆಲ ದಿನಗಳ ಬಳಿಕ ತನ್ನ ಮೊದಲ ಪತ್ನಿ ಮಕ್ಕಳು ಮತ್ತು ಎರಡನೇ ಪತ್ನಿಯನ್ನು ಬಿಟ್ಟು ಮೂರನೆಯವಳೊಂದಿಗೆ ವಾಸಿಸಲು ಆರಂಭಿಸಿದ್ದ. ವರದಿಗಳ ಪ್ರಕಾರ ಸುಶೀಲ್ ತನ್ನ ಎರಡನೇ ಪತ್ನಿಗೆ ಮತ್ತು ಮೊದಲ ಪತ್ನಿಯ ಮಕ್ಕಳಿಗೆ ಆರ್ಥಿಕ ಬೆಂಬಲವನ್ನು ನೀಡುತ್ತಿರಲಿಲ್ಲ.

ನಮ್ಮ ಜೀವನೋಪಾಯಕ್ಕೆ ಪತಿ ಆಸರೆಯಾಗಿರಲಿಲ್ಲ. ನನ್ನ ಜತೆ ದೈಹಿಕ ಸಂಬಂಧಕ್ಕೆ ಕೂಡ ನಿರಾಕರಿಸಿದ್ದ. ಅಷ್ಟೇ ಅಲ್ಲ , ಮೂರನೇ ಪತ್ನಿಯ ಎದುರು ನನ್ನನ್ನು ಅವಮಾನಿಸಿದ್ದ. ಹೀಗಾಗಿ ಆಕೆಯನ್ನು ಹತ್ಯೆಗೈದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ.

ಶುಕ್ರವಾರ ದಿನ ಸುಶೀಲ್ ಮದುವೆಯಲ್ಲಿ ಪಾಲ್ಗೊಳ್ಳಲು ಅಹಮದಾಬಾದ್‌ಗೆ ತೆರಳಿದ್ದ. ಆಗ ಆತನ ಮನೆಗೆ ಬಳಿ ಬಂದ ಪಾರ್ವತಿ ಮತ್ತು ಆಕೆಯ ಮಲ ಮಕ್ಕಳು ಸೆಕ್ಯೂರಿಟಿ ಗಾರ್ಡ್‌ಗೆ ಮದ್ಯ ಕುಡಿಸಿ ನಕಲಿ ಕೀ ಬಳಸಿ ಮನೆಗೆ ನುಗ್ಗಿದ್ದಾರೆ. ಕೋಣೆಯೊಳಗೆ ಮಲಗಿದ್ದ ಯೋಗಿತಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ಬಳಿಕ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ನೀರಜ್ ಮಿಶ್ರಾ ( ಮಲಮಗಳ ಪ್ರಿಯಕರ) ಯೋಗಿತಾಗೆ ಆರೋಗ್ಯ ಸರಿ ಇಲ್ಲ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯ ಬೇಕೆಂದು ಹೇಳಿದ್ದಾರೆ.

ಸತ್ತಿದ್ದಾಳೆ ಎಂಬ ಅರಿವಿಲ್ಲದೇ ನೀರಜ್ ರಿಕ್ಷಾದಲ್ಲಿ ಯೋಗಿತಾ ದೇಹವನ್ನು ಸಾಗಿಸಲು ಸಹಾಯ ಮಾಡಿದ್ದಾನೆ. ನಿರ್ಜನ ಪ್ರದೇಶದಲ್ಲಿ ರಿಕ್ಷಾ ನಿಲ್ಲಿಸಲು ಹೇಳಿದ ಮೂವರು ಆಸ್ಪತ್ರೆಯನ್ನು ಹುಡುಕಲು ಸಮಯವಾಗುತ್ತದೆ. ನೀನು ಹೋಗು ಎಂದು ಕಳುಹಿಸಿ ದೇಹವನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ