ಆ್ಯಪ್ನಗರ

ಚಿಕಿತ್ಸೆ ನೆಪದಲ್ಲಿ ಯುವತಿಗೆ ಸಗಣಿ ತಿನ್ನಿಸಿದ ಮಾಂತ್ರಿಕ!

ಕಾಯಿಲೆಯಿಂದ ಬಳಲುತಿದ್ದ ಯುವತಿಯೊಬ್ಬಳಿಗೆ ಮಾಂತ್ರಿಕನೊಬ್ಬ ಬಲವಂತವಾಗಿ ಸಗಣಿ ತಿನ್ನಿಸಿದ ಅಮಾನವೀಯ ಕೃತ್ಯ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.

Pune Mirror 15 Jun 2017, 3:43 pm
ಲಾತೂರ್: ಕಾಯಿಲೆಯಿಂದ ಬಳಲುತಿದ್ದ ಯುವತಿಯೊಬ್ಬಳಿಗೆ ಔಷಧಿ ನೀಡುವ ನೆಪದಲ್ಲಿ ಮಾಂತ್ರಿಕನೊಬ್ಬ ಬಲವಂತವಾಗಿ ಸಗಣಿ ತಿನ್ನಿಸಿದ ಅಮಾನವೀಯ ಕೃತ್ಯ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ.
Vijaya Karnataka Web mantrik nabbed after feeding cow dung treatment to teen
ಚಿಕಿತ್ಸೆ ನೆಪದಲ್ಲಿ ಯುವತಿಗೆ ಸಗಣಿ ತಿನ್ನಿಸಿದ ಮಾಂತ್ರಿಕ!


ಮಾಂತ್ರಿಕ ಬಲವಂತವಾಗಿ ಯುವತಿಗೆ ಸಗಣಿ ತಿನ್ನಿಸುತ್ತಿರುವ ವೀಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮಾಟ ಮಂತ್ರ ನಿಷೇಧ ಕಾಯಿದೆ ಅಡಿಯಲ್ಲಿ ಯುವತಿಯ ತಂದೆ ಹಾಗೂ ಕರ್ನಾಟಕ ಮೂಲದ ಮಾಂತ್ರಿಕ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಮಾಂತ್ರಿಕ ಪ್ರಭಾಕರ್ ಕೆಸಳೆ (35), ಗಂಗಾಧರ್ ಭಾಗೋಜಿ ಶೆವಾಳೆ (65), ಪಂಡಿತ್ ಕೋರೆ (37), ದಗಡು ಗಂಗಾಧರ ಶೆವಾಳೆ (40) ಹಾಗೂ ಕುಲುಬೈ ಮಾಧವ್ ಕೋರೆ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.

ಪದವಿ ವ್ಯಾಸಂಗ ಮಾಡುತ್ತಿರುವ 18 ವರ್ಷದ ಯುವತಿ ದೀರ್ಘಕಾಲದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ಜೂನ್ 4 ರಂದು ಬೀದರ್‌ ಜಿಲ್ಲೆಗೆ ಕರೆದೊಯ್ದಿದ್ದರು. ಮೂರ್ಛೆರೋಗದಿಂದ ಬಳಲುತ್ತಿದ್ದ ಅದೇ ಗ್ರಾಮದ ಮತ್ತೊಬ್ಬ ಮಹಿಳೆಯನ್ನು ಸಹ ಕರೆದುಕೊಂಡು ಬಂದಿದ್ದರು.

ಯುವತಿಯನ್ನು ಅಮಾನುಷವಾಗಿ ಥಳಿಸಿದ್ದಲ್ಲದೆ, ಬಲವಂತವಾಗಿ ಸಗಣಿ ತಿನಿಸಿದ್ದರು. ಮಂತ್ರವಾದಿ ನೀಡುತ್ತಿರುವ ಚಿಕಿತ್ಸೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ದುರುಳರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮೂಲ ಸುದ್ದಿ ಪುಣೆ ಮಿರರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ