ಆ್ಯಪ್ನಗರ

ಪ್ರಧಾನಿ ಮೋದಿ ತಲೆ ಕಡಿಯಲು ಬಿಹಾರಿಗಳು ಸಿದ್ಧ ಎಂದ ರಾಬ್ಡಿ

ಬಿಹಾರದಲ್ಲಿ ಅನೇಕ ಮಂದಿ ಪ್ರಧಾನಿ ನರೇಂದ್ರ ಮೋದಿಯವರ ಕತ್ತು ಸೀಳಲು ಮತ್ತು ಕೈ ಕತ್ತರಿಸಲು ಸಿದ್ಧರಾಗಿದ್ದಾರೆ ಎಂದು ಹೇಳುವ ಮೂಲಕ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ವಿವಾದ ಸೃಷ್ಟಿಸಿದ್ದಾರೆ.

Vijaya Karnataka 22 Nov 2017, 10:06 pm

ಪಟನಾ: ಬಿಹಾರದಲ್ಲಿ ಅನೇಕ ಮಂದಿ ಪ್ರಧಾನಿ ನರೇಂದ್ರ ಮೋದಿಯವರ ಕತ್ತು ಸೀಳಲು ಮತ್ತು ಕೈ ಕತ್ತರಿಸಲು ಸಿದ್ಧರಾಗಿದ್ದಾರೆ ಎಂದು ಹೇಳುವ ಮೂಲಕ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ.

Vijaya Karnataka Web many in bihar ready to slit pm modis throat chop off his hand rabri devi
ಪ್ರಧಾನಿ ಮೋದಿ ತಲೆ ಕಡಿಯಲು ಬಿಹಾರಿಗಳು ಸಿದ್ಧ ಎಂದ ರಾಬ್ಡಿ


ಪ್ರಧಾನಿ ಮೋದಿಯವರನ್ನು ಯಾರಾದರೂ ಟೀಕಿಸಿದರೆ ಅವರ ಬೆರಳು ಮತ್ತು ಕೈಯನ್ನು ಕತ್ತರಿಸುವುದಾಗಿ ಬಿಹಾರದ ಬಿಜೆಪಿ ಮುಖ್ಯಸ್ಥ ನಿತ್ಯಾನಂದ ರಾಯ… ಹೇಳಿಕೆ ನೀಡಿದ್ದ ಬೆನ್ನಲ್ಲೇ ಆರ್‌ಜೆಡಿ ನಾಯಕಿಯೂ ಆಗಿರುವ ರಾಬ್ಡಿ ದೇವಿ, ಮೋದಿ ತಲೆ ಕಡಿಯುವ ಮಾತುಗಳನ್ನಾಡಿ, ಕೇಸರಿ ಪಾಳಯವನ್ನು ಕೆಣಕಿದ್ದಾರೆ.

ಆರ್‌ಜೆಡಿಯ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷ ದ ವರಿಷ್ಠ ಲಾಲೂ ಪ್ರಸಾದ್‌ ಯಾದವ್‌ ಅವರನ್ನು 10ನೇ ಬಾರಿ ರಾಷ್ಟ್ರೀಯ ಅಧ್ಯಕ್ಷ ರನ್ನಾಗಿ ಆಯ್ಕೆ ಮಾಡಿದ ಸಂದರ್ಭ ಮಾತನಾಡಿದ ರಾಬ್ಡಿ ದೇವಿ, ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

''ಮೋದಿಯವರ ಕಡೆ ಬೊಟ್ಟ ಮಾಡಿದರೆ ಅವರ ಬೆರಳು ಮತ್ತು ಕೈಯನ್ನು ಕತ್ತರಿಸುವುದಾಗಿ ಬಿಜೆಪಿಯ ಕೆಲವು ಮುಖಂಡರು ಹೇಳುತ್ತಿದ್ದಾರೆ. ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ಆ ಕೆಲಸ ಮಾಡಲಿ,'' ಎಂದು ಸವಾಲು ಹಾಕಿದರು.

''ಬಿಹಾರದ ಜನರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ತಮ್ಮ ಕೈಯನ್ನು ಕತ್ತರಿಸಲು ಬಂದವರ ಕೈಗಳನ್ನು ಕಡಿದು ಹಾಕಲು ಕಾದು ಕುಳಿತಿದ್ದಾರೆ. ಮೇಲಾಗಿ ಪ್ರಧಾನಿಯ ತಲೆ ಕತ್ತರಿಸಲೂ ಅನೇಕರು ಸಿದ್ಧರಿದ್ದಾರೆ,'' ಎಂದು ಹೇಳಿದರು.

Many in Bihar ready to slit PM Modi's throat, chop off his hand: Rabri Devi

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ