ಆ್ಯಪ್ನಗರ

ಟ್ರೈನ್ ಲೇಟಾಗಿ ಬಂದಿದ್ದಕ್ಕೆ ಹಲವರು ಬಚಾವ್ !

ದೇಶದಲ್ಲಿ ಬಡತನ, ನಿರುದ್ಯೋಗ ಎಷ್ಟರ ಮಟ್ಟಿಗೆ ಇದೆ ಅನ್ನುವುದಕ್ಕೆ ಈ ಸ್ಟೋರಿ ಉತ್ತಮ ಉದಾಹರಣೆ. ಉತ್ತರ ಪ್ರದೇಶದ ಮದೌಲಿ ಎಂಬ ಗ್ರಾಮದಿಂದ ಪ್ರತಿನಿತ್ಯ 400 ರಿಂದ 500 ಜನರು ಕೆಲಸ ಹುಡುಕಿಕೊಂಡು ರೈಲಿನಲ್ಲಿ ಕಾನ್ಪುರಕ್ಕೆ ಹೋಗುತ್ತಾರೆ. ಆದರೆ, ರೈಲು ವಿಳಂಬವಾಗಿದ್ದಕ್ಕೆ ಗ್ರಾಮಸ್ಥರ ಹಲವು ಜೀವಗಳು ಉಳಿದಿವೆ.

Navbharat Times 21 May 2018, 2:56 pm
ಕಾನ್ಪುರ: ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗಿದೆ. ಇದೇ ರೀತಿ ಉತ್ತರ ಪ್ರದೇಶದ ಮದೌಲಿ ಎಂಬ ಗ್ರಾಮದಿಂದ ಪ್ರತಿನಿತ್ಯ 400 ರಿಂದ 500 ಜನರು ಕೆಲಸ ಹುಡುಕಿಕೊಂಡು ರೈಲಿನಲ್ಲಿ ಕಾನ್ಪುರಕ್ಕೆ ಹೋಗುತ್ತಾರೆ. ಆದರೆ, ರೈಲು ವಿಳಂಬವಾಗಿದ್ದಕ್ಕೆ ಗ್ರಾಮಸ್ಥರ ಹಲವು ಜೀವಗಳು ಉಳಿದಿವೆ.
Vijaya Karnataka Web Kanpur Village


ದೆಹಲಿ - ಹೌರಾ ರೈಲು ಮಾರ್ಗದ ನಡುವೆ ಮದೌಲಿ ಎಂಬ ಗ್ರಾಮದಲ್ಲಿ ಬಡತನ , ನಿರುದ್ಯೋಗ ಹೆಚ್ಚಿದೆ. ಹೀಗಾಗಿ, ಪ್ರತಿದಿನ 400 ರಿಂದ 500 ಗ್ರಾಮಸ್ಥರು ಇಲ್ಲಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಕಾನ್ಪುರಕ್ಕೆ ಉದ್ಯೋಗ ಅರಸಿ ಪ್ಯಾಸೆಂಜರ್ ರೈಲಿನಲ್ಲಿ ತೆರಳುತ್ತಾರೆ. ಹಾಗೂ, ಕೆಲಸ ಮಾಡಿ ಸುಸ್ತಾದ ಜನರು ತಮ್ಮ ಊರಿಗೆ ಮರಳಿದಾಗ ಆಯಾಸವನ್ನು ತೊಡೆದುಹಾಕಲು ಮದ್ಯಪಾನ ಮಾಡುತ್ತಾರೆ. ಆದರೆ, ಶನಿವಾರ ರಾತ್ರಿ ರೈಲು ವಿಳಂಬವಾದ ಕಾರಣ ಅವರಿಗೆ ಮದ್ಯ ಸಿಗದೆ ಹಲವರ ಜೀವ ಉಳಿದಿದೆ.

ಮದೌಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅಪ್ರಾಪ್ತ ಬಾಲಕರು ಮದ್ಯ ಬಾಟಲಿಗಳನ್ನು ಮಾರುತ್ತಾರೆಂದು ಸ್ಥಳೀಯರು ದೂರಿದ್ದಾರೆ. ಅಲ್ಲದೆ, ಮದ್ಯದ ಗುಣಮಟ್ಟ ಕಳಪೆಯಾಗಿರುತ್ತದೆ ಎಂದು ಹಲವರು ದೂರು ನೀಡಿದ್ದಾರೆ. ವಿಜಯ್ ನಾರಾಯಣ್ ಎಂಬ ವ್ಯಕ್ತಿ ಶುಕ್ರವಾರ ಕೊಂಡುಕೊಂಡಿದ್ದ ಮದ್ಯವನ್ನು ಶನಿವಾರ ಸೇವಿಸಿ, ಅವರ ಆರೋಗ್ಯ ಹದಗೆಟ್ಟಿದೆ. ಬಳಿಕ ಓಆರ್‌ಎಸ್‌ ಕುಡಿದ ಬಳಿಕ ಸ್ವಲ್ಪ ಆರೋಗ್ಯ ಸುಧಾರಿಸಿದೆ. ಅಲ್ಲದೆ, ರಾಜ ಕುಮಾರ್ ಹಾಗೂ ವಿಜಯ್ ಎಂಬ ಇಬ್ಬರು ಯುವಕರು ಇದೇ ಮದ್ಯವನ್ನು ಸೇವಿಸಿ ನಿಶ್ಯಕ್ತರಾಗಿದ್ದರು ಎಂದು ತಿಳಿದುಬಂದಿದೆ. ನಂತರ ಇಡೀ ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು ಆರೋಗ್ಯ ಸರಿಯಿಲ್ಲದ ಎಲ್ಲರಿಗೂ ಆಸ್ಪತ್ರೆಗೆ ಬರುವಂತೆ ಮಾಹಿತಿ ನೀಡಿದ್ದಾರೆ.

ಇನ್ನು, ಕೆಲವು ದಿನಗಳ ಹಿಂದೆ ಹರಿ ಮಿಶ್ರಾ ಎಂಬಾತನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿರುತ್ತಾಳೆ. ಹೀಗಾಗಿ, ಅವರ ಇಬ್ಬರು ಮಕ್ಕಳನ್ನು ಅಜ್ಜಿ ಹಾಗೂ ಅವರ ತಂದೆ ನೋಡಿಕೊಳ್ಳುತ್ತಿರುತ್ತಾರೆ. ಇದಾದ ಕೆಲವು ದಿನಗಳಲ್ಲಿ ಮದ್ಯಪಾನ ಸೇವಿಸಿ ಹರಿ ಮಿಶ್ರಾ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಅನಾಥರಾಗಿರುತ್ತಾರೆ.

ಇದೇ ರೀತಿ ಮಹೇಂದ್ರ ಕುಶ್ವಾ ಶನಿವಾರ ರಾತ್ರಿ ಮದ್ಯಪಾನ ಸೇವಿಸಿದ ಬಳಿಕ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿದೆ. ನಂತರ, ಆಸ್ಪತ್ರೆಗೆ ಹೋಗಲು ಯಾವುದೇ ವಾಹನಗಳು ದೊರೆಯದೆ ಮೃತಪಟ್ಟಿರುತ್ತಾರೆ. ಇದಕ್ಕೆಲ್ಲ ಅಪ್ರಾಪ್ತ ಬಾಲಕರು ಮಾರುವ ಕಳಪೆ ಮದ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ, ಶನಿವಾರದಂದು ರೈಲು ವಿಳಂಬವಾಗಿದ್ದಕ್ಕೆ ನೂರಾರು ಜನರಿಗೆ ಮದ್ಯಪಾನ ಮಾಡಲು ಸಾಧ್ಯವಾಗದೆ ಹಲವರ ಜೀವಗಳು ಉಳಿದಿವೆ ಎಂದು ಸ್ಥಳೀಯರು ನಿಟ್ಟುಸಿರುಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ