ಆ್ಯಪ್ನಗರ

ದೇಶದಲ್ಲೂ ಹಿಮಪಾತ: ಹಿಮದ ರಾಶಿಯನ್ನು ಹೇಗೆ ತೆರವುಗೊಳಿಸುತ್ತಾರೆ ಗೊತ್ತೇ?

ವಿಂಟರ್ ಸರ್ವಿಸ್ ವೆಹಿಕಲ್ಸ್ ಎಂದು ಕರೆಯಲಾಗುವ ಯಂತ್ರ ಜೋಡಿಸಿರುವ ವಾಹನಗಳು ಹಿಮರಾಶಿಯನ್ನು ತೆರವು ಮಾಡಲು ನೆರವಾಗುತ್ತದೆ. ಹಿಮದ ರಾಶಿಯೇ ಚಂದ, ಅದನ್ನು ತೆರವುಗೊಳಿಸುವ ಪ್ರಕ್ರಿಯೆ ಕೂಡ ನೋಡಲು ಮತ್ತಷ್ಟು ಸುಂದರ..

Vijaya Karnataka Web 22 Jan 2019, 6:16 pm
ಹೊಸದಿಲ್ಲಿ: ದೇಶದ ಪರ್ವತ ಪ್ರದೇಶಗಳಲ್ಲಿ ಹಿಮಪಾತವಾಗುತ್ತಿದೆ. ಡಿಸೆಂಬರ್, ಜನವರಿ ಎಂದರೆ ಹಿಮಪಾತವಾಗುವುದು ಸಾಮಾನ್ಯ. ಜಮ್ಮು-ಕಾಶ್ಮೀರದಲ್ಲಿ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Vijaya Karnataka Web Snowfal


ಈ ಸಂದರ್ಭದಲ್ಲಿ ಹಿಮಾಲಯದಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಹಿಮ ಬೀಳುವುದನ್ನೇ ನೋಡುವುದು ಒಂದು ಚಂದ. ಹಿಮದಿಂದ ಆವೃತ್ತವಾಗಿರುವ ರಸ್ತೆ, ಕಟ್ಟಡ, ಮನೆಗಳನ್ನು ನೋಡಲೆಂದೇ ಪ್ರವಾಸಿಗರು ಅಲ್ಲಿಗೆ ಆಗಮಿಸುತ್ತಾರೆ.

ಹಿಮಪಾತವಾದಾಗ ರಸ್ತೆಯ ಮೇಲೆಲ್ಲ ಬಿದ್ದು, ರಸ್ತೆ ಮುಚ್ಚಿಹೋಗುತ್ತದೆ. ತಾತ್ಕಾಲಿಕ ರಸ್ತೆ ತಡೆ ಉಂಟಾಗುತ್ತದೆ. ಅದನ್ನು ತಡೆಯಲಾಗದು, ಆದರೆ ಹಿಮ ಬೀಳುತ್ತಿದ್ದು, ಅದನ್ನು ಆಗಾಗ ತೆರವುಗೊಳಿಸಲಾಗುತ್ತದೆ. ಮನೆಯಂಗಳದಲ್ಲಾದರೆ ಅದನ್ನು ಜನರೇ ಸ್ವಚ್ಛಗೊಳಿಸುತ್ತಾರೆ.

ಆದರೆ ಪ್ರಮುಖ ರಸ್ತೆಗಳಲ್ಲಿ ಬೃಹತ್ ಯಂತ್ರಗಳ ಮೂಲಕ ಒಮ್ಮೆಲೆ ಹಿಮವನ್ನು ರಾಶಿಯಾಗಿ ಒಯ್ದು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.


ವಿಂಟರ್ ಸರ್ವಿಸ್ ವೆಹಿಕಲ್ಸ್ ಎಂದು ಕರೆಯಲಾಗುವ ಯಂತ್ರ ಜೋಡಿಸಿರುವ ವಾಹನಗಳು ಹಿಮರಾಶಿಯ ತೆರವು ಮಾಡಲು ನೆರವಾಗುತ್ತದೆ. ಹಿಮದ ರಾಶಿಯೇ ಚಂದ, ಅದನ್ನು ತೆರವುಗೊಳಿಸುವ ಪ್ರಕ್ರಿಯೆ ಕೂಡ ನೋಡಲು ಮತ್ತಷ್ಟು ಸುಂದರ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ